ನವದೆಹಲಿ: ಇಂದು ದೇಶದೆಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಡಿನ ಜನತೆಗೆ ಶುಭಾಶಯ ತಿಳಿಸಿದ್ದಾರೆ.
“ವಿಜಯದ ಸಂಕೇತವಾದ ವಿಜಯದಶಮಿಯಂದು ಎಲ್ಲಾ ದೇಶವಾಸಿಗಳಿಗೆ ಅಭಿನಂದನೆಗಳು. ಈ ಶುಭ ಸಂದರ್ಭವು ಪ್ರತಿಯೊಬ್ಬರ ಜೀವನದಲ್ಲಿ ಧೈರ್ಯ, ಸಂಯಮ ಮತ್ತು ಸಕಾರಾತ್ಮಕ ಶಕ್ತಿಯನ್ನು ತರಲಿ ಎಂದು ನಾನು ಬಯಸುತ್ತೇನೆ” ಎಂದು ಪ್ರಧಾನಿ ಕಾರ್ಯಾಲಯ ಟ್ವೀಟ್ ಮಾಡಿದೆ.
सभी देशवासियों को विजय के प्रतीक-पर्व विजयादशमी की बहुत-बहुत बधाई। मेरी कामना है कि यह पावन अवसर हर किसी के जीवन में साहस, संयम और सकारात्मक ऊर्जा लेकर आए।
— Narendra Modi (@narendramodi) October 5, 2022
ಇನ್ನೂ ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ದಸರಾ ಹಬ್ಬಕ್ಕೆ ಶುಭ ಕೋರಿದ್ದಾರೆ. ʻವಿಜಯದಶಮಿಯ ಶುಭ ಸಂದರ್ಭದಲ್ಲಿ ಸಮಸ್ತ ನಾಡಿನ ಜನತೆಗೆ ಹೃತ್ಪೂರ್ವಕ ಶುಭಾಶಯಗಳು. ಈ ದಸರಾ ಹಬ್ಬವು ಅನೈತಿಕತೆಯ ವಿರುದ್ಧ ನೀತಿ, ಅಸತ್ಯದ ಮೇಲೆ ಸತ್ಯ ಮತ್ತು ಕೆಟ್ಟದ್ದರ ಮೇಲೆ ಒಳಿತಿನ ವಿಜಯವನ್ನು ಸಂಕೇತಿಸುತ್ತದೆ. ಈ ಹಬ್ಬವು ಎಲ್ಲಾ ದೇಶವಾಸಿಗಳ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ನಾನು ಬಯಸುತ್ತೇನೆʼ ಎಂದು ಟ್ವೀಟ್ ಮಾಡಿ ಶುಭ ಕೋರಿದರು.
विजयादशमी के पावन पर्व पर सभी देशवासियों को हार्दिक बधाई।
दशहरा का यह त्योहार, अनीति पर नीति की, असत्य पर सत्य की और बुराई पर अच्छाई की विजय का प्रतीक है।
मेरी मंगल कामना है कि यह त्योहार सभी देशवासियों के जीवन में सुख, शांति और समृद्धि का संचार करे।
— President of India (@rashtrapatibhvn) October 5, 2022
BREAKING NEWS : ಭಾರತದ 4 ನಗರಗಳಲ್ಲಿ ‘ಜಿಯೋ ಟ್ರೂ 5ಜಿʼ ಅನಾವರಣಗೊಳಿಸಿದ ‘ರಿಲಯನ್ಸ್’ | Jio True 5G
BIGG NEWS: ಸುತ್ತೂರು ಮಠಕ್ಕೆ ಭೇಟಿ ನೀಡಿದ ಸಿಎಂ; ಮಠದಲ್ಲೇ ತಿಂಡಿ ಸೇವಿಸಿದ ಬೊಮ್ಮಾಯಿ