ಉಡುಪಿ : ನಗರದ ಕಾಪು ಬಸ್ ನಿಲ್ದಾಣದ ಬಳಿ ಬಿಜೆಪಿ ಜನಸಂಕಲ್ಪ ಸಮಾವೇಶ ನಡೆಯಿತು. ಕಾರ್ಯಕ್ರಮ ಉದ್ದೇಶಿಸಿ ಸಿಎಂ ಬೊಮ್ಮಾಯಿ ಮಾತನಾಡಿದ ಹೈಲೆಟ್ಸ್.. ಇಲ್ಲಿದೆ ಓದಿ
BREAKING NEWS : 40 ವಿದ್ಯಾರ್ಥಿಗಳೊಂದಿಗೆ ಪ್ರವಾಸಕ್ಕೆ ಹೊರಟಿದ್ದ ಶಾಲಾ ಬಸ್ ಅಪಘಾತ : ಹಾಸನದಲ್ಲಿ ತಪ್ಪಿದ ದುರಂತ
ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 10 ಲಕ್ಷ ಕೋಟಿ ರೂ. ಹೂಡಿಕೆ ಪ್ರಸ್ತಾವನೆ ಬಂದಿದ್ದು, ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ಇನ್ನು, ಸಾಮಾಜಿಕ ನ್ಯಾಯ, ಅಹಿಂದ ಬರೀ ಭಾಷಣ, ಉದರ ಪೋಷಣೆಗಲ್ಲ. ಜನತೆ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಕಾಂಗ್ರೆಸಿಗರೇ ನೀವು ಅಧಿಕಾರಕ್ಕೆ ಬರೋದು ಒತ್ತಟ್ಟಿಗಿರಲಿ, ಮೊದಲು ನಿಮ್ಮ ನಿಮ್ಮ ಕ್ಷೇತ್ರ ಉಳಿಸಿಕೊಳ್ಳಿ. ವಕ್ಛ್ ಆಸ್ತಿ ದುರ್ಬಳಕೆ, ತುಷ್ಠೀಕರಣ, ಒಡೆದಾಳುವ ನೀತಿಗೆ ಜನತೆ ತಕ್ಕ ಪಾಠ ಕಲಿಸಿದ್ದಾರೆ, ಮತ್ತೆ ಮುಖ ತೋರಿಸುವ ನೈತಿಕ ಹಕ್ಕು ಕಾಂಗ್ರೆಸಿಗಿಲ್ಲ ಎಂದು ಕಿಡಿಕಾರಿದರು.
BREAKING NEWS : 40 ವಿದ್ಯಾರ್ಥಿಗಳೊಂದಿಗೆ ಪ್ರವಾಸಕ್ಕೆ ಹೊರಟಿದ್ದ ಶಾಲಾ ಬಸ್ ಅಪಘಾತ : ಹಾಸನದಲ್ಲಿ ತಪ್ಪಿದ ದುರಂತ
ಅಕ್ಕಿ, ಸೋಲಾರ್, ಬಿಡಿಎ ಸೈಟು, ನೀರಾವರಿ ಯೋಜನೆಗಳ ಭ್ರಷ್ಟಾಚಾರ ಕಾಂಗ್ರೆಸ್ ಕೊಡುಗೆ. ಅವುಗಳ ತನಿಖೆ ಪ್ರಗತಿಯಲ್ಲಿದೆ. ಆರು ದಶಕಗಳಿಂದ ಆಡಳಿತದಲ್ಲಿದ್ದ ನಿಮಗೆ (ಕಾಂಗ್ರೆಸ್) ಎಸ್ ಸಿಎಸ್ ಟಿಗಳ ಮೀಸಲು ಹೆಚ್ಚಳಕ್ಕೆ ಧಮ್ ಇರಲಿಲ್ವೇ? ಎಂದು ಪ್ರಶ್ನಿಸಿದ ಬಸವರಾಜ ಬೊಮ್ಮಾಯಿ, ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲನ್ನು ಸುಪ್ರೀಂ ಎತ್ತಿ ಹಿಡಿದಿದ್ದು, ವಿದ್ಯೆ, ಉದ್ಯೋಗದ ಮೂಲಕ ಸ್ವಾವಲಂಬನೆ ಸಾಧ್ಯ. ಬ್ರಹ್ಮಶ್ರೀ ನಾರಾಯಣ ಗುರು ನಿಗಮ ರಚನೆ ಬಗ್ಗೆ ಎಲ್ಲರ ಜತೆ ಚರ್ಚಿಸಿ ಸೂಕ್ತ ತೀರ್ಮಾನ ಮಾಡಲಾಗುವುದು. ರಾಜ್ಯದ ಸಮಗ್ರ ಅಭಿವೃದ್ಧಿಗೆ ಡಬ್ಬಲ್ ಇಂಜಿನ್ ಸರಕಾರಕ್ಕೆ ಮುಂದೆಯೂ ಜನಾಶೀರ್ವಾದ ಇರಲಿ ಎಂದರು.
