Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಲ್ಲಿ ಕಾಲ್ತುಳಿತ ದುರಂತ: RCB, KSCA, DNA ಕಂಪನಿ ವಿರುದ್ಧ 3ನೇ FIR ದಾಖಲು

06/06/2025 9:43 PM

ಮಹಿಳೆಯರೇ ಗಮನಿಸಿ ; ತಲೆ ಸ್ನಾನ ಮಾಡಿದ ತಕ್ಷಣ ಇವುಗಳನ್ನ ತಿನ್ನಬೇಡಿ.! ತಿಂದ್ರೆ ನಿಮ್ಗೆ ತೊಂದ್ರೆ

06/06/2025 9:27 PM

BREAKING: ಬೆಂಗಳೂರಲ್ಲಿ ಮೆಟ್ರೋ ಪಿಲ್ಲರ್ ಗೆ ‘BMTC ಬಸ್’ ಡಿಕ್ಕಿ: 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

06/06/2025 9:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರೇಣುಕಾಸ್ವಾಮಿ ಕೊಲೆ ಕೇಸ್ : ನಾಳೆ ನಟ ದರ್ಶನ್ ಮಧ್ಯಂತರ ಜಾಮೀನು ಆದೇಶ ಕಾಯ್ದಿರಿಸಿದ ಹೈಕೋರ್ಟ್
KARNATAKA

BREAKING : ರೇಣುಕಾಸ್ವಾಮಿ ಕೊಲೆ ಕೇಸ್ : ನಾಳೆ ನಟ ದರ್ಶನ್ ಮಧ್ಯಂತರ ಜಾಮೀನು ಆದೇಶ ಕಾಯ್ದಿರಿಸಿದ ಹೈಕೋರ್ಟ್

By kannadanewsnow0529/10/2024 3:42 PM

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಹೈಕೋರ್ಟ್ ನಲ್ಲಿ ನ್ಯಾ.ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠದಲ್ಲಿ ನಟ ದರ್ಶನ್ ಅವರು ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಎಸ್.ವಿಶ್ವಜೀತ್ ಶೆಟ್ಟಿ ಅವರು ನಟ ದರ್ಶನ್ ಜಾಮೀನು ಅರ್ಜಿಯ ಕುರಿತು ನಾಳೆಗೆ ಆದೇಶ ಕಾಯ್ದಿರಿಸಿದರು.

ವಿಚಾರಣೆಯ ವೇಳೆ ದರ್ಶನ್ ಪರ ಹಿರಿಯ ವಕೀಲ ಸಿ ವಿ ನಾಗೇಶ್ ವಾದ ಮಂಡಿಸಿ ದರ್ಶನ್ ಬೆನ್ನುಮೂಳೆ ಹಾಗೂ ಎಂ ಆರ್ ಐ ಸ್ಕ್ಯಾನ್ ಮಾಡಿಸಿದ್ದಾರೆ. ರೋಗಿಗೆ ಬೆನ್ನಿನ ನರದ L5 ಹಾಗೂ S1 ಡಿಸ್ಕ್ ನ್ಯೂನ್ಯತೆ ಕಂಡು ಬಂದಿದೆ. ಅಕ್ಟೋಬರ್ 23ರಂದು ದರ್ಶನ ಜೊತೆಗೆ ಸಮಾಲೋಚಿಸಿ ಶಸ್ತ್ರಚಿಕಿತ್ಸೆಯ ಬಗ್ಗೆ ದರ್ಶನ್ ಗೆ ಮಾಹಿತಿ ನೀಡಲಾಗಿದೆ.

ಶಸ್ತ್ರಚಿಕಿತ್ಸೆಯ ಪರಿಣಾಮಗಳ ಬಗ್ಗೆಯೂ ಕೂಡ ವೈದ್ಯರು ದರ್ಶನ್ ಅವರಿಗೆ ಮಾಹಿತಿ ನೀಡಿದ್ದಾರೆ. ನರದ ತೊಂದರೆಯಿಂದ ಕಾಲಿನಲ್ಲಿ ಸ್ಪರ್ಶ ಶಕ್ತಿ ಕಳೆದುಕೊಳ್ಳುವಂತಾಗಲಿದೆ ಅಲ್ಲದೆ ಮೂತ್ರ ನಿಯಂತ್ರಣದ ಸಮಸ್ಯೆ ಕೂಡ ಕಾಣಿಸಿಕೊಳ್ಳಬಹುದು ಎಂದು A2 ನಟ ದರ್ಶನ್ ಪರವಾಗಿ ಹಿರಿಯ ವಕೀಲ ಸಿ ವಿ ನಾಗೇಶ್ ವಾದಿಸಿದರು.

