ಕೆಎನ್ಎನ್ಡಿಜಿಟಲ್ ಡೆಸ್ಕ್ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತದ ಪ್ರಧಾನಿಯಾಗುತ್ತಾರೆ ಎಂದು ಹಾವೇರಿ ಹೊಸಮಠ ಸ್ವಾಮೀಜಿ ಹೇಳಿದರು. ಆದ್ರೆ, ಇದಕ್ಕೆ ಮುರಘಾ ಶರಣರು ಆಕ್ಷೇಪ ವ್ಯಕ್ತ ಪಡಿಸಿದರು.
ಚಿತ್ರದುರ್ಗದ ಮುರುಘಾ ಮಠಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ್ದು, ಲಿಂಗಾಯತರ ಇಷ್ಟಲಿಂಗ ದೀಕ್ಷೆಯನ್ನ ಪಡೆದರು. ಅದ್ರಂತೆ, ದೀಕ್ಷೆಯನ್ನ ಮಠಾಧೀಶರಾದ ಶ್ರೀ ಶಿವಮೂರ್ತಿ ಮುರುಘಾ ಶರಣರು ನೀಡಿದ್ರು. ನಂತ್ರ ರಾಹುಲ್ ಗಾಂಧಿ ಅವ್ರಿಗೆ ವಿಭೂತಿ ಹಚ್ಚಿ ಕೊರಳಿಗೆ ಹಾರ ಹಾಕಿದ್ರು.
ಈ ಸಂದರ್ಭದಲ್ಲಿ ಹಾವೇರಿ ಹೊಸಮಠ ಸ್ವಾಮೀಜಿ ”ಇಂದಿರಾ ಗಾಂಧಿ ಪ್ರಧಾನಿಯಾದ್ರು.. ರಾಜೀವ್ ಗಾಂಧಿ ಕೂಡ ಪ್ರಧಾನಿ ಕರ್ತವ್ಯ ನಿರ್ವಹಿಸಿದರು. ರಾಹುಲ್ ಗಾಂಧಿ ಕೂಡ ಪ್ರಧಾನಿಯಾಗುತ್ತಾರೆ” ಎಂದರು. ಆದರೆ, ಹೊಸಮಠ ಸ್ವಾಮೀಜಿ ಹೇಳಿಕೆಗೆ ಶ್ರೀ ಶಿವಮೂರ್ತಿ ಮುರುಘಾ ಶರಣರು ಆಕ್ಷೇಪ ವ್ಯಕ್ತಪಡಿಸಿದರು. “ಮಠದಲ್ಲಿ ಇಂತಹ ಮಾತಾಡಬೇಡಿ. ಮಠ ರಾಜಕೀಯ ವೇದಿಕೆಯಲ್ಲ, ಪ್ರಧಾನಿ ಯಾರಾಗಬೇಕು ಅನ್ನೋದನ್ನ ಜನರೇ ನಿರ್ಧರಿಸುತ್ತಾರೆ. ಇನ್ನು ತಮ್ಮ ಮಠ ಎಲ್ಲ ವರ್ಗದ ಹಾಗೂ ರಾಜಕೀಯ ಪಕ್ಷಗಳ ಜನರನ್ನು ಸ್ವಾಗತಿಸುತ್ತದೆ. ಇಲ್ಲಿ ಯಾರಿಗೂ ತಾರತಮ್ಯ ಮಾಡುವುದಿಲ್ಲ. ಮಠ ಎಲ್ಲಾ ಮಾನವಕುಲವನ್ನ ಪ್ರೀತಿಸುತ್ತಾರೆ” ಎಂದು ಹೇಳಿದರು.