ಚಾಮರಾಜನಗರ : ಜಿಲ್ಲೆಯಾದ್ಯಂತ ಭಾರೀ ಮಳೆಯಿಂದಾಗಿ ಹಾನೂರು ತಾಲೂಕಿನ ಮೀಣ್ಯ ದೊಡ್ಡಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಳಗೊಂಡಿದೆ. ಪುಟ್ಟೇಗೌಡದೊಡ್ಡಿ- ಮೀಣ್ಯ ನಡುವೆ ಹಳ್ಳವೊಂದು ತುಂಬಿ ಹರಿಯುತ್ತಿದೆ.
ಹಳ್ಳ ದಾಟಲು ಗ್ರಾಮಸ್ಥರು ಹರಸಾಹಸ ಪಡುತ್ತಿದ್ದಾರೆ. ಹಗ್ಗದ ಸಹಾಯದಿಂದ ದಾಟುವಂತಹ ಹರಸಾಹಸ ಮಾಡುವಂತ ಪರಿಸ್ಥಿತಿ ನಿರ್ಮಾಣಗೊಂಡಿದೆ. ಅದಷ್ಟು ಬೇಗ ಸೇತುವೆ ನಿರ್ಮಾಣ ಮಾಡಿಕೊಡುವಂತೆ ಸ್ಥಳೀಯ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಇನ್ನೂ ಚಾಮರಾಜನಗರದ ಆಲೂರು ಗ್ರಾಮದಲ್ಲಿ ನೂರಾರು ಎಕರೆ ಬೆಳೆಗಳು ಸರ್ವನಾಶಗೊಂಡಿದ್ದು, ಕಬ್ಬು, ಬಾಳೆ ಅರಿಶಿನ ಬೆಳೆಗಳನ್ನು ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಸುರ್ವಣಾವತಿ, ಚಿಕ್ಕಹೊಳೆ, ಜೋಡಿ ಡ್ಯಾಂನಿಂದ ನೀರು ರಿಲೀಸ್ ಮಾಡಿದ ಬೆನ್ನಲ್ಲೇ ತೆಂಗು, ಅಡಕೆ ತೋಟಗಳು ಜಲಾವೃತಗೊಂಡಿದೆ. ಚಂದವಾಡಿ ಹಬ್ಬಸೂರು ಅರಳೀಪುರ ಗ್ರಾಮದಲ್ಲಿ ಹಾನಿ ಉಂಟಾಗಿದೆ.