ಅರ್ಜಿ ವಿಚಾರಣೆಯ ವೇಳೆ ಬೆಂಗಳೂರಲ್ಲಿ ಈ ವ್ಯವಸ್ಥೆ ಇರುವ ಆಸ್ಪತ್ರೆಗಳು ಯಾವುವು ಇದೆ ಎಂದು ನ್ಯಾಯಾಧೀಶರಾದ ವಿಶ್ವಜಿತ್ ಶೆಟ್ಟಿ ಪ್ರಶ್ನಿಸಿದ್ದು, ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರು ಬೆಂಗಳೂರಿನಲ್ಲಿ ವಿಕ್ಟೋರಿಯಾ, ಬೌರಿಂಗ್ ಆಸ್ಪತ್ರೆಯಲ್ಲಿ ಈ ಒಂದು ಚಿಕೆತ್ಸೆಯ ವ್ಯವಸ್ಥೆ ಇದೆ ಎಂದು ಜಡ್ಜ್ ಗೆ ಮನವರಿಕೆ ಮಾಡಿದರು.

ಸುಪ್ರೀಂ ಕೋರ್ಟ್ ನ ಮತ್ತೊಂದು ತೀರ್ಪು ಉಲ್ಲೇಖಿಸಿ ಸಿವಿ ನಾಗೇಶ್ ವಾದ ಮಂಡಿಸಿದ ಸಿವಿ ನಾಗೇಶ್, ರೋಗಿಯ ಪರಿಸ್ಥಿತಿ ಅನುಮಾನಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅನಾರೋಗ್ಯದ ಕಾರಣಕ್ಕೆ ಸುಪ್ರೀಂಕೋರ್ಟ್ ವ್ಯಕ್ತಿಗೆ ಜಾಮೀನು ನೀಡಿದೆ ಹೀಗಾಗಿ ಮಧ್ಯಂತರ ಜಾಮೀನು ನೀಡುವಂತೆ ಮನವಿ ಮಾಡಿದರು.

ಈ ವೇಳೆ ಜಡ್ಜ್ ವಿಶ್ವಜೀತ್ ಶೆಟ್ಟಿ ಅವರು ನೀವು ಹೇಳುತ್ತಿರುವ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಪ್ರಕರಣದಲ್ಲಿ ಮೂರು ವರ್ಷ ಆ ವ್ಯಕ್ತಿ ಜೈಲಿನಲ್ಲಿ ಇದ್ದ ಎಂದು ಹೇಳಿದಾಗ, ವೈದ್ಯಕೀಯ ಕಾರಣಕ್ಕೆ ಜಾಮೀನು ನೀಡಿರುವ ಅನೇಕ ಪ್ರಕರಣಗಳಿವೆ.ಈ ಪ್ರಕರಣವು ಜಾಮೀನು ನೀಡಲು ಅರ್ಹ ಪ್ರಕರಣವಾಗಿದೆ. ಹಾಗಾಗಿ ಮಧ್ಯಂತರ ಜಾಮೀನು ನೀಡುವಂತೆ ಸಿ ವಿ ನಾಗೇಶ್ ಮನವಿ ಮಾಡಿದರು.

