Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಂಜಾರ ಸಮುದಾಯದಿಂದ ಐತಿಹಾಸಿಕ ನಿರ್ಧಾರ : ಇನ್ಮುಂದೆ ವರದಕ್ಷಿಣೆ ತೆಗೆದುಕೊಳ್ಳದಂತೆ ಸಮುದಾಯದ ಸ್ವಾಮೀಜಿಗಳಿಂದ ಕರೆ!

BREAKING : ಮುಂಬೈನಲ್ಲಿ ಛಾವಾ ಚಿತ್ರದಲ್ಲಿ ನಟಿಸಿದ್ದ ನಟಿ ಸಂಚಿತ ಉಗಾಳೆ ಆತ್ಮಹತ್ಯೆ ಶರಣು | Sanchita Ugale

BREAKING : ‘ಕುಂಕುಮ ಭಾಗ್ಯ’ ಧಾರಾವಾಹಿಯ ಖ್ಯಾತ ನಟಿ `ಸಂಚಿತಾ ಉಗಾಲೆ’ ಆತ್ಮಹತ್ಯೆ | Actor Sanchita Ugale Suicide

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯ ‘ಸಂಪುಟ ಸರ್ಜರಿ’ ಫಿಕ್ಸ್ : ‘ಶಾಸಕ ಬೇಳೂರು ಗೋಪಾಲಕೃಷ್ಣ’ಗೆ ‘ಸಚಿವ ಸ್ಥಾನ’? | MLA Beluru Gopalakrishna
KARNATAKA

BIG NEWS: ರಾಜ್ಯ ‘ಸಂಪುಟ ಸರ್ಜರಿ’ ಫಿಕ್ಸ್ : ‘ಶಾಸಕ ಬೇಳೂರು ಗೋಪಾಲಕೃಷ್ಣ’ಗೆ ‘ಸಚಿವ ಸ್ಥಾನ’? | MLA Beluru Gopalakrishna

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಸರ್ಜರಿಯಾಗಲಿದೆ. ಸಿಎಂ ಸಿದ್ಧರಾಮಯ್ಯ ಅವರು ತಮ್ಮ ಸಂಪುಟವನ್ನು ಪುನರ್ ರಚಿಸಲಿದ್ದಾರೆ. ಹಾಲಿ ಸಚಿವರಿಗೆ ಕೋಕ್ ನೀಡಿ, ಹೊಸಬರಿಗೆ ಅವಕಾಶ ನೀಡಲಿದ್ದಾರೆ. ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಸಿಎಂ ಸಿದ್ಧರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂಬುದಾಗಿ ಕಾಂಗ್ರೆಸ್ ಉನ್ನತ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರದ ಜನಪ್ರಿಯ, ಈಡಿಗ ಸಮುದಾಯದ ಪ್ರಭಾವಿ ನಾಯಕರಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ಒಬ್ಬರು. ಈಗಾಗಲೇ ಜಿಲ್ಲೆಯಲ್ಲಿ ದೀವರ ಸಮುದಾಯದ ಮಧು ಬಂಗಾರಪ್ಪ ಅವರಿಗೆ ಶಾಲಾ ಶಿಕ್ಷಣ ಸಚಿವ ಸ್ಥಾನವನ್ನು ನೀಡಲಾಗಿದೆ. ಅವರ ಬೆನ್ನಲ್ಲೇ ಸಿದ್ಧರಾಮಯ್ಯ ಸಂಪುಟ ಸರ್ಜರಿಯಾಗಿ, ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೂ ಸಚಿವ ಸ್ಥಾನ ನೀಡೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈಗಾಗಲೇ ಸಚಿವ ಸ್ಥಾನದ ಆಕಾಂಕ್ಷಿಗಳಿಂದ ತೆರೆ ಮರೆಯಲ್ಲಿ ಕಸರತ್ತು ನಡೆಸಲಾಗುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡಿ, ಸಿಎಂ ಸಿದ್ಧರಾಮಯ್ಯ ಸಂಪುಟ ಪುನರಚನೆಯ ನಂತ್ರ, ತಮಗೆ ಸ್ಥಾನ ನೀಡುವಂತೆಯೂ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಸದ್ಯ ರಾಜ್ಯ ಸಚಿವ ಸಂಪುಟ ಸರ್ಜರಿಯ ಮಾತು ಜೋರಾಗಿಯೇ ಕೇಳಿ ಬಂದಿದೆ.

ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಈ ಹಿಂದೆ ನಾನು ಸಚಿವ ಸ್ಥಾನಕ್ಕೆ ಒತ್ತಡ ಹಾಕಿಲ್ಲ. ಬೇಡಿಕೆಯನ್ನು ಇಟ್ಟಿಲ್ಲ ಎನ್ನುತ್ತಲೇ, ಸಚಿವ ಸ್ಥಾನ ನೀಡಿದ್ರೇ ಅದನ್ನು ಯಶಸ್ವಿಯಾಗಿ ನಿಭಾಯಿಸೋದಾಗಿಯೂ ಬಹಿರಂಗ ಹೇಳಿಕೆ ನೀಡಿದ್ದರು. ಈ ಹಿನ್ನಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ರೇಸ್ ನಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ಇದ್ದು, ಅವರ ಹೆಸರು ಕೂಡ ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಜೊತೆಗೆ ಸಂಪುಟ ಸರ್ಜರಿಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ಫಿಕ್ಸ್ ಎಂಬುದು ಸಿದ್ದು ಸಂಪುಟದಲ್ಲಿನ ಹಲವರ ಮಾತಾಗಿದೆ.

ಸದ್ಯ ಸಚಿವ ಸ್ಥಾನದ ಆಕಾಂಕ್ಷಿಗಳು, ಒಂದು ವೇಳೆ ಸಂಪುಟ ಸರ್ಜರಿಯಾದ್ರೆ ಯಾರಿಗೆಲ್ಲ ಸಚಿವ ಸ್ಥಾನ ಸಿಗಲಿದೆ ಎನ್ನುವ ಪಟ್ಟಿಯಲ್ಲಿ ಬೇಳೂರು ಗೋಪಾಲಕೃಷ್ಣ ಅವರ ಹೆಸರು ಮುಂಚೂಣಿಯಲ್ಲಿದೆ. ಈ ಬಗ್ಗೆ ಸಿಎಂ ಸಿದ್ಧರಾಮಯ್ಯ, ಕಾಂಗ್ರೆಸ್ ಹೈಕಮಾಂಡ್ ಕೃಪಾ ಕಟಾಕ್ಷ ಬೀರಿ, ಸಚಿವ ಸ್ಥಾನ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ವರದಿ: ವಸಂತ ಬಿ ಈಶ್ವರಗೆರೆ

BREAKING: ‘ರಾಜ್ಯ ಸರ್ಕಾರಿ ನೌಕರ’ರಿಗೆ ಸಿಹಿಸುದ್ದಿ: ‘ತುಟ್ಟಿ ಭತ್ಯೆ’ಯ ದರಗಳನ್ನು ಪರಿಷ್ಕರಿಸಿ ಸರ್ಕಾರದಿಂದ ಅಧಿಕೃತ ಆದೇಶ

BREAKING : ಚಿತ್ರದುರ್ಗದಲ್ಲಿ ಪ್ರೀತಿಸಿ ಮದುವೆಯಾಗಿದ್ದ ವ್ಯಕ್ತಿಯ ಕೊಲೆ ಕೇಸ್ : 6 ಆರೋಪಿಗಳು ಅರೆಸ್ಟ್!

Share. Facebook Twitter LinkedIn WhatsApp Email

Related Posts

ಬಂಜಾರ ಸಮುದಾಯದಿಂದ ಐತಿಹಾಸಿಕ ನಿರ್ಧಾರ : ಇನ್ಮುಂದೆ ವರದಕ್ಷಿಣೆ ತೆಗೆದುಕೊಳ್ಳದಂತೆ ಸಮುದಾಯದ ಸ್ವಾಮೀಜಿಗಳಿಂದ ಕರೆ!

