ಭುವನೇಶ್ವರ : ‘ಸಂಗೀತ ರಸಮಂಜರಿ’ ಕಾರ್ಯಕ್ರಮದಲ್ಲಿ ಹಾಡುತ್ತಿದ್ದಾಗಲೇ ‘ಕುಸಿದುಬಿದ್ದು ಒಡಿಶಾದ ಜನಪ್ರಿಯ ಗಾಯಕ ಮುರಳಿ ಮೊಹಾಪಾತ್ರ(59) ‘ ಸಾವನ್ನಪ್ಪಿದ ʻ ಘೋರ ದುರಂತ ʼ ಘಟನೆ ನಡೆದಿದೆ.
BIG NEWS: ಬೆಂಗಳೂರಿನಲ್ಲಿ ಜಾಲಿ ರೈಡ್ ಹೋಗಿ ಲ್ಯಾಂಬೋರ್ಗಿನಿ ಕಾರು ಕಂಬಕ್ಕೆ ಗುದ್ದಿದ ಉದ್ಯಮಿ
ಒಡಿಶಾದ ಜನಪ್ರಿಯ ಗಾಯಕ ಕೊರಾಪುಟ್ ಜಿಲ್ಲೆಯಲ್ಲಿ ದುರ್ಗಾ ಪೂಜಾ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಹಾಡುತ್ತಿರುವಾಗಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ ಎಂದು ಅವರ ಸಹೋದರ ಬಿಭೂತಿ ಪ್ರಸಾದ್ ಮೊಹಾಪಾತ್ರ ತಿಳಿಸಿದ್ದಾರೆ.
BIG NEWS: ಬೆಂಗಳೂರಿನಲ್ಲಿ ಜಾಲಿ ರೈಡ್ ಹೋಗಿ ಲ್ಯಾಂಬೋರ್ಗಿನಿ ಕಾರು ಕಂಬಕ್ಕೆ ಗುದ್ದಿದ ಉದ್ಯಮಿ
ಭಾನುವಾರ ರಾತ್ರಿ ಕೊರಾಪುಟ್ ಜಿಲ್ಲೆಯಲ್ಲಿ ನಡೆದ ದುರ್ಗಾ ಪೂಜೆಯ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಹಾಡುತ್ತಿದ್ದಾಗ ಅನಾರೋಗ್ಯ ಪೀಡಿತರಾಗಿದ್ದ ಮೊಹಾಪಾತ್ರ ಅವರು ವೇದಿಕೆಯಲ್ಲಿ ಕುರ್ಚಿಯ ಮೇಲೆ ಕುಳಿತು ಹಾಡುತ್ತಿರುವಾಗಲೇ ಕುಸಿದು ಬಿದ್ದರು. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮೊಹಾಪಾತ್ರ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ವರದಿಯಾಗಿದೆ.
BIG NEWS: ಬೆಂಗಳೂರಿನಲ್ಲಿ ಜಾಲಿ ರೈಡ್ ಹೋಗಿ ಲ್ಯಾಂಬೋರ್ಗಿನಿ ಕಾರು ಕಂಬಕ್ಕೆ ಗುದ್ದಿದ ಉದ್ಯಮಿ
ಮುರಳಿ ಮೊಹಾಪಾತ್ರ ಅವರನ್ನು ಜೇಪೋರ್ನ ಅಕ್ಷಯ ಮೊಹಾಂತಿ ಎಂದೂ ಕರೆಯಲಾಗುತ್ತಿತ್ತು. ಗಾಯಕರಾಗುವ ಮೊದಲು ಅವರು ಜೇಪೋರ್ ಸಬ್ ಕಲೆಕ್ಟರ್ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಈ ವರ್ಷದ ಆರಂಭದಲ್ಲಿ ಖ್ಯಾತ ಗಾಯಕ ಕೆ.ಕೆ. ಅವರೂ ಇದೇ ರೀತಿ ಮೃತಪಟ್ಟಿದ್ದರು.
BIG NEWS: ಬೆಂಗಳೂರಿನಲ್ಲಿ ಜಾಲಿ ರೈಡ್ ಹೋಗಿ ಲ್ಯಾಂಬೋರ್ಗಿನಿ ಕಾರು ಕಂಬಕ್ಕೆ ಗುದ್ದಿದ ಉದ್ಯಮಿ