ಡಿಕೆ ಶಿವಕುಮಾರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಸಿ ಜಾಮೀನು ಉಲ್ಲೇಖಿ ಸಿಸಿ ನಾಗೇಶ್ ವಾದ ಮಂಡಿಸಿದ್ದು, ಡಿಕೆ ಶಿವಕುಮಾರ್ ಅವರಿಗಿದ್ದ ಸಮಸ್ಯೆ ಗಿಂತ ಹೆಚ್ಚಿನ ಅನಾರೋಗ್ಯ ದರ್ಶನ್ ಅವರಿಗೆ ಇದೆ. 2022 23ರಲ್ಲಿಯೂ ಈ ಬಗ್ಗೆ ಚಿಕಿತ್ಸೆ ಪಡೆಯಲಾಗಿದೆ. ಬೆನ್ನು ಹುರಿಯ ಸಮಸ್ಯೆಯಿಂದ ಈಗಾಗಲೇ ಕಾಲು ಮರಗಟ್ಟುವಿಕೆ ಆಗುತ್ತಿದೆ. ಹೀಗೆ ಮುಂದುವರೆದರೆ ಇನ್ನಷ್ಟು ಸಮಸ್ಯೆ ಆಗಬಹುದು.

ಡಿಸ್ಕ್ ನಲ್ಲಿನ ಸಮಸ್ಯೆಯಿಂದ ನರದಿಂದ ರಕ್ತ ಪರಿಚಲನೆ ಆಗುತ್ತಿಲ್ಲ. ಹೀಗಾಗಿ ಶಸ್ತ್ರಚಿಕಿತ್ಸೆ ಅಗತ್ಯವಿದೆ ಪಾರಂಪರಿಕ ಚಿಕಿತ್ಸೆಯಿಂದ ಇದು ಪರಿಹಾರ ಆಗುವುದಿಲ್ಲ. ಶಸ್ತ್ರಚಿಕಿತ್ಸೆಯಿಂದ ಮಾತ್ರವೇ ಈ ಸಮಸ್ಯೆ ಗುಣಪಡಿಸಬಹುದಾಗಿದೆ ಎಂದು ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದರು.4

ಬಳಿಕ ಎಸ್ ಪಿ ಪಿ ಪ್ರಸನ್ನ ಕುಮಾರ್ ವಾತ ಮಂಡಿಸಿದ್ದು, ವೈದ್ಯರ ವರದಿಯನ್ನು ಓದುತ್ತಿದ್ದಾರೆ. ವೈದ್ಯರ ವರದಿಯಲ್ಲಿ ಮುಂದೊಮ್ಮೆ ಆಗಬಹುದು ಅಂತ ಇದೆ. ಮುಂದೊಮ್ಮೆ ಆದರೆ ಸರಿಪಡಿಸಬಹುದೇ ಎಂದು ಇದೇ ವೇಳೆ ಜಡ್ಜ್ ಪ್ರಸನ್ನ ಕುಮಾರ್ ಅವರಿಗೆ ಪ್ರಶ್ನಿಸಿದರು. ವಿಚಾರಣಾ ಧೀನ ಕೈಗೂ ಉತ್ತಮ ಆರೋಗ್ಯದ ಹಕ್ಕಿದೆ ಮುಂದೆ ಸಮಸ್ಯೆ ಆದರೆ ಅದನ್ನು ಸರಿಪಡಿಸಲಾಗುವುದಿಲ್ಲ ಈ ಹಿಂದೆ ಹಿಪ್ ಜಾಯಿಂಟ್ ಸಮಸ್ಯೆ ಸರಿಪಡಿಸಲಾಗಿದೆ ಎಂದು ಎಸ್ ಪಿ ಪಿ ತಿಳಿಸಿದಾಗ ನೀವು ವೈದ್ಯಕೀಯ ವರದಿಯನ್ನು ಪ್ರಶ್ನಿಸುತ್ತಿದ್ದೀರಾ ಎಂದು ಪ್ರಶ್ನಿಸಿದರು.

ಜೈಲಿಗೆ ಸೇರಿದ ಮೇಲೆ ಎಂ ಆರ್ ಐ ವರದಿಯಲ್ಲಿ ಇದೆಯಲ್ಲ.ಈಗಿನ ವರದಿಯನ್ನು ಪರಿಗಣಿಸಬೇಕಲ್ಲವೇ? ಹಾಗಿದ್ದರೆ ಮೆಡಿಕಲ್ ಬೋರ್ಡ್ ಮೂಲಕ ಅಭಿಪ್ರಾಯ ಪಡೆಯುವುದು ಸೂಕ್ತ ಎಂದು ಪ್ರಕರಣ ಒಂದನ್ನು ಉಲ್ಲೇಖಿಸಿ ಎಸ್ ಪಿ ಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದರು.

