ಬೆಂಗಳೂರು : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ್ ಅವರ ನಡುವೆ ವಾಕ್ಸಮರ ತೀವ್ರ ತಾರಕಕ್ಕೆ ಏರಿದ್ದು, ಇದೀಗ ಶೋಭಾ ಕರಂದ್ಲಾಜೆ ಅವರು ಭೈರತಿ ಸುರೇಶ್ ಅವರ ವಿರುದ್ಧ ತಾಕತ್ತಿದ್ದರೆ ನನ್ನ ವಿರುದ್ಧ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭೈರತಿ ಸುರೇಶ್ ಆರೋಪಕ್ಕೆ ಶೋಭಾ ಕರಂದ್ಲಾಜೆ ಪ್ರತಿ ಸವಾಲು ಹಾಕಿದ್ದಾರೆ. ಶೋಭಾ ಕರಂದ್ಲಾಜೆ ವಿರುದ್ಧ ಭೈರತಿ ಸುರೇಶ್ ಭ್ರಷ್ಟಾಚಾರ ಆರೋಪ ಮಾಡಿದ್ದರು.ಇಂಧನ ಸಚಿವರಾಗಿದ್ದಾಗ ಅಕ್ರಮ ಎಸಗಿದ್ದಾರೆ ಎಂದು ಭೈರತಿ ಸುರೇಶ್ ಆರೋಪಿಸಿದ್ದರು. ಅಕ್ರಮ ಹೊರ ತರುತ್ತೇವೆ ಎಂದು ಬೈರತಿ ಸುರೇಶ್ ಹೇಳಿದ್ದರು.
ಇದೀಗ ಭೈರತಿ ಸುರೇಶ್ ಆರೋಪಕ್ಕೆ ಶೋಭಾ ಕರಂದ್ಲಾಜೆ ತಿರುಗೇಟು ಕೊಟ್ಟಿದ್ದಾರೆ. ತಾಕತ್ ಇದ್ದರೆ ನನ್ನ ವಿರುದ್ಧದ ದಾಖಲೆ ಬಿಡುಗಡೆ ಮಾಡಲಿ. ಸುರೇಶ್ ಮುಡಾದ ಸಾವಿರಾರು ಫೈಲ್ಸ್ ಸುಟ್ಟು ಹಾಕಿದ್ದಾರೆ. ಅದರ ಬಗ್ಗೆ ನಾನು ಧ್ವನಿ ಎತ್ತಿದ್ದೇನೆ. ಹಾಗಾಗಿ ಧ್ವನಿ ಎತ್ತಿದ ತಕ್ಷಣ ನನ್ನ ಬಗ್ಗೆ ಆರೋಪ ಮಾಡುತ್ತಿದ್ದಾರೆ. ನನ್ನ ಬಾಯಿ ಮುಚ್ಚಿಸೋಕೆ ಬೇರೆ ಬೇರೆ ಆರೋಪ ಮಾಡಿದ್ದಾರೆ. ಶೋಭಾ ಕರಂದ್ಲಾಜೆ ಯಾವತ್ತು ಭ್ರಷ್ಟಾಚಾರ ಮಾಡಿಲ್ಲ ಮಾಡೋದು ಇಲ್ಲ.
ಬಿಜೆಪಿಯಲ್ಲಿ ಅತ್ಯಂತ ಗೌರವತವಾಗಿ ಕೊಟ್ಟ ಕೆಲಸವನ್ನು ಮಾಡುವಂತವಳು ನಾನು. ಭೈರತಿ ಸುರೇಶ್ ಅವರಿಗೆ ಸವಾಲು ಹಾಕುತ್ತೇನೆ ಪೊನ್ನಣ್ಣಗು ವಿದ್ಯುತ್ ಇಲಾಖೆಗೂ ಏನು ಸಂಬಂಧ? ಪೊನ್ನಣ್ಣ ಇರುವಂತದ್ದು ಮುಖ್ಯಮಂತ್ರಿಗಳ ಲೀಗಲ್ ಅಡ್ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ನೀವು ವಿದ್ಯುತ್ ಇಲಾಖೆಯ ಫೈಲ್ ನೋಡಿ ಅಂತ ಜವಾಬ್ದಾರಿ ಕೊಟ್ಟರೆ ಹಗಲು ಹೊತ್ತು ಭ್ರಷ್ಟಾಚಾರ ಮಾಡಲ ಹೊರಟಿದ್ದೀರಾ? ಹಾಗಾಗಿ ನಿಮ್ಮ ಹತ್ತಿರ ಯಾವ ಫೈಲ್ ಇದೆ, ಯಾವುದು ದಾಖಲೆ ಇದೆ ಹೊರಹಾಕಿ ಎಂದು ಸವಾಲು ಹಾಕಿದರು.