1 Min Read

ಹುಟ್ಟು ಸಾವಿನ ನಡುವೆ ನಾವು ಸಮಾಜಕ್ಕೆ ಏನು ಕೊಡುಗೆ ನೀಡುತ್ತೇವೆ ಎಂಬುದು ಮುಖ್ಯ : ಸೂರಜ್‌ ಹೆಗ್ಡೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಿಎಂ ಹೇಳಿಕೆ

2 Mins Read

LPG Gas Subsidy: `LPG’ ಗ್ರಾಹಕರೇ ಗಮನಿಸಿ : ಜೂನ್ 30ರೊಳಗೆ ಈ ಕೆಲಸ ಮಾಡದಿದ್ದರೆ ಸಬ್ಸಿಡಿ ಬಂದ್.!

2 Mins Read
Recent News

ಬಂಜಾರ ಸಮುದಾಯದಿಂದ ಐತಿಹಾಸಿಕ ನಿರ್ಧಾರ : ಇನ್ಮುಂದೆ ವರದಕ್ಷಿಣೆ ತೆಗೆದುಕೊಳ್ಳದಂತೆ ಸಮುದಾಯದ ಸ್ವಾಮೀಜಿಗಳಿಂದ ಕರೆ!

BREAKING : ಮುಂಬೈನಲ್ಲಿ ಛಾವಾ ಚಿತ್ರದಲ್ಲಿ ನಟಿಸಿದ್ದ ನಟಿ ಸಂಚಿತ ಉಗಾಳೆ ಆತ್ಮಹತ್ಯೆ ಶರಣು | Sanchita Ugale

BREAKING : ‘ಕುಂಕುಮ ಭಾಗ್ಯ’ ಧಾರಾವಾಹಿಯ ಖ್ಯಾತ ನಟಿ `ಸಂಚಿತಾ ಉಗಾಲೆ’ ಆತ್ಮಹತ್ಯೆ | Actor Sanchita Ugale Suicide

SHOCKING : ಮಹಿಳೆಯರಿಗಿಂತ ಭಾರತೀಯ ಪುರುಷರೇ `ಕ್ಯಾನ್ಸರ್’ಗೆ ಹೆಚ್ಚು ಬಲಿ : ಆಘಾತಕಾರಿ ವರದಿ ಬಹಿರಂಗ.!

State News
KARNATAKA

ಬಂಜಾರ ಸಮುದಾಯದಿಂದ ಐತಿಹಾಸಿಕ ನಿರ್ಧಾರ : ಇನ್ಮುಂದೆ ವರದಕ್ಷಿಣೆ ತೆಗೆದುಕೊಳ್ಳದಂತೆ ಸಮುದಾಯದ ಸ್ವಾಮೀಜಿಗಳಿಂದ ಕರೆ!

By ಸುರೇಶ್‌ KARNATAKA 1 Min Read

ವಿಜಯಪುರ : ಸಾಮಾಜಿಕ ಪಿಡುಗು ವರದಕ್ಷಣೆಗೆ ಬಂಜಾರ ಸಮುದಾಯದಲ್ಲಿ ಇದೀಗ ಬ್ರೇಕ್ ಹಾಕಲಾಗಿದೆ. ಲಂಬಾಣಿ ತಂಡಗಳನ್ನು ವರದಕ್ಷಿಣೆ ಮುಕ್ತ ಮಾಡುವ…

ಹುಟ್ಟು ಸಾವಿನ ನಡುವೆ ನಾವು ಸಮಾಜಕ್ಕೆ ಏನು ಕೊಡುಗೆ ನೀಡುತ್ತೇವೆ ಎಂಬುದು ಮುಖ್ಯ : ಸೂರಜ್‌ ಹೆಗ್ಡೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಿಎಂ ಹೇಳಿಕೆ

LPG Gas Subsidy: `LPG’ ಗ್ರಾಹಕರೇ ಗಮನಿಸಿ : ಜೂನ್ 30ರೊಳಗೆ ಈ ಕೆಲಸ ಮಾಡದಿದ್ದರೆ ಸಬ್ಸಿಡಿ ಬಂದ್.!

ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ : ಮಾಜಿ ಸಿಎಂ ಸಿದ್ದರಾಮಯ್ಯ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.