ವರದಿಯಲ್ಲಿ ಯಾವ ಆಪರೇಷನ್ ಎಷ್ಟು ದಿನ ಅಂತ ವಿವರ ಇಲ್ಲ ಹೀಗಾಗಿ ಮೆಡಿಕಲ್ ಬೋರ್ಡ್ ಅಗತ್ಯವೆನ್ನುತ್ತಿದ್ದಾರೆ ಎಂದು ಜಡ್ಜ್ ಕೇಳಿದಾಗ ಚಿಕಿತ್ಸೆ ಪಡೆಯುವುದು ವ್ಯಕ್ತಿಯ ಮೂಲಭೂತ ಹಕ್ಕು. ಆಸ್ಪತ್ರೆಗೆ ದಾಖಲಿಸಿದ ಬಳಿಕವೇ ಇದು ತಿಳಿಯುತ್ತದೆ. ವೈದ್ಯರು ಎಷ್ಟು ದಿನಗಳು ಅಂತ ಹೇಳಬಹುದು ಎಂದು ಜಡ್ಜ್ ಕೇಳಿದಾಗ ನಾವು ಕೇಳುತ್ತಿರುವುದು ಮದ್ಯಂತರ ಜಾಮೀನು ಅಷ್ಟೇ. ಬಳ್ಳಾರಿಯ ವೈದ್ಯರು ಈಗಾಗಲೇ ವರದಿ ನೀಡಿದ್ದಾರೆ ಇದನ್ನು ಅನುಮಾನಿಸಲು ಯಾವುದೇ ಕಾರಣವಿಲ್ಲ ಎಂದು ಸಿವಿ ನಾಗೇಶ್ ವಾದಿಸಿದರು.

ನೀವು ಎಲ್ಲಿ ಚಿಕಿತ್ಸೆ ಪಡೆಯಲು ಬಯಸುತ್ತೀರಿ ಎಂದು ಜಡ್ಜ್ ಕೇಳಿದಾಗ ಇದೇ ವೇಳೆ ಕೇಳಿದಾಗ ದರ್ಶನ್ ಮೈಸೂರಿನ ನಿವಾಸಿ ಹೀಗಾಗಿ ಅಲ್ಲಿಯೇ ಈ ಹಿಂದೆ ಚಿಕಿತ್ಸೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಸಾಕ್ಷಿಗಳಿರುವುದರಿಂದ ಇಲ್ಲಿ ಇರುವುದಿಲ್ಲ. ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತೇವೆ ಕಾಲಕಾಲಕ್ಕೆ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡುತ್ತೇವೆ. ಹೀಗಾಗಿ ನಮಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ಸಿವಿ. ನಾಗೇಶ್ ಮನವಿ ಮಾಡಿದರು.

ಮೈಸೂರಿನ ಅಪೋಲೋ ಆಸ್ಪತ್ರೆಯಿಂದಲೇ ವರದಿ ಪಡೆಯಬಹುದಲ್ಲವೇ ಎಂದು ಜಡ್ಜ್ ಕೇಳಿದಾಗ, ತಪಾಸಣೆ ಬೇರೆ ಸರ್ಕಾರ ಆಸ್ಪತ್ರೆಯಲ್ಲಿ ಮಾಡಿಸಿ ವರದಿ ಪಡೆಯಬೇಕು ಎಂದು ಎಸ್ ಪಿ ಪಿ ಪ್ರಸನ್ನ ಕುಮಾರ್ ಹೇಳಿದರು ಇದಕ್ಕೆ ಜಡ್ಜ್ ನೀವು ಈ ಹಿಂದೆ ನಿಮ್ಮದೇ ಆಸ್ಪತ್ರೆಯಲ್ಲಿ ವರದಿ ಪಡೆದಿದ್ದಿರಲ್ಲ? ಆಸ್ಪತ್ರೆಯ ವೈದ್ಯರು ತಪಾಸಣೆ ನಡೆಸಿ ಹೇಳಬಹುದು ಅಲ್ವಾ? ಎಂದು ಜಡ್ಜ್ ಪ್ರಶ್ನಿಸಿದರು.

