ಬೆಂಗಳೂರು : ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿನ ಅಗ್ನಿಶಾಮಕ ಚಾಲಕ ನೇಮಕಾತಿ -2020 ರ 216 ಹುದ್ದೆಗಳ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ಆಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿನ ಅಗ್ನಿಶಾಮಕ ಚಾಲಕ ನೇಮಕಾತಿ-2020 ರ 227 (ನಾನ್.ಕೆ.ಕೆ. & ಕೆ.ಕೆ) ಹುದ್ದೆಗಳ ಭರ್ತಿಗಾಗಿ ಉಲ್ಲೇಖ(1) ರನ್ವಯ ಅಧಿಸೂಚನೆ ಹೊರಡಿಸಲಾಗಿರುತ್ತದೆ.
ಅಧಿಸೂಚನೆಯಲ್ಲಿ ಪ್ರಕಟಿಸಲಾಗಿರುವ ಖಾಲಿ ಹುದ್ದೆಗಳ ಭರ್ತಿಯನ್ನು ಹಾಲೀ ಚಾಲ್ತಿಯಲ್ಲಿರುವ ಇಲಾಖೆ ವೃಂದ ಮತ್ತು ನೇಮಕಾತಿ ನಿಯಮಗಳು-2013 ಹಾಗೂ ಇತ್ತೀಚಿನ ಸರ್ಕಾರದ ಆದೇಶಗಳ ಅನುಸಾರ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸಿ ಉಲ್ಲೇಖ(4) ರಂತೆ ಒಟ್ಟು 227 ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆಪಟ್ಟಿ ಹೊರಡಿಸಲಾಗಿರುತ್ತದೆ. ಈ ಆಯ್ಕೆಪಟ್ಟಿ ಪ್ರಕಟಗೊಂಡ ನಂತರ ಕೆಲವು ಅಭ್ಯರ್ಥಿಗಳು ಆಯ್ಕೆಗೊಂಡ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಇಚ್ಛೆ ಇರುವುದಿಲ್ಲವೆಂದು ಪ್ರಮಾಣ (affidavit) ಪತ್ರವನ್ನು ನೀಡಿರುತ್ತಾರೆ. ನಿಯಮಾನುಸಾರ ಸದರಿ ಅಭ್ಯರ್ಥಿಗಳ ಅಭ್ಯರ್ಥಿತನವನ್ನು ರದ್ದುಪಡಿಸಿದ ಬಗ್ಗೆ ಹಿಂಬರಹ ನೀಡಲಾಗಿರುತ್ತದೆ. ಸದರಿ ಅಭ್ಯರ್ಥಿಗಳ ಅಭ್ಯರ್ಥಿತನೆ ರದ್ದುಪಡಿಸಿದ ಕಾರಣ ಉಂಟಾದ ರಿಕ್ತಸ್ಥಾನಗಳ ಭರ್ತಿಗಾಗಿ ನಿಯಮಾನುಸಾರ ಮೆರಿಟ್ ಆಧಾರದ ಮೇಲೆ ಉಲ್ಲೇಖ(6) ರಂತೆ ಪರಿಷ್ಕೃತ ಅರ್ಹತಾ ಆಯ್ಕೆಪಟ್ಟಿ ಪ್ರಕಟಿಸಲಾಗಿರುತ್ತದೆ.
ಮುಂದುವರೆದು ಈ ಆಯ್ಕೆಪಟ್ಟಿಯನ್ನು ನಿಯಮಾನುಸಾರ ಅಂತಿಮಗೊಳಿಸಬೇಕಾಗಿದ್ದು, ಉಲ್ಲೇಖ(5) ರ ದಿನಾಂಕ:06-08-2024 ರನ್ವಯ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಅಭ್ಯರ್ಥಿಗಳು ದೇಹದಾರ್ಡ್ಯತೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ್ ಪರೀಕ್ಷೆಯಲ್ಲಿ ಪಡೆದ ಶೇಕಡವಾರು ಅಂಕಗಳು + ಭಾರೀ ವಾಹನ ಚಾಲನಾ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳ ಆಧಾರದ ಮೇಲೆ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳು ಮತ್ತು ಮೆರಿಟ್ ಆಧಾರದ ಮೇಲೆ ಈ ಕೆಳಕಂಡ ಉಳಿದ ಮೂಲ ವೃಂದ-188 ಮತ್ತು ಕಲ್ಯಾಣ ಕರ್ನಾಟಕ ವೃಂದ-28 ಒಟ್ಟು 216 ಅಭ್ಯರ್ಥಿಗಳ ಆಯ್ಕೆಪಟ್ಟಿಯನ್ನು ಅಂತಿಮಗೊಳಿಸಲಾಗಿರುತ್ತದೆ.
ಈ ಅಂತಿಮ ಆಯ್ಕೆ ಪಟ್ಟಿಯು ಘನ ಕರ್ನಾಟಕ ರಾಜ್ಯ ಆಡಳಿತ ಮಂಡಳಿ/ಮಾನ್ಯ ಉಚ್ಚ ನ್ಯಾಯಾಲಯ, / ಮಾನ್ಯ ಸರ್ವೋಚ್ಚ ನ್ಯಾಯಾಲಯ, ರವರ ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತದೆ.