ಉತ್ತರಾಖಂಡ: ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ, ವಿಜ್ಞಾನಕ್ಕೆ ಅರ್ಥವಾಗದ ಹಲವು ರಹಸ್ಯಗಳು ಇನ್ನೂ ಇವೆ. ವಿಜ್ಞಾನಿಗಳು ಅವುಗಳಿಗೆ ಉತ್ತರ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಹಲವು ಪ್ರಶ್ನೆಗಳು ಅವರಿಗೆ ಸವಾಲುಗಳನ್ನು ಒಡ್ಡುತ್ತಲೇ ಇವೆ. ಇತ್ತೀಚೆಗೆ, ಇನ್ನೊಂದನ್ನು ಘಟನೆ ವಿಜ್ಞಾನಿಗಳಿಗೆ ಸವಾಲಾಗಿದೆ. ಇದು ಚಂದ್ರಗ್ರಹಣದೊಂದಿಗೆ ಸಂಪರ್ಕ ಹೊಂದಿದೆ ಎಂದು ಹೇಳಲಾಗುತ್ತದೆ. ಅದೇನೆಂದು ನೋಡೋಣ ಬನ್ನಿ…
ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಹಲ್ದ್ವಾನಿಯ ಮನೆಯೊಂದರಲ್ಲಿ ನಡೆದಿರುವ ಘಟನೆ ಇದೀಗ ದೇಶಾದ್ಯಂತ ಸುದ್ದಿಯಾಗುತ್ತಿದೆ. ಕಳೆದ 8 ದಿನಗಳಿಂದ ರಾತ್ರೋರಾತ್ರಿ ಮನೆಯಲ್ಲಿರುವ ವಸ್ತುಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಚಂದ್ರಗ್ರಹಣ ದಿನದಿಂದ ಈ ರೀತಿ ಆಗುತ್ತಿದ್ದು, ತುಂಬಾ ಭಯಗೊಂಡಿದ್ದೇವೆ ಎನ್ನುತ್ತಾರೆ ಕುಟುಂಬಸ್ಥರು.
ನವೆಂಬರ್ 8 ರಂದು ಚಂದ್ರಗ್ರಹಣ ಸಂಭವಿಸಿತ್ತು. ಇದಾದ ನಂತ್ರ, ನವೆಂಬರ್ 9 ರಂದು ನೇಪಾಳದಲ್ಲಿ ಭೂಕಂಪ ಸಂಭವಿಸಿತ್ತು. ಇದರ ಪ್ರಭಾವ ದೆಹಲಿ ಸೇರಿದಂತೆ ಉತ್ತರದ ರಾಜ್ಯಗಳ ಮೇಲೆ ಬೀರಿತ್ತು. ಅವುಗಳಲ್ಲಿ ಉತ್ತರಾಖಂಡವೂ ಸೇರಿದೆ. ಈ ಎರಡು ಘಟನೆಗಳ ನಂತರ, ನಮ್ಮ ಮನೆಯಲ್ಲಿ ರಾತ್ರಿ ಹೊತ್ತಿನಲ್ಲಿ ಬೆಂಕಿ ಹೊತ್ತಿಕೊಂಡು ಸರಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ ಎನ್ನುತ್ತಾರೆ ಕುಟುಂಬಸ್ಥರು.
ಈ ಘಟನೆಯ ನಂತರ ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದಾಗ ಅವರು ಬಂದು ಮನೆಗೆ ವಿದ್ಯುತ್ ಸರಬರಾಜು ನಿಲ್ಲಿಸಿದರು. ಆದರೆ, ವಿದ್ಯುತ್ ಬೋರ್ಡ್ ಗಳು, ತಂತಿಗಳು ಉರಿಯುತ್ತಿವೆ. 8 ದಿನದಲ್ಲಿ 20 ಅಗ್ನಿ ಅವಘಡ ಸಂಭವಿಸಿದೆ. ಇದರಿಂದಾಗಿ ಕಬೋರ್ಡ್ ನಲ್ಲಿಟ್ಟಿದ್ದ ಹಾಸಿಗೆ, ಬಟ್ಟೆಗಳೂ ಸುಟ್ಟು ಕರಕಲಾಗಿವೆ ಎಂದು ಕುಟುಂಬಸ್ಥ ತಿಳಿಸಿದ್ದಾರೆ.
