ವಿಜಯಪುರ: ಜಿಲ್ಲೆಯಲ್ಲಿ ಮಳೆಯ ಅವಾಂತರದಿಂದ ಮೊದಲ ಬಲಿಯಾಗಿದೆ. ಸಿಡಿಲು ಬಡಿದು ಮಹಿಳೆ ಹಾಗೂ ಎಮ್ಮೆ ಸಾವನ್ನಪ್ಪಿದೆ.
BIGG NEWS: ಅಕ್ಕಿಯಲ್ಲಿ ತಯಾರಿಸಿದ ಸಿದ್ದರಾಮಯ್ಯ ಅವರ ಮೂರ್ತಿ ಪ್ರದರ್ಶನ
ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜೈನೂಬಿ ನಜೀರ ಅಹ್ಮದ ಸಿಪಾಯಿ (55) ಸಿಡಿಲು ಬಡಿದು ಮೃತಪಟ್ಟ ಮಹಿಳೆ.ಈಕೆ ಹೊಲದಲ್ಲಿ ಕಳೆ ತೆಗೆಯುತ್ತಿದ್ದ ವೇಳೆ ಜೋರು ಮಳೆ ಬಂದಿದೆ. ಹೀಗಾಗಿ ಈಕೆ ಮರದ ಕಳೆಗೆ ನಿಂತಿದ್ದಾಳೆ.
ಈ ವೇಳೆ ಸಿಡಿಲು ಬಡಿದು ಮಹಿಳೆ ಹಾಗೂ ಎಮ್ಮೆ ಸಾವನ್ನಪ್ಪಿದೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶಿಲನೆ ಮಾಡಿ ಪ್ರಕರಣ ದಾಖಲಿಸಿಕೊಂಡು ಹೋಗಿದ್ದಾರೆ.