ಮೆಡಿಕಲ್ ಬೋರ್ಡ್ ಅಭಿಪ್ರಾಯ ಪಡೆದಿರುವ ಹಲವು ತೀರ್ಪುಗಳಿವೆ ಎಂದು ಪ್ರಸನ್ನ ಕುಮಾರ್ ತಿಳಿಸಿದಾಗ, ಹಿರಿಯ ವಕೀಲರೇ ಎರಡನೇ ಅಭಿಪ್ರಾಯವನ್ನು ಬೆಂಗಳೂರಿನಲ್ಲಿ ಪಡೆಯಬಹುದಲ್ಲವೇ? ಎಂದು ಜಡ್ಜ್ ಕೇಳಿದಾಗ ಚಿಕಿತ್ಸೆ ಪಡೆಯುವ ವೈದ್ಯರಿಂದಲೇ ಅಭಿಪ್ರಾಯ ಪಡೆಯಬೇಕು ಎಂದಾಗ, ಎರಡನೇ ಅಭಿಪ್ರಾಯ ಏಕೆ ಬೇಕು ಎಂದು ಸಬಿ ನಾಗೇಶ್ ಪ್ರಶ್ನೆಸಿದರು. ನೂರಾಲೋಜಿಸ್ಟ್ ಆಪರೇಷನ್ ಬೇಕು ಅಂತ ಕೇಳಿದ್ದಾರೆ ಆದರೆ ಯಾವಾಗ ಬೇಕು ಎಷ್ಟು ದಿನ ಬೇಕೆಂದು ಹೇಳಿಲ್ಲ ಎಂದು ಜಡ್ಜ್ ತಿಳಿಸಿದರು.

ಚಿವುಟಿದವರಿಗೆ ನೋವು ಗೊತ್ತಾಗುವುದಿಲ್ಲ. ಚಿವುಟಿಸಿಕೊಂಡವರಿಗೆ ಮಾತ್ರ ಅನುಭವ ಗೊತ್ತಾಗುತ್ತದೆ. ದರ್ಶನ್ ಗೆ ಓಡಾಡಲು ಆಗುತ್ತಿಲ್ಲ ಕೂರಲು ಆಗುತ್ತಿಲ್ಲ ಎಂದು ನಾಗೇಶ್ ವಾದಿಸಿದರು. ವೈದ್ಯರ ವರದಿಯನ್ನು ಅನುಮಾನಿಸಲು ಕಾರಣಗಳೇ ಇಲ್ಲ.ಎಷ್ಟು ಸಲ ಟೆಸ್ಟ್, ಎಷ್ಟು ಸಲ ವರದಿ ಪಡೆಯಬೇಕು. ಈ ಹಿಂದೆ ಹಿಪ್ ಜಾಯಿಂಟ್ ಬಗ್ಗೆ ವರದಿ ಪಡೆಯಲಾಗಿತ್ತು. ಈಗ ಒಂದೇ ಬಾರಿ ಎಂ ಆರ್ ಐ ಸ್ಕ್ಯಾನಿಂಗ್ ಮಾಡಿಸಲಾಗಿದೆ ಎಂದು ಪ್ರಸನ್ನ ಕುಮಾರ್ ತಿಳಿಸಿದರು.

ಕೆಲ ದಿನಗಳ ಕಾಲ ಚಿಕಿತ್ಸೆ ಪಡೆಯಲು ಆಕ್ಷೇಪಣೆ ಸರಿಯಲ್ಲ. ಮೆಡಿಕಲ್ ಎಮರ್ಜೆನ್ಸಿ ಇರುವುದರಿಂದ ಮಧ್ಯಂತರ ಜಾಮೀನು ನೀಡಬೇಕು. ಮೆಡಿಕಲ್ ಬೋರ್ಡ್ ಅಭಿಪ್ರಾಯವಿಲ್ಲದೆ ಮಧ್ಯಂತರ ಜಾಮೀನು ನೀಡಲಾಗಿದೆ. ಕರ್ನಾಟಕ ಹೈ ಕೋರ್ಟ್ ಆದೇಶಗಳಿವೆ ದೆಹಲಿಯ ಉದಾಹರಣೆಯ ಅಗತ್ಯವಿಲ್ಲ ಎಂದು ಎಸ್ ಪಿ ಪಿ ಪ್ರಸನ್ನ ಕುಮಾರ್ ವಾದಿಸಿದರು.

