ತುಮಕೂರು: ಭಾರತ್ ಜೋಡೋ ಯಾತ್ರೆಯ ವೇಳೆಯಲ್ಲಿ ರಾಹುಲ್ ಗಾಂಧಿಯವರು ( Rahul Gandhi ) ಬುಡಕಟ್ಟು ಸಮುದಾಯದವರೊಂದಿಗೆ ನಿಗದಿಯಾಗಿತ್ತು. ಈ ಸಂವಾದಕ್ಕೆ ತಳ ಸಮುದಾಯವಾದಂತ ಕಾಡುಗೊಲ್ಲರ ಮುಖಂಡರನ್ನು ( Kadugolla Leader ) ಆಹ್ವಾನಿಸಲಾಗಿತ್ತು. ಆದ್ರೇ ಈ ಸಂವಾದಕ್ಕೆ ರಾಹುಲ್ ಗಾಂಧಿಯವರೊಂದಿಗೆ ಸಂವಾದಕ್ಕೆ ಬಿಡದೇ ಕಾಡುಗೊಲ್ಲ ಮುಖಂಡರನ್ನು ಕತ್ತು ಹಿಡಿದು ಕೈ ಮುಖಂಡರು ತಳ್ಳಿರೋ ಆರೋಪ ಕೇಳಿ ಬಂದಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಸಮಯದ್ಲಲಿ ರಾಯಚೂರು ಜಿಲ್ಲೆಯಲ್ಲಿ ಸಂವಾದ ನಿಗದಿಯಾಗಿತ್ತು. ಈ ಸಭೆಯಲ್ಲಿ ಭಾಗವಹಿಸಿ, ತಮ್ಮ ಅಹವಾಲು ಹೇಳಿಕೊಳ್ಳಲು ಅವಕಾಶ ನೀಡದೇ ಕಾಂಗ್ರೆಸ್ ಮುಖಂಡ ಹೆಚ್ ಎಂ ರೇವಣ್ಣ ಕತ್ತು ಹಿಡಿದು ತಳ್ಳಿರೋದಾಗಿ ತಿಳಿದು ಬಂದಿದೆ.
ಈ ಕುರಿತಂತೆ ಮಾತನಾಡಿರುವಂತ ಕಾಡುಗೊಲ್ಲ ಅಸ್ಮಿತೆ ಹೋರಾಟ ಸಮಿತಿಯ ಅಧ್ಯಕ್ಷ ಜಿ.ಕೆ ನಾಗಣ್ಣ ಅವರು, ಅಕ್ಟೋಬರ್ 21ರಂದು ಗಿಲ್ಲೆಸೂಗೂರಿನಲ್ಲಿ ತಳ ಸಮುದಾಯಗಳ ಮುಖಂಡರೊಂದಿಗೆ ಸಂವಾದ ನಿಗದಿಯಾಗಿತ್ತು. ತುಮಕೂರು ಜಿಲ್ಲೆಯಿಂದ ತಮಗೆ ಆಹ್ವಾನ ನೀಡಿದ್ದರು. ಅಲ್ಲಿಗೆ ಹೋಗಿದ್ದೆವು. ಆದ್ರೇ ನಮಗೆ ಅವಕಾಶ ನೀಡದೇ ಮುಖಂಡ ಹೆಚ್ ಎಂ ರೇವಣ್ಣ ಹಾಗೂ ಅವರ ಜತೆಯಲ್ಲಿ ಇದ್ದವರು ಹೊರದಬ್ಬಿದರು ಎಂದು ಹೇಳಿದ್ದಾರೆ.
ಸಂವಾದ ನಡೆಯಬೇಕಿದ್ದ ಕೊಠಡಿಗೆ ಹೋಗುವ ಸಮಯದಲ್ಲಿ ವಕೀಲ ಪ್ರೊ.ರವಿವರ್ಮ ಕುಮಾರ್ ನೇತೃತ್ವದಲ್ಲಿ ಬಂದಿದ್ದ ಹಿಂದುಳಿದ ವರ್ಗಗಳ ಒಕ್ಕೂಟದ ಮುಖಂಡರಾದ ರಾಮಚಂದ್ರ, ಹೆಚ್ ಎಂ ರೇವಣ್ಣ, ಭೈರತಿ ಸುರೇಶ್ ಸೇರಿ ಇತರರು ನಮ್ಮನ್ನು ತಡೆದರು. ಅಷ್ಟೇ ಅಲ್ಲದೇ ನೀವು ಯಾಕೆ ಬಂದಿದ್ದೀರಿ ಎಂದ ಕಾಂಗ್ರೆಸ್ ಮುಖಂಡ ಹೆಚ್ ಎಂ ರೇವಣ್ಣ ಅವರು ಕತ್ತಿನ ಪಟ್ಟಿ ಹಿಡಿದು ಹೊರಕ್ಕೆ ನೂಕಿದರು ಎಂದು ತಿಳಿಸಿದ್ದಾರೆ.
ಕೆ.ಎಸ್ ಈಶ್ವರಪ್ಪ ಹದ್ದುಬಸ್ತಿನಲ್ಲಿ ಶಿವಮೊಗ್ಗ ಶಾಂತವಾಗಿರುತ್ತದೆ – ಸಿ.ಎಂ ಇಬ್ರಾಹಿಂ
ನಾವು ಕಾಡುಗೊಲ್ಲ ಸಮುದಾಯದ ಪ್ರತಿನಿಧಿಯಾಗಿ ಬಂದಿದ್ದೇವೆ. ರಾಹುಲ್ ಗಾಂಧಿ ಜೊತೆಗೆ ಮಾತನಾಡಲು ಸಮಯ ನಿಗದಿಯಾಗಿದೆ. ವಿಶೇಷ ಪಾಸ್ ಕೊಟ್ಟಿದ್ದಾರೆ. ನಿಮ್ಮಂತವರು ನಮ್ಮಂತಹ ತಬ್ಬಲಿ ಸಮುದಾಯದ ಮೇಲೆ ದೌರ್ಜನ್ಯ ನಡೆಸಬಾರದು. ಒಳಗಗೆ ಬಿಡಿ ಎಂದಾಗ, ರೇವಣ್ಣ ವ್ಯಾಗ್ರರಾದರು. ನಮ್ಮ ತಂಡದ ಮೂವರನ್ನು ಬಿಡದೇ, ಹೊರಗೆ ನೂಕಿದರು ಎಂಬುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವಂತ ಕಾಂಗ್ರೆಸ್ ಮುಖಂಡ ಹೆಚ್ ಎಂ ರೇವಣ್ಣ ಅವರು ಕಾಡುಗೊಲ್ಲ ಸಮುದಾಯದ ನಾಗಣ್ಣ ಯಾರು ಎಂಬುದೇ ನನಗೆ ಗೊತ್ತಿಲ್ಲ. ಅವರನ್ನು ನಾನು ಕತ್ತು ಹಿಡಿದು ಹೊರಕ್ಕೆ ತಳ್ಳಿಲ್ಲ. ಹಿಂದುಳಿದ ಜಾತಿಗಳ ಒಕ್ಕೂಟ ಕೊಟ್ಟಿದ್ದ ಪಟ್ಟಿಯಲ್ಲಿ ಅವರು ಹೆಸರು ಇರಲಿಲ್ಲ. ರಾಹುಲ್ ಗಾಂಧಿ ಜೊತೆಗೆ ಮಾತನಾಡಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಹೀಗೆ ಅವರು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
BIG NEWS: ಪ್ರಸಕ್ತ ವರ್ಷ 67 ಸಾಧಕರಿಗೆ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