ಬರೇಲಿ(ಉತ್ತರ ಪ್ರದೇಶ): ದಿಬ್ರುಗಢದಿಂದ ನವದೆಹಲಿಗೆ ತೆರಳುತ್ತಿದ್ದ 20503 ರಾಜಧಾನಿ ಎಕ್ಸ್ಪ್ರೆಸ್ ರೈಲಿಗೆ ಬರೇಲಿಯಲ್ಲಿ ಹತ್ತುತ್ತಿದ್ದ ಸೇನಾ ಯೋಧನನ್ನು ಟಿಟಿಇ ತಳ್ಳಿದ ಪರಿಣಾಮ, ಆತ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಯೋಧ ತನ್ನ ಕಾಲು ಕಳೆದುಕೊಂಡು ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ.
ಗುರುವಾರ ಬರೇಲಿ ಜಂಕ್ಷನ್ ನ ಪ್ಲಾಟ್ ಫಾರಂ ನಂಬರ್ 2ರಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಸಿಟ್ಟಿಗೆದ್ದ ಯೋಧರು ಟಿಟಿಇಗೆ ಥಳಿಸಿದ್ದಾರೆ. ಘಟನೆ ಬಳಿಕ ರೈಲಿನಲ್ಲಿ ನಿಯೋಜನೆಗೊಂಡಿದ್ದ ದೆಹಲಿಯ ಟಿಟಿಇ ಮೊಬೈಲ್ ಸ್ವಿಚ್ ಮಾಡಿ ಪರಾರಿಯಾಗಿದ್ದಾನೆ.
ರೈಲ್ವೇ ಅಧಿಕಾರಿಗಳ ಪ್ರಕಾರ, ಬೋರ್ ಮತ್ತು ಸೋನು ನಡುವೆ ಟಿಕೆಟ್ ವಿಚಾರವಾಗಿ ವಾಗ್ವಾದ ನಡೆದಿದೆ. ಕೋಪದ ಭರದಲ್ಲಿ, ಬೋರ್ ಸೇನಾ ಸಿಬ್ಬಂದಿಯನ್ನು ಹೊರಗೆ ತಳ್ಳಿದ್ದು, ಯೋಧ ರೈಲಿನ ಕೆಳಗೆ ಬಿದ್ದನು. ಕೂಡಲೇ ಅವರನ್ನು ಸೇನಾ ಆಸ್ಪತ್ರೆಗೆ ಸಾಗಿಸಲಾಯಿತು. ಈ ವೇಳೆ, ಯೋಧ ತನ್ನ ಕಾಲು ಕಳೆದುಕೊಂಡಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
“ಟಿಟಿಇ ಬೋರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆತ ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ” ಎಂದು ಸರ್ಕಾರಿ ರೈಲ್ವೆ ಪೊಲೀಸ್ ಸ್ಟೇಷನ್ ಹೌಸ್ ಆಫೀಸರ್ ಅಜಿತ್ ಪ್ರತಾಪ್ ಸಿಂಗ್ ಹೇಳಿದ್ದಾರೆ. ಘಟನೆಯ ನಂತರ ಕೆಲವು ಸಹ ಪ್ರಯಾಣಿಕರು ಟಿಟಿಇಯನ್ನು ಥಳಿಸಿದ್ದಾರೆ ಎಂದು ವರದಿಯಾಗಿದೆ.
WATCH VIDEO: ಐವರು ರಷ್ಯಾ ಸೈನಿಕರನ್ನು ಹೊಡೆದುರುಳಿಸಿದ ಉಕ್ರೇನ್ ಸೇನೆ… ವಿಡಿಯೋ ವೈರಲ್
BIGG NEWS : ರಾಜ್ಯದಲ್ಲಿ ತಾಪಮಾನ ಕುಸಿತ : ಮೈನಡುಗುವ ಚಳಿಗೆ ಜನರು ತತ್ತರ!
BIG NEWS: ಇಂದು ಬೆಳಗ್ಗೆ 11.30 ಕ್ಕೆ ದೇಶದ ಮೊದಲ ಖಾಸಗಿ ರಾಕೆಟ್ ʻವಿಕ್ರಮ್-ಎಸ್ʼ ಉಡಾವಣೆ | Vikram-S rocket
WATCH VIDEO: ಐವರು ರಷ್ಯಾ ಸೈನಿಕರನ್ನು ಹೊಡೆದುರುಳಿಸಿದ ಉಕ್ರೇನ್ ಸೇನೆ… ವಿಡಿಯೋ ವೈರಲ್