Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಕೇರಳ ತೀವ್ರ ಬಡತನವನ್ನು ನಿವಾರಿಸಿದ ಮೊದಲ ಭಾರತೀಯ ರಾಜ್ಯವಾಗಿದೆ : CM ಪಿಣರಾಯಿ ವಿಜಯನ್ ಘೋಷಣೆ

01/11/2025 12:15 PM

ತಜಕಿಸ್ತಾನ ವಾಯುನೆಲೆಯಿಂದ ಭಾರತ ನಿರ್ಗಮಿಸಿದಿರುವುದು ವ್ಯೂಹಾತ್ಮಕ ರಾಜತಾಂತ್ರಿಕತೆಗೆ ಹಿನ್ನಡೆ : ಕಾಂಗ್ರೆಸ್

01/11/2025 12:13 PM

ರೈತರಿಗೆ ಗುಡ್ ನ್ಯೂಸ್ : `ಕೃಷಿ ಪಂಪ್’ಸೆಟ್ಗಳಿಗೆ ವಿದ್ಯುತ್ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

01/11/2025 12:04 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇನ್ಮುಂದೆ ‘ಗುಟ್ಕಾ’ ತಿಂದು ರಸ್ತೆಯಲ್ಲಿ ಉಗುಳಿದ್ರೆ ಎಚ್ಚರ.! ಸಚಿವ ‘ನಿತಿನ್ ಗಡ್ಕರಿ’ ವಿಶಿಷ್ಟ ಸಲಹೆ
INDIA

ಇನ್ಮುಂದೆ ‘ಗುಟ್ಕಾ’ ತಿಂದು ರಸ್ತೆಯಲ್ಲಿ ಉಗುಳಿದ್ರೆ ಎಚ್ಚರ.! ಸಚಿವ ‘ನಿತಿನ್ ಗಡ್ಕರಿ’ ವಿಶಿಷ್ಟ ಸಲಹೆ

By KannadaNewsNow02/10/2024 8:48 PM

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಗುಟ್ಕಾ, ಪಾನ್ ಮಸಾಲಾ ತಿಂದವರು ರಸ್ತೆಯಲ್ಲಿ ಉಗುಳುವುದನ್ನ ನೀವು ನೋಡಿರುತ್ತೀರಿ. ಸ್ವಚ್ಛ ರಸ್ತೆಗಳಲ್ಲೂ ಗುಟ್ಖಾಗಳ ಕುರುಹುಗಳು ಹೆಚ್ಚಾಗಿ ಕಂಡುಬರುತ್ತವೆ. ಮತ್ತೊಂದೆಡೆ, ಗುಟ್ಕಾ ಉಗುಳುವವರನ್ನ ಯಾರಾದರೂ ನಿಂದಿಸಿದ್ರೆ, ಅವ್ರು ಮೇಲೆಯೇ ಕೋಪಗೊಳ್ಳುತ್ತಾರೆ. ಆದ್ರೆ, ಅಂತಹವರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಪರಿಹಾರ ಕಂಡುಕೊಂಡಿದ್ದಾರೆ. ಗುಟ್ಖಾ, ಪಾನ್ ಮಸಾಲ ಉಗುಳುವ ವೇಳೆ ಈ ವ್ಯಕ್ತಿಗಳ ಛಾಯಾಚಿತ್ರ ತೆಗೆದು ಪತ್ರಿಕೆಯಲ್ಲಿ ಪ್ರಕಟಿಸಬೇಕು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ವಿದೇಶಕ್ಕೆ ಹೋಗುವುದರಿಂದ ಬದಲಾವಣೆ ಹೇಗೆ.?
ಸ್ವಚ್ಛ ಭಾರತ್ ಮಿಷನ್‌ನ 10 ನೇ ವಾರ್ಷಿಕೋತ್ಸವದಲ್ಲಿ ನಾಗ್ಪುರದಲ್ಲಿ ಭಾಷಣ ಮಾಡುವಾಗ, ಕೇಂದ್ರ ಸಚಿವರು ಅನೇಕ ವಿಷಯಗಳ ಬಗ್ಗೆ ಮಾತನಾಡಿದರು. ಇದೇ ವೇಳೆ ನಿತಿನ್ ಗಡ್ಕರಿ ಅವರು ಆಗಾಗ್ಗೆ ರಸ್ತೆಯಲ್ಲಿ ಉಗುಳುವವರ ಬಗ್ಗೆ ಪ್ರಸ್ತಾಪಿಸಿದರು. ನಮ್ಮ ದೇಶದ ಜನರು ತುಂಬಾ ಬುದ್ಧಿವಂತರು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಚಾಕಲೇಟ್ ತಿಂದಾಗ ಅದರ ಹೊದಿಕೆಯನ್ನ ರಸ್ತೆಗೆ ಎಸೆಯುತ್ತಾರೆ. ಆದರೆ ಅದೇ ಜನ ವಿದೇಶಕ್ಕೆ ಹೋದಾಗ ಜೇಬಿನಲ್ಲಿ ಚಾಕಲೇಟ್ ರ್ಯಾಪರ್ ಇಟ್ಟುಕೊಳ್ಳುತ್ತಾರೆ. ವಿದೇಶಗಳಲ್ಲಿ ಅದೇ ಜನರು ತಮ್ಮನ್ನು ಸುಸಂಸ್ಕೃತ ಪ್ರಜೆಗಳೆಂದು ತೋರಿಸಿಕೊಳ್ಳುತ್ತಾರೆ, ಆದರೆ ತಮ್ಮ ದೇಶದಲ್ಲಿ ಹೊಲಸು ಹರಡಲು ಹಿಂಜರಿಯುವುದಿಲ್ಲ ಎಂದರು.

