ದಾವಣಗೆರೆ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75 ನೇ ಜನ್ಮದಿನದ ಅಮೃತಮಹೋತ್ಸವ ನಿನ್ನೆ ದಾವಣಗೆರೆಯಲ್ಲಿ ಅದ್ಧೂರಿಯಾಗಿ ನಡೆದಿದ್ದು, ಕಾರ್ಯಕ್ರಮಕ್ಕೆ ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು ಎನ್ನಲಾಗಿದೆ.
ಮಹಾರಾಷ್ಟ್ರದಲ್ಲಿ ಆಳದ ಕಮರಿಗೆ ಬಿದ್ದ ವ್ಯಾನ್: ನಾಲ್ವರ ದುರ್ಮರಣ, 9 ಮಂದಿಗೆ ಗಾಯ
ಸಿದ್ದರಾಮಯ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ದಾವಣಗೆರೆ ಜನ ಸಾಗರವೇ ಹರಿದುಬಂದಿತ್ತು. ಸುಮಾರು 5 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಅದರೆ ನಿರೀಕ್ಷೆಗೂ ಮೀರಿ ಅಮೃತಮಹೋತ್ಸವಕ್ಕೆ 10 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರು. ಸುಮಾರು 7 ಲಕ್ಷ ಕ್ಕೂ ಹೆಚ್ಚು ಜನರು ಊಟ ಮಾಡಿದ್ದಾರೆ ಎನ್ನಲಾಗಿದೆ.
BIGG NEWS : ಕರ್ನಾಟಕದ ಈ ಎರಡು ಕಾಲೇಜುಗಳಲ್ಲಿ ` ಕನ್ನಡ ಮಾಧ್ಯಮ’ದಲ್ಲಿ ಎಂಜಿನಿಯರಿಂಗ್ ಕೋರ್ಸ್ ಆರಂಭ
ಇನ್ನು ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಸುಮಾರು 20 ಕೋಟಿ ರೂ. ಖರ್ಚಾಗಿದೆ ಎಂದು ಅಂದಾಜಿಸಲಾಗಿದೆ. ಪ್ರಮುಖ ಸ್ಟೇಜ್ 25 ಲಕ್ಷ ವೆಚ್ಚ. ಸ್ಟೇಜ್ ಮುಂಭಾಗದಲ್ಲಿ ಮೂರು ಜರ್ಮನ್ ಟೆಕ್ನಾಲಜಿ ಟೆಂಟ್ಗಳು. ಸ್ಟೇಜ್ನ ಮುಂಭಾಗದಲ್ಲಿ ಹಾಗೂ ಎಡಕ್ಕೆ ಬಲಕ್ಕೆ ಜರ್ಮನ್ ಮಾಡೆಲ್ ಟೆಂಟ್ 2 ಕೋಟಿ ರೂ. 5.5 ಲಕ್ಷ ಕುರ್ಚಿಗಳಿಗೆ 52 ಲಕ್ಷ ರೂ, ಸೌಂಡ್ ಬಾಕ್ಸ್ ಹಾಗೂ ಪರಿಕರಗಳಿಗೆ ಇಟಾಲಿಯನ್ ಎಕೊಸ್ಟಿಕ್ ಸೌಂಡ್ ಒಟ್ಟೂ 35 ಲಕ್ಷ ರೂ. ಸುಮಾರು 7000 ಬಸ್ಗಳ ವ್ಯವಸ್ಥೆಗೆ ಒಟ್ಟೂ 5 ಕೋಟಿ ರೂ. ಊಟದ ವ್ಯವಸ್ಥೆಗೆ ಸುಮಾರು 6 ಕೋಟಿ ರೂ. ಹೊರಗಡೆಯ ಫ್ಲೆಕ್ಸ್, 75 ಅಡಿಯ 7 ಕಟೌಟ್ ಗಳು ಸೇರಿ ಪ್ರಚಾರಕ್ಕೆ 2.5 ಕೋಟಿ, ಎಲ್ಇಡಿ ಸ್ಕ್ರೀನ್ಗಳ ವ್ಯವಸ್ಥೆಗೆ ಸುಮಾರು 50 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
Job Alert : ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