ಬೆಂಗಳೂರು: 2020 ಸಾಲಿನ ಸ್ವಾತಂತ್ರ್ಯೋತ್ಸವದ ಅಂಗವಾಗಿ ನೀಡಲಾಗುವ ರಾಷ್ಟ್ರಪತಿ ಪದಕವನ್ನು ಇಂದು ಬೆಂಗಳೂರಿನ ರಾಜಭವನದಲ್ಲಿ ಎಎಸ್ಐ ರಾಮಾಂಜನಯ್ಯರಿಗೆ ಪ್ರದಾನ ಮಾಡಲಾಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಎಎಸ್ಐ ರಾಮಾಂಜನಯ್ಯ ನೀಡಿ ಗೌರವಿಸಿದರು
ಇದೇ ವೇಳೆ ಸಮಾರಂಭದಲ್ಲಿ ಇತರೆ ರಾಷ್ಟ್ರಪತಿ ಪದಕ ಪುರಸ್ಕೃತ ಪೋಲಿಸ್ ಅಧಿಕಾರಿಗಳು ಕೂಡ ಹಾಜರಿದ್ದರು.
ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿ ಅರಗ ಜ್ಞಾನೇಂದ್ರ ಅವರು ಹಾಜರಿದ್ದು, ರಾಷ್ಟ್ರಪತಿ ಪದಕ ಪುರಸ್ಕೃತ ಪೋಲಿಸ್ ಅಧಿಕಾರಿಗಳಿಗೆ ಶುಭಕೋರಿದರು.
ಎಎಸ್ಐ ರಾಮಾಂಜನಯ್ಯ ಸೇವೆ ಹಿನ್ನಲೆ:
ಇವರು 1993 ರಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಸೇವೆಗೆ ಸೇರಿರುತ್ತಾರೆ ಇವರು ತನಿಖಾಧಿಕಾರಿಗೆ ಜಟಿಲವಾದ ಕೊಲೆ ಪ್ರಕರಣಗಳು, ಎನ್ಡಿಪಿಎಸ್, ಷೋಕ್ಟೋ ಪ್ರಕರಣಗಳ ತನಿಖೆಯಲ್ಲಿ ಸಹಾಯಕರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಇವರು ಚಿಕ್ಕನಾಯಕನಹಳ್ಳಿ, ತಿಲಕ್ ಪಾರ್ಕ್, ತುಮಕೂರು ಗ್ರಾಮಾಂತರ, ತುಮಕೂರು ಪಟ್ಟಣ, ಹೆಣ್ಣೂರು, ತಾವರೆಕೆರೆ, ಕೊರಟಗೆರೆ, ಚೆಲ್ಲೂರು ಮತ್ತು ಕೆಬಿ ಕ್ರಾಸ್ ಪೊಲೀಸ್ ಠಾಣಿಗಳಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ. 2012 ರಿಂದ 2017 ರ ಅವಧಿಯಲ್ಲಿ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ತನಿಖಾಧಿಕಾರಿಯವರಿಗೆ 848 ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಲು ಸಹಾಯಕರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಇವರು ಉತ್ತಮ ತನಿಖಾ ಸಹಾಯಕರಾಗಿ ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. ಜನವರಿ 2020ರಲ್ಲಿ ಎಎಸ್ಐ ಆಗಿ ಬಡ್ತಿ ಹೊಂದಿ ಕೆ.ಬಿ ಕ್ರಾಸ್ ಪೊಲೀಸ್ ಠಾಣೆಗೆ ನಿಯುಕ್ತಿಗೊಂಡಿರುತ್ತಾರೆ. ಇವರ ವೃತ್ತಿ ನಿಷ್ಠೆ, ಉತ್ತಮ ಸೇವೆಯನ್ನು ಮೆಚ್ಚಿ ರಾಷ್ಟ್ರಪತಿಗಳು 2020 ನೇ ಸಾಲಿನ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪೊಲೀಸ್ ಶ್ಲಾಘನೀಯ ಸೇವಾ ಪದಕವನ್ನು ನೀಡಿ ಗೌರವಿಸಿರುತ್ತಾರೆ.