ನಾನು ಕೂಡ ಈ ಹಿಂದೆ ಹೀಗಿದ್ದೆ – ನಿತಿನ್ ಗಡ್ಕರಿ
ನಿತಿನ್ ಗಡ್ಕರಿ ತಮ್ಮ ಉದಾಹರಣೆಯನ್ನ ನೀಡುತ್ತಾ, ಮೊದಲು ನಾನು ಕೂಡ ಹೀಗೆಯೇ ಇದ್ದೆ. ತಿಂದದ್ದಾಗಲೀ, ಕುಡಿದಿದ್ದಾಗಲೀ ಅಲ್ಲಿ ಇಲ್ಲಿ ಎಸೆಯುತ್ತಿದ್ದೆ. ಆದ್ರೆ, ಈಗ ನಾನೇ ಬದಲಾಗಿದ್ದೇನೆ. ಈಗ ಚಾಕಲೇಟ್ ತಿಂದಾಗ ಜೇಬಿನಲ್ಲಿ ರ್ಯಾಪರ್ ಇಟ್ಟುಕೊಂಡು ಮನೆಗೆ ಹೋದಾಗ ಡಸ್ಟ್ ಬಿನ್’ಗೆ ಎಸೆಯುತ್ತೇನೆ.

ರಸ್ತೆಯಲ್ಲಿ ಗುಟ್ಕಾ ಉಗುಳುವವರಿಗೆ ಚಿಕಿತ್ಸೆ.!
ರಸ್ತೆಯಲ್ಲಿ ಗುಟ್ಖಾ ತಿನ್ನುವವರನ್ನು ಉಲ್ಲೇಖಿಸಿದ ನಿತಿನ್ ಗಡ್ಕರಿ, ಗುಟ್ಖಾ ಮತ್ತು ಪಾನ್ ಮಸಾಲಾ ತಿನ್ನುವವರು ಹೆಚ್ಚಾಗಿ ರಸ್ತೆಗಳಲ್ಲಿ ಉಗುಳುತ್ತಾರೆ. ಇದರಿಂದ ರಸ್ತೆ ಮಲಿನವಾಗುವುದಲ್ಲದೆ ಇತರರಿಗೂ ತೊಂದರೆಯಾಗುತ್ತಿದೆ. ಇದಕ್ಕೆ ಒಂದೇ ಒಂದು ಚಿಕಿತ್ಸೆ ಇದೆ. ರಸ್ತೆಯಲ್ಲಿ ಉಗುಳುವವರ ಫೋಟೋ ತೆಗೆದು ಮರುದಿನ ಪತ್ರಿಕೆಯಲ್ಲಿ ಪ್ರಕಟಿಸಿ ಎಂದರು.

