ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ಗೆ ಪಂಚೆ ಧರಿಸಿ ಬಂದ ರೈತ ಫಕೀರಪ್ಪರನ್ನು ಒಳಗೆ ಬಿಡದ ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು. ಆಸ್ತಿತೆರಿಗೆ ಕೂಡ ಬಾಕಿ ಉಳಿಸಿಕೊಂಡಿದ್ದ ಜಿಟಿ ಮಾಲ್ಗೆ ಬೀಗ ಬಿದ್ದಿತ್ತು. ಇದೀಗ ಈ ಘಟನೆಯಿಂದ ಎಚ್ಚೆತ್ತುಕೊಂಡ ಬಿಬಿಎಂಪಿ ಹೊಸದೊಂದು ಆದೇಶ ಹೊರಡಿಸಲು ಸಜ್ಜಾಗಿದೆ.
ಹೌದು ಪಂಚೆ ಧರಿಸಿದ್ದ ವ್ಯಕ್ತಿಯನ್ನ ಒಳಗೆ ಬಿಡಲು ನಿರಾಕರಿಸಿದ್ದಕ್ಕಾಗಿ ಮಾಲ್ ಮಾಲೀಕರು ರೈತರ ಬಳಿ ಕ್ಷಮೆ ಕೂಡ ಕೇಳಿದ್ದರು. ಇದೀಗ ಈ ಘಟನೆ ಬಳಿಕ ಎಚ್ಚೆತ್ತ ಪಾಲಿಕೆ, ಬೆಂಗಳೂರಿನ ಮಾಲ್ಗಳಿಗೆ ಹೊಸ ನಿಯಮ ರೂಪಿಸಲು ಹೊರಟಿದೆ. ಡಿಸಿಎಂ ಡಿಕೆ ಶಿವಕುಮಾರ್ ಸೂಚನೆಯಂತೆ ಒಂದಷ್ಟು ನಿಯಮಗಳನ್ನ ರೆಡಿಮಾಡುತ್ತಿರುವ ಬಿಬಿಎಂಪಿ, ಇನ್ಮುಂದೆ ಮಾಲ್ಗಳಲ್ಲಿ ಬಟ್ಟೆ, ಜಾತಿ, ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಿದರೆ ಬಿಸಿ ಮುಟ್ಟಿಸಲು ಮುಂದಾಗಿದೆ.
ಬೆಂಗಳೂರಿನ ಬಹುತೇಕ ಮಾಲ್ಗಳಲ್ಲಿ ಉಡುಗೆ-ತೊಡುಗೆ ನೋಡಿ ಸಿಬ್ಬಂದಿ ವರ್ತನೆ ಬದಲಾಗುತ್ತಿರುವ ಬಗ್ಗೆ ಹಲವು ದೂರುಗಳು ಬಂದಿದ್ದವು. ಇನ್ಮುಂದೆ ತಾರತಮ್ಯ ಮಾಡಿದರೆ ಆ ಮಾಲ್ಗಳಲ್ಲಿರುವ ಎಲ್ಲಾ ಅಂಗಡಿಗಳ ಟ್ರೇಡ್ ಲೈಸೆನ್ಸ್ ರದ್ದು ಮಾಡಲು ಸಜ್ಜಾಗಿರುವ ಪಾಲಿಕೆ, ಶೀಘ್ರದಲ್ಲೇ ಆದೇಶ ಹೊರಡಿಸಲು ತಯಾರಿ ನಡೆಸಿದೆ.ಮಾಲ್ಗಳಿಗೆ ಹೊಸ ನಿಯಮ ರೂಪಿಸುವ ಬಗ್ಗೆ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೂಡ ಮಾಹಿತಿ ನೀಡಿದ್ದಾರೆ.