ಗುರುಗ್ರಾಮ್(ಹರಿಯಾಣ): ಕುಡಿದ ಮತ್ತಿನಲ್ಲಿ ಯುವಕರ ಗುಂಪೊಂದು ಕಾರು ಸ್ಟಂಟ್ ಮಾಡಲು ಹೋಗಿ ಅಮಾಯಕನೋರ್ವನ ಪ್ರಾಣ ತೆಗೆದಿರುವ ಘಟನೆ ಗುರುಗ್ರಾಮದಲ್ಲಿ ಭಾನುವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಭಾನುವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಗುರುಗ್ರಾಮದ ಉದ್ಯೋಗ್ ವಿಹಾರ್ ಹಂತ-4 ರಲ್ಲಿ ಕುಡಿದ ಮತ್ತಿನಲ್ಲಿ ಯುವಕರ ಗುಂಪೊಂದು ಕಾರು ಸ್ಟಂಟ್ ಮಾಡಲು ಯತ್ನಿಸಿದೆ. ಈ ವೇಳೆ ವೇಳೆ ವೇಗವಾಗಿ ಬಂದ ಕಾರು ಅಂಗಡಿ ಮುಂದೆ ನಿಂತಿದ್ದವರನ್ನು ಗುದ್ದಿದೆ. ಅಷ್ಟಕ್ಕೂ ಸುಮ್ಮನಾಗದ ಕಾರಿನಲ್ಲಿದ್ದವರು, ಮತ್ತೆ ಕಾರನ್ನು ಚಲಾಯಿಸಿಕೊಂಡು ಬಂದಿದ್ದಾರೆ. ಈ ವೇಳೆ ಒಬ್ಬ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
#Trending #TrendingNow #ViralVideos #Video #CCTV @gurgaonpolice arrests 7 for allegedly murdering a man in Udyog vihar while driving drunk and reckless. #accidentefatal #drunk #driving @TrafficGGM #Accidents #Gurgaon #Haryana pic.twitter.com/J5UJyu8o3W
— Sumedha Sharma (@sumedhasharma86) November 7, 2022
ವಿಡಿಯೋಸಲ್ಲಿ ಕಾರಿನಲ್ಲಿ ಕುಳಿತಿರುವವರು ಸಾಹಸ ಪ್ರದರ್ಶಿಸುವುದನ್ನು ನೋಡಬಹುದು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, 7 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.
BREAKING NEWS : ಕಲಬುರಗಿಯಲ್ಲಿ ಭೀಕರ ರಸ್ತೆ ಅಪಘಾತ : ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು
BIGG NEWS: ಯಾವುದೋ ಪುಸ್ತಕ ನೋಡಿಕೊಂಡು ಹೇಳಿಕೆ ಕೊಡುವುದಲ್ಲ: ಸತೀಶ್ ಜಾರಕಿಹೊಳಿ ವಿರುದ್ಧ ಸಿಎಂ ಗರಂ
BREAKING NEWS : ಕಲಬುರಗಿಯಲ್ಲಿ ಭೀಕರ ರಸ್ತೆ ಅಪಘಾತ : ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು