ಬಾರಾಮುಲ್ಲಾ : ಗೃಹ ಸಚಿವ ಅಮಿತ್ ಶಾ ಅವ್ರು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಬೃಹತ್ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ. ಈ ಸಮಯದಲ್ಲಿ, ಪಾಕಿಸ್ತಾನದೊಂದಿಗೆ ಯಾವುದೇ ರೀತಿಯ ಮಾತುಕತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದಲ್ಲದೇ, ತಮ್ಮ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವ್ರು, ಇಲ್ಲಿ ರ್ಯಾಲಿಯನ್ನ ನಡೆಸಲು ಯೋಜನೆ ರೂಪಿಸಿದಾಗ, ಬಾರಾಮುಲ್ಲಾ ಕಾರ್ಯಕ್ರಮವನ್ನ ಕೇಳಲು ಯಾರು ಬರುತ್ತಾರೆ ಎಂದು ಕೆಲವರು ಹೇಳಿದರು. ನಾನು ಇಂದು ಅವರಿಗೆ ಹೇಳ ಬಯಸುವುದೇನೆಂದರೆ, ಈ ಕಾರ್ಯಕ್ರಮದಲ್ಲಿ, ಕಾಶ್ಮೀರದ ಈ ಸುಂದರ ಕಣಿವೆಯಲ್ಲಿ ಅಭಿವೃದ್ಧಿಯ ಕಥೆಯನ್ನ ಕೇಳಲು ಮತ್ತು ಮೋದಿಯವರನ್ನ ಬೆಂಬಲಿಸಲು ಸಾವಿರಾರು ಜನರು ಇಲ್ಲಿ ಉಪಸ್ಥಿತರಿರುತ್ತಾರೆ.
ಈ ಹಿಂದೆ ಭಯೋತ್ಪಾದಕರ ಹಾಟ್ಸ್ಪಾಟ್ ಆಗಿದ್ದ ಈ ಪ್ರದೇಶವು ಈಗ ಪ್ರವಾಸೋದ್ಯಮದ ಹಾಟ್ಸ್ಪಾಟ್ ಆಗಿದೆ ಎಂದು ಶಾ ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಪ್ರವಾಸೋದ್ಯಮವು ಇಲ್ಲಿನ ಅನೇಕ ಯುವಕರಿಗೆ ಉದ್ಯೋಗವನ್ನು ನೀಡಿದೆ. “ಕಳೆದ 70 ವರ್ಷಗಳಿಂದ ಮುಫ್ತಿ ಅಂಡ್ ಕಂಪನಿ, ಅಬ್ದುಲ್ಲಾ ಅವರ ಪುತ್ರರು ಇಲ್ಲಿ ಅಧಿಕಾರದಲ್ಲಿದ್ದರೂ 1 ಲಕ್ಷ ವಸತಿರಹಿತರಿಗೆ ವಸತಿ ಒದಗಿಸಿಲ್ಲ. 2014-2022ರ ನಡುವೆ ಮೋದಿ ಅವರು ಈ 1 ಲಕ್ಷ ಜನರಿಗೆ ಮನೆಗಳನ್ನು ನೀಡಿದ್ದಾರೆ” ಎಂದರು.