ಬಿಹಾರ : ತಾವು ಬದುಕಿರುವವರೆಗೆ ಕೇಸರಿ ಪಕ್ಷದೊಂದಿಗೆ ಮರುಜೋಡಣೆ ಮಾಡುವುದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಘೋಷಿಸಿದ್ದಾರೆ.
ಸಮಸ್ತಿಪುರದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕುಮಾರ್, ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರಂತಹ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಬಿಜೆಪಿ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಲಾಲೂ ಜಿ ವಿರುದ್ಧ ಕೇಸು ದಾಖಲಿಸಿದರು, ಇದರಿಂದ ನಾನು ಅವರೊಂದಿಗಿನ ನನ್ನ ಸಂಬಂಧವನ್ನು ಕಡಿದುಕೊಳ್ಳಲು ಕಾರಣವಾಯಿತು. ಅದರಿಂದ ಏನೂ ಆಗಲಿಲ್ಲ. ಈಗ ನಾವು ಮತ್ತೆ ಒಟ್ಟಿಗೆ ಇರುವಾಗ ಅವರು ಹೊಸ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಈ ಜನರ ಕಾರ್ಯವೈಖರಿಯನ್ನು ನೀವು ಲೆಕ್ಕಾಚಾರ ಮಾಡಬಹುದು ಎಂದೇಳಿದರು.
ಉದ್ಯೋಗಕ್ಕಾಗಿ ಭೂ ಹಗರಣದಲ್ಲಿ ಲಾಲು ಪ್ರಸಾದ್, ರಾಬ್ರಿ ದೇವಿ ಮತ್ತು ಇತರ 14 ಜನರ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ ದಿನಗಳ ನಂತರ ನಿತೀಶ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ. ಲಾಲು ಪ್ರಸಾದ್ ಅವರ ಪುತ್ರಿ ಮಿಸಾ ಭಾರ್ತಿ ಅವರನ್ನೂ ಆರೋಪಪಟ್ಟಿಯಲ್ಲಿ ಆರೋಪಿ ಎಂದು ಹೆಸರಿಸಲಾಗಿದೆ.
ಆರ್ಜೆಡಿಯ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ರಾಬ್ರಿ ಮತ್ತು ಅವರ ಪುತ್ರಿಯರಾದ ಮಿಸಾ ಯಾದವ್ ಮತ್ತು ಹೇಮಾ ಯಾದವ್ಗೆ ರೈಲ್ವೇಯಲ್ಲಿ ನೇಮಕಗೊಂಡ ಕೆಲವು ವ್ಯಕ್ತಿಗಳಿಂದ ಭೂ ನಿವೇಶನಗಳನ್ನು ಲಂಚವಾಗಿ ನೀಡಲಾಗಿದೆ ಎಂದು ಸಿಬಿಐ ಹೇಳಿದೆ.
ಆಗಸ್ಟ್ನಲ್ಲಿ, ನಿತೀಶ್ ಕುಮಾರ್ ಅವರು ಆರ್ಜೆಡಿ, ಕಾಂಗ್ರೆಸ್ ಮತ್ತು ಎಡ ಪಕ್ಷಗಳನ್ನು ಒಳಗೊಂಡಿದ್ದ ‘ಮಹಾಘಟಬಂಧನ್’ ನೊಂದಿಗೆ ಕೈಜೋಡಿಸುವ ಮೊದಲು ಎಂಟು ವರ್ಷಗಳಲ್ಲಿ ಎರಡನೇ ಬಾರಿಗೆ ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಂಡಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರ ಯುಗವನ್ನು ನೆನಪಿಸಿಕೊಂಡ ಬಿಹಾರ ಸಿಎಂ ಪ್ರಸ್ತುತ ಬಿಜೆಪಿ ನಾಯಕತ್ವ ದುರಹಂಕಾರದಿಂದ ಕೂಡಿದೆ ಎಂದು ವಾಗ್ದಾಳಿ ನಡೆದಿದರು.
ಆರ್ಜೆಡಿ, ಕಾಂಗ್ರೆಸ್ ಮತ್ತು ಮೂರು ಎಡಪಕ್ಷಗಳನ್ನು ಒಳಗೊಂಡಿರುವ ‘ಮಹಾಘಟಬಂಧನ್’ ಸರ್ಕಾರದ ಕುರಿತು, ಮಾತನಾಡಿದ ನಿತೀಶ್ ಕುಮಾರ್, “ನಾವು ಒಟ್ಟಿಗೆ ಇರುತ್ತೇವೆ ಮತ್ತು ರಾಷ್ಟ್ರದ ಪ್ರಗತಿಗಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.