ಉತ್ತರಕನ್ನಡ : ಇದೇ ಸಪ್ಟೆಂಬರ್ 22 ರಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಉದ್ಯಮಿ ವಿನಾಯಕರನ್ನು ಬೆಳ್ಳಂ ಬೆಳಿಗ್ಗೆ ಅವರ ಮನೆಯಲ್ಲೇ ದುಷ್ಕರ್ಮಿಗಳು ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಈ ಒಂದು ಕೊಲೆಗೆ ಸಂಬಂಧಪಟ್ಟಂತೆ ಕೊಲೆಗೆ ಸುಪಾರಿ ನೀಡಿದ್ದ ಮತ್ತೊಬ್ಬ ಉದ್ಯಮಿ ಇದೀಗ ಗೋವಾದಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹೌದು ಸೆಪ್ಟೆಂಬರ್ 22ರಂದು ಕಾರವಾರದಲ್ಲಿ ವಿನಾಯಕ್ ಹತ್ಯೆ ನಡೆದಿತ್ತು. ಗುರುಪ್ರಸಾದ್ ರಾಣೆ ಈ ಒಂದು ಕೊಲೆಗೆ ಸುಪಾರಿ ಕೊಟ್ಟಿದ್ದರು ಎಂದು ಹಂತಕರು ಪೋಲೀಸರ ವಿಚಾರಣೆ ವೇಳೆ ಬಾಯಿಬಿಟ್ಟಿದ್ದರು. ಹಂತಕರ ಹೇಳಿಕೆಯ ಮೇಲೆ ಬಳಿಕ ಗೋವಾ ಮೂಲದ ಉದ್ಯಮಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.
ಯಾವಾಗ ಹಂತಕರು ಗುರುಪ್ರಸಾದ್ ರಾಣೆ ಅವರ ಹೆಸರು ಹೇಳಿದರೊ, ಇದೀಗ ಇಂದು ಗುರುಪ್ರಸಾದ ರಾಣೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉದ್ಯಮಿ ವಿನಾಯಕ್ ಹತ್ಯೆಗೆ ಸುಪಾರಿ ಕೊಟ್ಟ ಗುರುಪ್ರಸಾದ ರಾಣೆ ಗೋವಾದ ಮಾಂಡೋವಿ ನದಿಯಲ್ಲಿ ಇದೀಗ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.