ಶಾರ್ಟ್ ಸರ್ಕ್ಯೂಟ್ ಆಗುತ್ತಿರುವುದು ಏಕೆ?
ವಿದ್ಯುತ್ ಪೂರೈಕೆ ಇಲ್ಲದಿದ್ದರೂ ಆ ಮನೆಯಲ್ಲಿ ಕೂಲರ್ ನಲ್ಲಿ ಆಗಾಗ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಳ್ಳುತ್ತಿತ್ತು. ಅದರಂತೆ ವಿದ್ಯುತ್ ಅಧಿಕಾರಿಗಳು ಮನೆಯಲ್ಲಿ ಅರ್ಥಿಂಗ್ ವ್ಯವಸ್ಥೆ ಮಾಡಿದರು. ಇದರಿಂದ ವಿದ್ಯುತ್ ಶಾಕ್ ತಪ್ಪಿಸಬಹುದು ಎಂದು ಹೇಳಿದರು. ಇದಾದ ಬಳಿಕವೂ ಬೆಂಕಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿತ್ತು. ಇದು ಏಕೆ ಹೀಗೆ ಎಂಬುದು ತಿಳಿದಿಲ್ಲ. ಚಂದ್ರಗ್ರಹಣದ ವೇಳೆ ಏನೋ ಬದಲಾವಣೆಯಾಗಿದೆ, ಇನ್ನು ಕೆಲವರು ಭೂಕಂಪವು ಒಂದು ವ್ಯತ್ಯಾಸವನ್ನುಂಟು ಮಾಡಿದೆ ಎಂದು ಸ್ಥಳೀಯರು ಹೇಳುತ್ತಾರೆ. ಆದ್ರೆ, ಬೆಂಕಿಗೆ ಕಾರಣವು ಇನ್ನೂ ನಿಗೂಢವಾಗಿದೆ.
ವಿಷಯ ತಿಳಿದು ಸ್ಥಳೀಯರು ಆ ಮನೆಗೆ ಬಂದು ಬೆಂಕಿಯನ್ನು ನೋಡಲು ಬರುತ್ತಿದ್ದಾರೆ. ಈ ಬೆಂಕಿ ಹೀಗೆ ಮುಂದುವರಿದರೆ ವಿಜ್ಞಾನಿಗಳು ಈ ಬಗ್ಗೆ ಅಧ್ಯಯನ ನಡೆಸುವ ಸಾಧ್ಯತೆಗಳಿವೆ. ಭೂಮಿಯೊಳಗೆ ಸುಡುವ ಅನಿಲಗಳ ಸೋರಿಕೆಯಿಂದಾಗಿ ಇದು ಸಂಭವಿಸುತ್ತದೆ ಎಂದು ನಂಬಲಾಗಿದೆ. ಭೂಕಂಪದಿಂದಾಗಿ ಅನಿಲಗಳು ಸೋರಿಕೆಯಾಗಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಕಾರಣ ಮಾತ್ರ ಇನ್ನೂ ನಿಗೂಢವಾಗಿದೆ.
BIGG NEWS : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ‘ಮಹದೇಶ್ವರ ಸ್ವಾಮಿ ಜಾತ್ರೆ’ಗೆ ನಿರ್ಬಂಧ | Bandipur tiger
SHOCKING NEWS: ತನ್ನ ತಂದೆ-ಚಿಕ್ಕಪ್ಪನಿಂದಲೇ ಅತ್ಯಾಚಾರ, ಅಜ್ಜನಿಂದ ಕಿರುಕುಳ: ಠಾಣೆ ಮೆಟ್ಟಿಲೇರಿದ ಬಾಲಕಿ
BIG NEWS : ವಿಡಿ ಸಾವರ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ: ರಾಹುಲ್ ಗಾಂಧಿ ವಿರುದ್ಧ ದೂರು ದಾಖಲು
BIGG NEWS : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ‘ಮಹದೇಶ್ವರ ಸ್ವಾಮಿ ಜಾತ್ರೆ’ಗೆ ನಿರ್ಬಂಧ | Bandipur tiger