ಪ್ರಧಾನಿ ಮೋದಿ ಪೊರಕೆ ಬಳಸಿದರು.!
ಸ್ವಚ್ಛ ಭಾರತ ಅಭಿಯಾನವು ಇಂದು 10 ವರ್ಷಗಳನ್ನು ಪೂರೈಸಿದೆ. ಈ ಅವಧಿಯಲ್ಲಿ ದೇಶದ ಹಲವು ಮೂಲೆಗಳಲ್ಲಿ ಸ್ವಚ್ಛತಾ ಅಭಿಯಾನಗಳನ್ನು ನಡೆಸಲಾಯಿತು. ಪಂಡರ ಪಾರ್ಕ್‌ನಲ್ಲಿರುವ ಶಾಲೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುಡಿಸಿದ್ದಾರೆ. ಸಂಸತ್ತಿನಲ್ಲಿ ಸ್ವಚ್ಛತಾ ಅಭಿಯಾನವನ್ನೂ ಆಯೋಜಿಸಲಾಗಿತ್ತು. ಈ ಅಭಿಯಾನದಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕೂಡ ಭಾಗವಹಿಸಿದ್ದರು.

 

 

‘ಹಿಂದೂಗಳು, ಆದಿವಾಸಿ’ಗಳ ಜನಸಂಖ್ಯೆ ಕುಸಿಯುತ್ತಿದೆ : ಪ್ರಧಾನಿ ಮೋದಿ

BREAKING : ವಿಶ್ವಸಂಸ್ಥೆ ಮುಖ್ಯಸ್ಥ ‘ಗುಟೆರೆಸ್’ ದೇಶಕ್ಕೆ ಪ್ರವೇಶಿಸದಂತೆ ‘ಇಸ್ರೇಲ್’ ನಿಷೇಧ

ಸಿದ್ದರಾಮಯ್ಯ ರಾಜೀನಾಮೆ ಕೇಳುವ ಆರ್.ಅಶೋಕ್ ಅವರೇ ಮೊದಲು ನೀವು ಕೊಡಿ: ಸಚಿವ ಕೃಷ್ಣಭೈರೇಗೌಡ ಆಗ್ರಹ

Beware of eating gutka and spit on the road! Nitin Gadkari's unique advice ಇನ್ಮುಂದೆ 'ಗುಟ್ಕಾ' ತಿಂದು ರಸ್ತೆಯಲ್ಲಿ ಉಗುಳಿದ್ರೆ ಎಚ್ಚರ.! ಸಚಿವ 'ನಿತಿನ್ ಗಡ್ಕರಿ' ವಿಶಿಷ್ಟ ಸಲಹೆ
Share. Facebook Twitter LinkedIn WhatsApp Email

Related Posts

BIG NEWS : ಕೇರಳ ತೀವ್ರ ಬಡತನವನ್ನು ನಿವಾರಿಸಿದ ಮೊದಲ ಭಾರತೀಯ ರಾಜ್ಯವಾಗಿದೆ : CM ಪಿಣರಾಯಿ ವಿಜಯನ್ ಘೋಷಣೆ

01/11/2025 12:15 PM2 Mins Read

ತಜಕಿಸ್ತಾನ ವಾಯುನೆಲೆಯಿಂದ ಭಾರತ ನಿರ್ಗಮಿಸಿದಿರುವುದು ವ್ಯೂಹಾತ್ಮಕ ರಾಜತಾಂತ್ರಿಕತೆಗೆ ಹಿನ್ನಡೆ : ಕಾಂಗ್ರೆಸ್

