ಮಂಡ್ಯ : ಯಾವುದೇ ವಸ್ತು ಆಗಿರಲಿ ಅಥವಾ ವ್ಯಕ್ತಿನೇ ಆಗಿರಲಿ ಸಿಗಬೇಕೆಂದರೆ ಅದೃಷ್ಟ ಇರಬೇಕು ಎಂದು ಹೇಳುತ್ತಾರೆ. ಇದೀಗ ಕೇರಳದ ಓಣಂ ಬಂಪರ್ ಲಾಟರಿಯಲ್ಲಿ ಕರ್ನಾಟಕದ ಮಂಡ್ಯ ಜಿಲ್ಲೆಯ ಬೈಕ್ ಮೆಕಾನಿಕ್ ಒಬ್ಬರು ಬರೋಬ್ಬರಿ 25 ಕೋಟಿ ಬಂಪರ್ ಲಾಟರಿ ಪಡೆದಿದ್ದಾರೆ.
ಹೌದು ಮಂಡ್ಯ ಜಿಲ್ಲೆಯ ಅಲ್ತಾಫ್ ಪಾಷಾ ಎನ್ನುವವರು ಕೇವಲ 500 ರೂಪಾಯಿ ಕೊಟ್ಟು ಕೇರಳದ ಓಣಂ ಬಂಪರ್ ಲಾಟರಿ ಯನ್ನು ಖರೀದಿಸಿದ್ದರು. ಇದೀಗ ಕೇರಳದ ಓಣಂ ಬಂಪರ್ ಲಾಟರಿ ಘೋಷಣೆ ಮಾಡಿದ್ದು, ಅಲ್ತಾಫ್ ಪಾಷಾ ಅವರಿಗೆ 25 ಕೋಟಿ ರೂಪಾಯಿ ಬಂಪರ್ ಬಹುಮಾನ ಸಿಕ್ಕಿದೆ.
ಅಲ್ತಾಫ್ ಪಾಷಾ ಅವರು ಬೈಕ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದಾರೆ. ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿರುವ ಅವರಿಗೆ ಬರೋಬ್ಬರಿ 25 ಕೋಟಿ ಬಂಪರ್ ಲಾಟರಿ ಹೊಡೆದಿದೆ.ಕೇರಳ ಲಾಟರಿಯಲ್ಲಿ 25 ಕೋಟಿ ರೂಪಾಯಿ ಬಹುಮಾನ ಪಡೆದಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ನಿವಾಸಿ ಅಲ್ತಾಫ್ ಬಂಪರ್ ಲಾಟರಿ ಹೊಡೆದಿದ್ದಾರೆ.
ಇತ್ತೀಚಿಗೆ ಅಷ್ಟೇ ಅವರು ಕೇರಳಕ್ಕೆ ಹೋಗಿ ಲಾಟರಿ ಖರೀದಿಸಿದ್ದರು. 500 ಕೊಟ್ಟು ಲಾಟರಿ ಖರೀದಿಸಿದ್ದ ಅಲ್ತಾಫ್ ಇದೀಗ ಹಣ ಪಡಿಯೋಕೆ ಕೇರಳಕ್ಕೆ ಹೊರಟಿದ್ದಾರೆ. ಅಲ್ತಾಫ್ ಅವರಿಗೆ 25 ಕೋಟಿ ರೂಪಾಯಿ ಲಾಟರಿ ಬಹುಮಾನ ಗೆದ್ದಿರುವ ವಿಚಾರ ತಿಳಿದು ಅವರ ಕುಟುಂಬದವರು ಭಾರೀ ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ಕುರಿತಾಗಿ ಮಾಧ್ಯಮಗಳು ಅವರನ್ನು ಮಾತನಾಡಿಸಿದಾಗ, ನಾನು ಹಲವಾರು ಬಾರಿ ಟಿಕೆಟ್ ಖರೀದಿಸಿದ್ದೇನೆ. ಆದರೆ ಈ ಬಾರಿ ದೇವರ ಆಶೀರ್ವಾದದಿಂದ ಲಾಟರಿ ಬಹುಮಾನ ಸಿಕ್ಕಿದೆ. ನನಗೆ ಯಾವುದೇ ರೀತಿಯಾದಂತಹ ಗಾಬರಿಯಿಲ್ಲ. ಸಾಮಾನ್ಯವಾಗಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ.ಅಲ್ಲದೆ ಈ ಲಾಟರಿಯಲ್ಲಿ ಜಿಎಸ್ಟಿ ಅದು ಇದು ಎಲ್ಲಾ ಕಟ್ ಆಗಿ 18ಕೋಟಿ ಬರುತ್ತೆ.ಅದರಲ್ಲಿ ನನಗೆ ಕೈಲಾದಷ್ಟು ಬಡವರಿಗೆ ಸಹಾಯ ಮಾಡುತ್ತೇನೆ ಎಂದು ಅಲ್ತಾಫ್ ತಿಳಿಸಿದರು.