ಸಿಎಂ ಬೊಮ್ಮಾಯಿ ಭಾಷಣದ ಮುಖ್ಯಾಂಶಗಳು
- ಕರಾವಳಿ ಜಿಲ್ಲೆಯ ಬಂದರುಗಳ 24 ಯೋಜನೆಗಳಿಗೆ ಕೇಂದ್ರದಿಂದ ಸಾಗರಮಾಲಾ ಯೋಜನೆಯಡಿ 1,774 ಕೋಟಿ ರೂ.
- ಸಿಆರ್ಝೆಡ್ ನಿಯಮ ಸರಳೀಕರಣದಿಂದ ಕಡಲ ತೀರದ ಆರ್ಥಿಕತೆ, ಪ್ರವಾಸೋದ್ಯಮ ಅಭಿವೃದ್ಧಿ, ಉದ್ಯೋಗ ಸೃಷ್ಟಿ
- ಗತಿ ಶಕ್ತಿ ಯೋಜನೆಯಡಿ ಕರಾವಳಿಯ ಬಂದರುಗಳನ್ನು ಸರಕು ಸಾಗಣೆ, ನಿರ್ವಹಣೆಗೆ ಮುಖ್ಯ ನಗರಕ್ಕೆ ಸಂಪರ್ಕ ವ್ಯವಸ್ಥೆ
- 2025ಕ್ಕೆ ದೇಶದ 5 ಬಿಲಿಯನ್ ಡಾಲರ್ ಆರ್ಥಿಕತೆಯ ಗುರಿಗೆ ರಾಜ್ಯದ ಒಂದು ಬಿಲಿಯನ್ ಡಾಲರ್ ಕೊಡುಗೆ
- ಎರಡು ಲಕ್ಷ ಮೀನುಗಾರರ ಮಕ್ಕಳಿಗೆ ವಿದ್ಯಾ ನಿಧಿ ಲಾಭ, 5,000 ಮೀನುಗಾರರಿಗೆ ಮತ್ಸ್ಯಾಶ್ರಯ, ನಾಡದೋಣಿಗಳಿಗೆ ಸೀಮೆ ಎಣ್ಣೆ ಹೆಚ್ಚುವರಿ ಕೋಟಾ ಕೇಂದ್ರದಿಂದ ಕೊಡಿಸಲು ಯತ್ನ
- ರೈತರಿಂದ ಕುಚ್ಚಲು ಭತ್ತ ಖರೀದಿಸಿ ಪಡಿತರ ಮೂಲಕ ಕುಚ್ಚಲಕ್ಕಿ ವಿತರಣೆಗೆ ಸೋಮವಾರವೇ ಆದೇಶ
- 8 ಮೀನುಗಾರಿಕಾ ಬಂದರುಗಳ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ಆರಂಭ
- ಮೀನುಗಾರರಿಗೆ ಶೇ.40 ಸಹಾಯಧನದ 100 ಹೈಸ್ಪೀಡ್ ಬೋಟ್ (ಡೀಪ್ ಸೀ) ತಲಾ 1.5 ಕೋಟಿ ರೂ.ವೆ ಚ್ಚದಲ್ಲಿ ನೀಡಲು ಟೆಂಡರ್ ಪ್ರಕ್ರಿಯೆ.
- ನಾಡ ದೋಣಿಗಳನ್ನು ಸೀಮೆಎಣ್ಣೆ ಬದಲು ಪೆಟ್ರೋಲ್ಗೆ ಮೇಲ್ದರ್ಜೆಗೇರಿಸಲು ಸಹಾಯಧನವನ್ನು ಮುಂದಿನ ಬಜೆಟ್ನಲ್ಲಿ ಘೋಷಣೆ
BREAKING NEWS : 40 ವಿದ್ಯಾರ್ಥಿಗಳೊಂದಿಗೆ ಪ್ರವಾಸಕ್ಕೆ ಹೊರಟಿದ್ದ ಶಾಲಾ ಬಸ್ ಅಪಘಾತ : ಹಾಸನದಲ್ಲಿ ತಪ್ಪಿದ ದುರಂತ