ಸೂರತ್ (ಗುಜರಾತ್) : ಗುಜರಾತ್ ವಿಧಾನಸಭಾ ಚುನಾವಣೆ(Gujarat assembly election)ಗೂ ಮುನ್ನ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಬಂಡಾಯ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.
ಮುಂಬರುವ ಗುಜರಾತ್ ವಿಧಾನಸಭೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸುತ್ತಿರುವ 12 ಬಂಡಾಯಗಾರರನ್ನು ಗುಜರಾತ್ ಬಿಜೆಪಿ ಅಮಾನತುಗೊಳಿಸಿದೆ. 6 ಬಾರಿ ಶಾಸಕರಾಗಿದ್ದ ಮಧು ಶ್ರೀವಾಸ್ತವ ಮತ್ತು ಇಬ್ಬರು ಮಾಜಿ ಶಾಸಕರು ಸೇರಿದಂತೆ ಪಕ್ಷದ 12 ನಾಯಕರನ್ನು ಬಿಜೆಪಿ ಅಮಾನತು ಮಾಡಿದೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು ಎನ್ನಲಾಗಿದೆ.
ಹನ್ನೆರಡು ಬಂಡಾಯಗಾರರಲ್ಲಿ ಎಲ್ಲರೂ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಬಯಸಿದ್ದರು. ಭಾನುವಾರ ಏಳು ಬಂಡಾಯಗಾರರನ್ನು ಪಕ್ಷ ಅಮಾನತುಗೊಳಿಸಿದ ನಂತರ ಅಮಾನತುಗೊಂಡಿರುವ ಬಂಡಾಯಗಾರರ ಎರಡನೇ ಪಟ್ಟಿ ಇದಾಗಿದೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಕ್ಕಾಗಿ ಈ ಶಾಸಕರನ್ನು ಆರು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್ ಹೇಳಿಕೆ ನೀಡಿದ್ದಾರೆ.
ಅಮಾನತುಗೊಂಡಿರುವ ಬಿಜೆಪಿ ನಾಯಕರಲ್ಲಿ ಪಾದ್ರಾದಿಂದ ದಿನುಭಾಯಿ ಪಟೇಲ್, ವಘೋಡಿಯಾದಿಂದ ಮಧುಭಾಯಿ ಶ್ರೀವಾಸ್ತವ್ ಮತ್ತು ವಡೋದರಾ ಜಿಲ್ಲೆಯ ಕುಲದೀಪ್ ಸಿನ್ ರೌಲ್ ಸೇರಿದ್ದಾರೆ. ಪಂಚಮಹಲ್ ಜಿಲ್ಲೆಯ ಶಾಹೆರಾದಿಂದ ಬಿ ಪಾಗಿ, ಅರಾವಳಿ ಜಿಲ್ಲೆಯ ಧವಲ್ ಸಿನ್ಹ್ ಝಾಲಾ ಮತ್ತು ಮೆಹ್ಸಾನಾದಿಂದ ರಾಮ್ ಸಿನ್ಹ್ ಠಾಕೋರ್ ಅವರು ಸಹ ಸೇರಿದ್ದಾರೆ.
ಆನಂದ್, ಬನಸ್ಕಾಂತ ಮತ್ತು ಮಹಿಸಾಗರ್ ಜಿಲ್ಲೆಗಳಿಂದ ತಲಾ ಇಬ್ಬರನ್ನು ಅಮಾನತುಗೊಳಿಸಲಾಗಿದೆ. ಮಾನವಜಿಭಾಯ್ ದೇಸಾಯಿ ಮತ್ತು ಎಲ್ ಠಾಕೋರ್ ಬನಸ್ಕಾಂತದಿಂದ, ಎಸ್ಎಂ ಬಾಂತ್ ಮತ್ತು ಜೆಪಿ ಪಟೇಲ್ ಮಹಿಸಾಗರದಿಂದ ಮತ್ತು ರಮೇಶ್ ಝಾಲಾ ಮತ್ತು ಅಮರ್ಷಿ ಭಾಯಿ ಝಾಲಾ ಅವರನ್ನು ಆನಂದ್ ಜಿಲ್ಲೆಯಿಂದ ಅಮಾನತುಗೊಳಿಸಲಾಗಿದೆ.
BIGG NEWS : ಬೆಂಗಳೂರಿನ 10 ಪ್ರದೇಶಗಳಲ್ಲಿ ‘ಟ್ರಾಫಿಕ್ ಕಡಿವಾಣ’ಕ್ಕೆ ಸೂಚನೆ | Bangalore Traffic
BIGG NEWS: ಬೆಳ್ಳಂಬೆಳಗ್ಗೆ ಪೊಲೀಸರ ಭರ್ಜರಿ ಕಾರ್ಯಾಚರಣೆ; ರೌಡಿಶೀಟರ್ಗಳ ಮನೆ ಮೇಲೆ ದಾಳಿ
BREAKING NEWS : ಬೆಂಗಳೂರಿನಲ್ಲಿ ಹಲ್ಲೆ ನಡೆಸಿದ ದರೋಡೆಕೋರನ ಕಾಲಿಗೆ ಪೊಲೀಸರಿಂದ ಫೈರಿಂಗ್
BIGG NEWS : ಬೆಂಗಳೂರಿನ 10 ಪ್ರದೇಶಗಳಲ್ಲಿ ‘ಟ್ರಾಫಿಕ್ ಕಡಿವಾಣ’ಕ್ಕೆ ಸೂಚನೆ | Bangalore Traffic