01/11/2025 12:13 PM1 Min Read

ಶಬರಿಮಲೆ ದೇವಸ್ಥಾನ ಚಿನ್ನ ಕಳ್ಳತನ: ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಸುಧೀಶ್ ಕುಮಾರ್ ಬಂಧನ

01/11/2025 12:01 PM1 Min Read
Recent News

BIG NEWS : ಕೇರಳ ತೀವ್ರ ಬಡತನವನ್ನು ನಿವಾರಿಸಿದ ಮೊದಲ ಭಾರತೀಯ ರಾಜ್ಯವಾಗಿದೆ : CM ಪಿಣರಾಯಿ ವಿಜಯನ್ ಘೋಷಣೆ

01/11/2025 12:15 PM

ತಜಕಿಸ್ತಾನ ವಾಯುನೆಲೆಯಿಂದ ಭಾರತ ನಿರ್ಗಮಿಸಿದಿರುವುದು ವ್ಯೂಹಾತ್ಮಕ ರಾಜತಾಂತ್ರಿಕತೆಗೆ ಹಿನ್ನಡೆ : ಕಾಂಗ್ರೆಸ್

01/11/2025 12:13 PM

ರೈತರಿಗೆ ಗುಡ್ ನ್ಯೂಸ್ : `ಕೃಷಿ ಪಂಪ್’ಸೆಟ್ಗಳಿಗೆ ವಿದ್ಯುತ್ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

01/11/2025 12:04 PM

ಶಬರಿಮಲೆ ದೇವಸ್ಥಾನ ಚಿನ್ನ ಕಳ್ಳತನ: ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಸುಧೀಶ್ ಕುಮಾರ್ ಬಂಧನ

01/11/2025 12:01 PM
State News
KARNATAKA

ರೈತರಿಗೆ ಗುಡ್ ನ್ಯೂಸ್ : `ಕೃಷಿ ಪಂಪ್’ಸೆಟ್ಗಳಿಗೆ ವಿದ್ಯುತ್ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

By kannadanewsnow5701/11/2025 12:04 PM KARNATAKA 1 Min Read

ಶಿವಮೊಗ್ಗ : ತಾಲೂಕು ಗ್ರಾಮೀಣ ಮೆಸ್ಕಾಂ ಉಪವಿಭಾಗ ವ್ಯಾಪ್ತಿಗೆ ಒಳಪಡುವ ಅಬ್ಬಲಗೆರೆ, ಪಿಳ್ಳಂಗಿರಿ, ಹೊಳಲೂರು, ಗಾಜನೂರು ಮತ್ತು ಸಂತೇಕಡೂರು (ಘಟಕ-2)…

BREAKING: ರಾಜ್ಯೋತ್ಸವದ ದಿನದಂದೇ ನಾಡದ್ರೋಹಿ `MES’ನಿಂದ ಬೆಳಗಾವಿಯಲ್ಲಿ ಕರಾಳದಿನ ಆಚರಣೆ : ಕಪ್ಪು ಬಟ್ಟೆ ಧರಿಸಿ ಮೆರವಣಿಗೆ.!

01/11/2025 11:39 AM

ಮೈಸೂರಿನಲ್ಲಿ `ವಿಶ್ವದರ್ಜೆಯ ಫಿಲ್ಟ್ ಸಿಟಿ’ ನಿರ್ಮಾಣ : CM ಸಿದ್ದರಾಮಯ್ಯ

01/11/2025 11:08 AM

BREAKING: ಕನ್ನಡ ರಾಜ್ಯೋತ್ಸವದಂದೇ ‘ಕಲ್ಯಾಣ ಕರ್ನಾಟಕ’ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಪ್ರತಿಭಟನೆ | WATCH VIDEO

01/11/2025 10:42 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.