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ಕಾಲ್ತುಳಿತ ದುರಂತ: RCB, KSCA, DNA ಕಂಪನಿ ವಿರುದ್ಧ 3ನೇ FIR ದಾಖಲು

06/06/2025 9:43 PM1 Min Read

BREAKING: ಬೆಂಗಳೂರಲ್ಲಿ ಮೆಟ್ರೋ ಪಿಲ್ಲರ್ ಗೆ ‘BMTC ಬಸ್’ ಡಿಕ್ಕಿ: 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

06/06/2025 9:18 PM1 Min Read

ನನ್ನ ವಿರುದ್ಧ ಬೆಟ್ಟು ಮಾಡುತ್ತಿರುವುದೇಕೆ? ತೆರೆಮರೆಯಲ್ಲಿ ಯಾರು ಏನೇನು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ: ಡಿಸಿಎಂ ಡಿಕೆಶಿ

06/06/2025 8:44 PM2 Mins Read
Recent News

ಬೆಂಗಳೂರಲ್ಲಿ ಕಾಲ್ತುಳಿತ ದುರಂತ: RCB, KSCA, DNA ಕಂಪನಿ ವಿರುದ್ಧ 3ನೇ FIR ದಾಖಲು

06/06/2025 9:43 PM

ಮಹಿಳೆಯರೇ ಗಮನಿಸಿ ; ತಲೆ ಸ್ನಾನ ಮಾಡಿದ ತಕ್ಷಣ ಇವುಗಳನ್ನ ತಿನ್ನಬೇಡಿ.! ತಿಂದ್ರೆ ನಿಮ್ಗೆ ತೊಂದ್ರೆ

06/06/2025 9:27 PM

BREAKING: ಬೆಂಗಳೂರಲ್ಲಿ ಮೆಟ್ರೋ ಪಿಲ್ಲರ್ ಗೆ ‘BMTC ಬಸ್’ ಡಿಕ್ಕಿ: 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

06/06/2025 9:18 PM

ವಿಜ್ಞಾನಿಗಳ ಅದ್ಭುತ ಆವಿಷ್ಕಾರ ; ‘ಮ್ಯಾಜಿಕ್ ಪ್ಲಾಸ್ಟಿಕ್’ ತಯಾರಿ, ನೀರಲ್ಲಿ ಹಾಕಿದ್ರೆ ತಕ್ಷಣ ಕರಗುತ್ತೆ

06/06/2025 9:03 PM
State News
KARNATAKA

ಬೆಂಗಳೂರಲ್ಲಿ ಕಾಲ್ತುಳಿತ ದುರಂತ: RCB, KSCA, DNA ಕಂಪನಿ ವಿರುದ್ಧ 3ನೇ FIR ದಾಖಲು

By kannadanewsnow0906/06/2025 9:43 PM KARNATAKA 1 Min Read

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಸಿಬಿ, ಕೆ ಎಸ್ ಸಿ ಎ, ಡಿಎನ್ಎ ಕಂಪನಿಗಳ…

BREAKING: ಬೆಂಗಳೂರಲ್ಲಿ ಮೆಟ್ರೋ ಪಿಲ್ಲರ್ ಗೆ ‘BMTC ಬಸ್’ ಡಿಕ್ಕಿ: 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

06/06/2025 9:18 PM

ನನ್ನ ವಿರುದ್ಧ ಬೆಟ್ಟು ಮಾಡುತ್ತಿರುವುದೇಕೆ? ತೆರೆಮರೆಯಲ್ಲಿ ಯಾರು ಏನೇನು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ: ಡಿಸಿಎಂ ಡಿಕೆಶಿ

06/06/2025 8:44 PM

ರಾಜ್ಯ ಸರ್ಕಾರದಿಂದ ‘ಆಡಳಿತ ಯಂತ್ರ’ಕ್ಕೆ ಮೇಜರ್ ಸರ್ಜರಿ: ಐವರು ‘IPS ಅಧಿಕಾರಿ’ಗಳ ವರ್ಗಾವಣೆ | IPS Officer Transfer

06/06/2025 8:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.