ಕೆಎನ್ಎನ್ ಡಿಜಿಟಲ್ ಡೆಸ್ಕ್ : ದೀಪಾವಳಿಗೆ ಸಾಕಷ್ಟು ಕಥೆಗಳಿವೆ. ಪೂರ್ವಜರು ದೀಪಾವಳಿಯನ್ನು ಬೆಂಕಿಯ ಬೆಳಕು ಎಂದು ಕರೆಯುತ್ತಾರೆ. ಇದು ಕೆಟ್ಟದ್ದರ ನಾಶ ಮತ್ತು ಒಳ್ಳೆಯದ ಹುಟ್ಟು ಎನ್ನತ್ತಾರೆ. ಬೆಳಕು ವಿಜಯದ ಸಂಕೇತವಾಗಿದೆ. ಕತ್ತಲೆ ಎಂದರೆ ವೈಫಲ್ಯ ಎಂಬ ಅರ್ತವನ್ನು ನೀಡುತ್ತದೆ.
BREAKING NEWS ; ‘ಪಾಕ್’ಗೆ ಫುಲ್ ಖುಷ್ ; 4 ವರ್ಷದ ನಂತ್ರ FATF ‘ಗ್ರೇ ಪಟ್ಟಿ’ಯಿಂದ ಹೊರಕ್ಕೆ |Grey List
ಇತಿಹಾಸ
ಪುರಾಣಗಳ ಪ್ರಕಾರ ಏಳನೇ ಶತಮಾನದ ಸಂಸ್ಕೃತ ನಾಟಕ ನಾಗಾನಂದದಲ್ಲಿ ದೀಪಾವಳಿಯನ್ನು ದೀಪಪ್ರತಿಪಾದೋತ್ಸವ ಎಂದು ಉಲ್ಲೇಖಿಸಲಾಗಿದೆ. ಅಲ್ಲಿ ನವವಿವಾಹಿತರು ಮತ್ತು ವರರಿಗೆ ಉಡುಗೊರೆಗಳನ್ನು ನೀಡಲಾಯಿತು. ಭಗವಾನ್ ವಿಷ್ಣು ಮತ್ತು ದೇವತೆ ಲಕ್ಷ್ಮಿಯ ವಿವಾಹದ ನೆನಪಿಗಾಗಿ ದೀಪಗಳನ್ನು ಬೆಳಗಿಸಲಾಗುತ್ತದೆ. ಜನಪ್ರಿಯ ದಂತಕಥೆಯ ಪ್ರಕಾರ ಈ ಹಬ್ಬವು ಕಾರ್ತಿಕ ಅಮವಾಸ್ಯೆಯಂದು ಯಮ ಮತ್ತು ನಚಿಕೇತನ ಕಥೆಯೊಂದಿಗೆ ಸಂಬಂಧಿಸಿದೆ.
ದೀಪಾವಳಿಯ ದಿನದಂದು ಪೂಜೆ ಪುನಸ್ಕಾರಕ್ಕೆ ವಿಶೇಷ ಮಹತ್ವವಿದೆ. ಈ ದಿನ, ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿ ಹಾಗೂ ಗಣೇಶನನ್ನು ಪೂಜಿಸಲಾಗುತ್ತದೆ. ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ವರ್ಷವಿಡೀ ಮನೆಯಲ್ಲಿ ಸಂಪತ್ತು ಮತ್ತು ಸಂತೋಷದ ಹರಿವು ಇರುತ್ತದೆ ಎಂದು ನಂಬಲಾಗಿದೆ.
ದೀಪಗಳು, ಮೇಣದಬತ್ತಿಗಳನ್ನು ಮನೆಯ ಒಳಗೆ ಹೊರಗು ಹಚ್ಚಿ ಅಂದಕಾರ ಹೋಗಲಾಡಿಸಲು ಪ್ರಾರ್ಥಿಸಲಾಗುವುದು. ಈ ದೀಪಾವಳಿ ಹಬ್ಬಕ್ಕಾಗಿ ಒಂದು ತಿಂಗಳ ಮೊದಲೇ ತಯಾರಿ ಶುರುವಾಗುತ್ತದೆ.
ದೀಪಾವಳಿಯ ದಿನದಂದು ಲಕ್ಷ್ಮಿ ದೇವಿಯು ಮನೆಗೆ ಬರುತ್ತಾಳೆ. ಶುಚಿತ್ವ ಇದ್ದಲ್ಲಿ ಮಾತ್ರ ಲಕ್ಷ್ಮಿ ನೆಲೆಯೂರುತ್ತಾಳೆ ಎಂಬ ನಂಬಿಕೆ ಇರುವ ಹಿನ್ನಲೆ ಇದಕ್ಕಾಗಿ ಮನೆ, ಮನ ಸ್ವಚ್ಛಗೊಳಿಸುವ ಕಾರ್ಯ ಕೂಡ ನಡೆಯುತ್ತದೆ.
ದೀಪಾವಳಿಯ ಪೂಜೆಗೆ ಚಿನ್ನ ಮತ್ತು ಬೆಳ್ಳಿ ಆಭರಣಗಳು, ಪಾತ್ರೆಗಳು ಮತ್ತು ಮಣ್ಣಿನ ಲಕ್ಷ್ಮಿ-ಗಣೇಶನನ್ನು ಖರೀದಿಸುತ್ತಾರೆ. ದೀಪಾವಳಿ ಪೂಜೆಯು ಕೆಲವು ವಸ್ತುಗಳಿಲ್ಲದೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ.
ಪುರಾಣಗಳ ಪ್ರಕಾರ, ಶ್ರೀರಾಮನು ತ್ರೇತಾಯುಗದಲ್ಲಿ ರಾವಣನನ್ನು ಕೊಂದ ನಂತರ ಅಯೋಧ್ಯೆಗೆ ಹಿಂದಿರುಗಿದಾಗ, ಅಲ್ಲಿನ ಜನರು ದೀಪವನ್ನು ಬೆಳಗಿಸಿ ಸ್ವಾಗತಿಸಿದರು ಎನ್ನಲಾಗುತ್ತದೆ. ಪ್ರತಿವರ್ಷ ಜನರು ಈ ಸ್ವಾಗತವನ್ನು ದೀಪಾವಳಿಯ ಹಬ್ಬವೆಂದು ಆಚರಿಸುತ್ತಾರೆ.
ದೀಪಾವಳಿ ಹಬ್ಬದಂದು ಮನೆಯನ್ನು ಸ್ವಚ್ಚ ಮಾಡಿ, ಮುಂಭಾಗಿಲಿನಲ್ಲಿ ರಂಗೋಲಿ ಹಾಕಲಾಗುತ್ತದೆ. ಇದರೊಂದಿಗೆ ಇಡೀ ಮನೆಯನ್ನು ದೀಪಗಳಿಂದ ಅಲಂಕರಿಸುವ ಮೂಲಕ ಲಕ್ಷ್ಮಿಯ ಆಗಮನವನ್ನು ಸ್ವಾಗತಿಸಲಾಗುತ್ತದೆ.
BIGG NEWS ; ದಿನಪತ್ರಿಕೆಗಳು, ದೂರದರ್ಶನ ಅತ್ಯಂತ ‘ವಿಶ್ವಾಸಾರ್ಹ ಮಾಹಿತಿ ಮೂಲ’ ; ಸಮೀಕ್ಷೆ