ಮಂಡ್ಯ : 2028 ರ ವರೆಗೆ ಈ ಸರ್ಕಾರ ನಡೆಯುವುದು ಬಹಳ ಕಷ್ಟ. ಸರ್ಕಾರವನ್ನು ನಾವೇ ಕೆಡುವುತ್ತೇವೆ ಅಂತ ನಾನು ಹೇಳುವುದಿಲ್ಲ. ಆದರೆ ಈ ಒಂದು ಸರ್ಕಾರದಿಂದ ಜನರು ಬೇಸತ್ತು ಹೋಗಿದ್ದಾರೆ. ಹಾಗಾಗಿ ಜನರೇ ತೀರ್ಮಾನಿಸುತ್ತಾರೆ. ಜನ ಬಯಸಿದರೆ ಮತ್ತೆ ಯಾಕೆ ನಾನು ಸಿಎಂ ಆಗಬಾರದು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗುವ ಆಸೆ ಬಿಚ್ಚಿಟ್ಟಿದ್ದಾರೆ.
ಮಂಡ್ಯದಲ್ಲಿ ಉದ್ಯೋಗ ಮೇಳ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದಲ್ಲೇ ಸಚಿವರು ಮತ್ತು ಶಾಸಕರಗಳ ನಡುವೆ ಅಸಮಾಧಾನ ಸ್ಪೋಟವಾಗಿದೆ. ಅದು ಇನ್ನೂ ಹೊರ ಬಿದ್ದಿಲ್ಲ. ಅದು ಯಾವಾಗ ಸ್ಪೋಟಗೊಳ್ಳುತ್ತದೆ ಅವಾಗ ಸರ್ಕಾರ ಬೀಳಲಿದೆ. ಸರ್ಕಾರದ ನಿಷ್ಕ್ರಿಯತೆ ಹಾಗೂ ಹಳ್ಳಿಗಳಿಗೆ ಶಾಸಕರು ಭೇಟಿ ಮಾಡದೆ ಇರುವಂತಹ ವಾತಾವರಣ ನಿರ್ಮಾಣವಾಗಿದೆ.
ಹಲವಾರು ಜನ ಕಾಂಗ್ರೆಸ್ ಶಾಸಕರು ಸರ್ಕಾರದ ನಡವಳಿಕೆಯ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ.2028 ರ ವರೆಗೆ ಈ ಸರ್ಕಾರ ಇರುವುದಿಲ್ಲ. ಮತ್ತೆ ನಾನೇ ಈ ರಾಜ್ಯದ ಸಿಎಂ ಆಗ್ತೀನಿ ಜನ ಹೊಸದಾಗಿ ತೀರ್ಮಾನ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ. ಜನ ಬಯಸಿದರೆ ಮತ್ತೆ ಯಾಕೆ ಸಿಎಂ ಆಗಬಾರದು? ಜನರೇ ಈ ಸರ್ಕಾರವನ್ನು ತೆಗೆಯುತ್ತಾರೆ. ಜನ ತೀರ್ಮಾನ ಮಾಡುತ್ತಾರೆ ನನಗೆ ವಿಶ್ವಾಸವಿದೆ ಎಂದು HD ಕುಮಾರಸ್ವಾಮಿ ತಿಳಿಸಿದರು.