ಕೇಂದ್ರಪಾರ(ಒಡಿಶಾ): ಕೇಂದ್ರಪಾರ ಜಿಲ್ಲೆಯ ಮಹಾನದಿ ನದಿಯಲ್ಲಿ ಶನಿವಾರ ಬಲವಾದ ಪ್ರವಾಹದಿಂದಾಗಿ ಸಮುದ್ರದ ಮುಖಾಂತರ ದೋಣಿಯೊಂದು ಕೊಚ್ಚಿಕೊಂಡು ಹೋಗಿದ್ದು, ಎಪ್ಪತ್ತು ಜನರನ್ನು ರಕ್ಷಿಸಲಾಗಿದೆ.
ಶನಿವಾರ ಸಂಜೆ ಮಹಾಕಲ್ಪದದಲ್ಲಿ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ʻಭಾರೀ ಪ್ರವಾಹದಿಂದಾಗಿ, ದೋಣಿ ಸಮುದ್ರದಲ್ಲಿ ಕೊಚ್ಚಿಹೋಗಿದೆ. ಈ ವೇಳೆ ನಾವು 70 ಜನರನ್ನು ರಕ್ಷಿಸಿದ್ದೇವೆʼ ಎಂದು ಮಹಾಕಲ್ಪದ ಮೆರೈನ್ ಪೊಲೀಸ್ ಅಧಿಕಾರಿ ಪ್ರಕಾಶ್ ಚಂದ್ರ ಸಾಹು ತಿಳಿಸಿದ್ದಾರೆ.
ಆಡಳಿತದ ಪ್ರಕಾರ, ಮಹಾನದಿ ನದಿಗೆ ದೋಣಿಗಳನ್ನು ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ʻಹಿರಾಕುಡ್ ಅಣೆಕಟ್ಟಿನಿಂದ ಮಹಾನದಿ ನದಿಗೆ ಪ್ರವಾಹದ ನೀರನ್ನು ಬಿಟ್ಟಿದ್ದರಿಂದ, ದೋಣಿಗಳನ್ನು ನದಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಅಕ್ರಮವಾಗಿ ದೋಣಿ ಸೇವೆಯನ್ನು ಪ್ರಾರಂಭಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದುʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ
BIGG NEWS: ಉತ್ತರಖಂಡದಲ್ಲಿ ಮೇಘಸ್ಫೋಟ; ಒಡಿಶಾದಲ್ಲಿ 4 ಲಕ್ಷ ಜನರಿಗೆ ಸಂಕಷ್ಟ