ಬೆಂಗಳೂರು: ಕಾರ್ತಿಕ ಮಾಸದ ಹುಣ್ಣಿಮೆ ಎರಡನೇ ಗ್ರಹಣ ಇಂದು ಸಂಭವಿಸುತ್ತಿದೆ. ಇಂದು ಸಂಜೆ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ದೇವಾಲಯಗಳು ಬಂದ್ ಆಗಲಿವೆ.
BIG NEWS : ಸಿಐಡಿಗೆ ಹೆಗಲಿಗೆ ಹೊನ್ನಾಳಿ ಚಂದ್ರಶೇಖರ್ ಸಾವಿನ ಪ್ರಕರಣ?
ಮೋಕ್ಷದ ಬಳಿಕವಷ್ಟೇ ಭಕ್ತರಿಗೆ ದರ್ಶನಕ್ಕೆ ಅವಕಾಶವಿದೆ.ಪ್ರಮುಖವಾಗಿ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನ, ಕೋಟೆ ವೆಂಕಟೇಶ್ವರ ದೇವಸ್ಥಾನ, ಮಲ್ಲೇಶ್ವರದ ಕಾಡು ಮಲ್ಲಿಕಾರ್ಜುನ ದೇವಸ್ಥಾನ, ಬಸವನಗುಡಿ ದೊಡ್ಡ ಗಣೇಶ, ಬನಶಂಕರಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಭಕ್ತರಿಗೆ ದರ್ಶನ ಪಡೆಯಲು ಅವಕಾಶವಿದೆ.
BIG NEWS : ಸಿಐಡಿಗೆ ಹೆಗಲಿಗೆ ಹೊನ್ನಾಳಿ ಚಂದ್ರಶೇಖರ್ ಸಾವಿನ ಪ್ರಕರಣ?
ಮಧ್ಯಾಹ್ನದ ಬಳಿಕ ದೇಗುಲಗಳು ಮುಚ್ಚಲಿದ್ದು, ಸಂಜೆ ಗ್ರಹಣದ ಬಳಿಕವೇ ಶುದ್ಧಿಕಾರ್ಯ ನಡೆಸಿ ಅನುವು ಮಾಡಿಕೊಡಲಾಗುತ್ತದೆ.ಈ ಕುರಿತು ಗವಿಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಡಾ. ಸೋಮಸುಂದರ ದೀಕ್ಷಿತ್ ಮಾತನಾಡಿ, “ಗ್ರಹಣದಿಂದ ಸಾಕಷ್ಟು ತೊಂದರೆ ಆಗಬಹುದು. ಭರಣಿ ನಕ್ಷತ್ರ, ಮೇಷ ರಾಶಿಯವರಿಗೆ ಗ್ರಹಣ ತೊಂದರೆ ಸಾಧ್ಯತೆಯಿದೆ.