ವಿಜಯಪುರ : ಭಾರತೀಯರು ಎನ್ನುವುದು ನಮ್ಮೆಲ್ಲರ ಮೂಲ ಹಾಗಾಗಿ ನಾವೆಲ್ಲ ಒಂದೇ ಮರದ ಟೊಂಗೆಗಳು ಇದ್ದ ಹಾಗೆ ಎಂದು ವಿಜಯಪುರದಲ್ಲಿ ವ್ರತ್ತಮಠದ ಮುರುಘೇಂದ್ರ ಸ್ವಾಮೀಜಿಗಳು ತಿಳಿಸಿದರು.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಣೆಹಳ್ಳಿ ಶ್ರೀಗಳ ಹೇಳಿಕೆಗೆ ಯತ್ನಾಳ ವಿರೋಧಿಸಿರುವ ವಿಚಾರವಾಗಿ ಎಲ್ಲರೂ ಒಂದೇ. ದೇಶವನ್ನು ಬೇರ್ಪಡಿಸುವ ಕೆಲಸ ಆಗಬಾರದು ಅಬ್ದುಲ್ ಕಲಾಂ ದೇಶದ ರಾಷ್ಟ್ರಪತಿ ಆಗಿದ್ದರು. ಈಗ ದ್ರೌಪದಿ ಮುರ್ಮು ಅವರು ದೇಶದ ರಾಷ್ಟ್ರಪತಿ ಆಗಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾರೆ ಜಾತಿ ಆಧಾರದಲ್ಲಿ ಯಾಕೆ ಅಳೆಯಬೇಕು? ಎಂದು ಯತ್ನಾಳ್ ಗೆ ತಿರುಗೇಟು ನೀಡಿದರು.
ಮಾನವೀಯತೆ ಮನುಷ್ಯತ್ವವನ್ನು ಮುಂದುವರಿಸಿಕೊಂಡು ಹೋಗಬೇಕು ಭಾರತೀಯರಾಗಿ ಮಾನವೀಯತೆಯನ್ನು ಮೆರೆಯಬೇಕು. ಎಲ್ಲರ ರಕ್ತ ಒಂದೇ ಹೀಗಾಗಿ ಅದನ್ನು ಬೇರ್ಪಡಿಸುವ ಕೆಲಸ ಮಾಡುವುದು ಬೇಡ. ಕಂದಕ ಸೃಷ್ಟಿ ಮಾಡುವ ಬದಲು ಕೂಡಿಸುವ ಕೆಲಸ ಮಾಡಬೇಕು. ಬಸನಗೌಡ ಯತ್ನಾಳ್ ನಮ್ಮವರೇ ನಮ್ಮ ನಾಯಕರೇ.
ಮುಸ್ಲಿಂ ಮೌಲ್ವಿಗಳು ಕೂಡ ನಮ್ಮ ಮಠಗಳಿಗೆ ಬರುತ್ತಾರೆ. ರಾಜಕಾರಣಿಗಳು ಎಲ್ಲೆಡೆ ಹೋಗುತ್ತಾರೆ. ಭಾರತೀಯರು ಅನ್ನೋದು ನಮ್ಮ ಮೂಲ ಒಂದೇ ಗಿಡದ ಟೋಂಗೆಗಳು ಹಿಂದೂ ಮುಸ್ಲಿಮರಲ್ಲಿ ಸಾಮ್ಯತೆ ಇದೆ ಎಂದು ವಿರಕ್ತ ಮಠದ ಮುರುಘೆಂದ್ರ ಸ್ವಾಮಿಗಳು ತಿಳಿಸಿದರು.ನಾವು ದೀಪಾವಳಿ ಆಚರಿಸುತ್ತೇವೆ. ಅವರು ಈದ್ ಮಿಲಾದ್ ಆಚರಿಸುತ್ತಾರೆ. ನಾವು ಶ್ರಾವಣ ಆಚರಿಸುತ್ತೇವೆ ಅವರು ರಂಜಾನ್ ಆಚರಿಸುತ್ತಾರೆ. ಇದಕ್ಕಿಂತ ಸಮ್ಯತೆ ಇನ್ನೇನು ಬೇಕು ಎಂದು ವಿಜಯಪುರದಲ್ಲಿ ವಿರಕ್ತ ಮಠದ ಮುರುಘೇಂದ್ರ ಸ್ವಾಮೀಜಿ ಹೇಳಿಕೆ ನೀಡಿದರು.