ಬೆಂಗಳೂರು: ಲೋಕಾಯುಕ್ತ ಪೊಲೀಸರ ದಾಳಿಯ ವೇಳೆಯಲ್ಲಿ ಶೇ.53.58ರಷ್ಟು ಅಕ್ರಮ ಆಸ್ತಿ ಹೊಂದಿದ್ದಂತ ಅಧಿಕಾರಿ ಶ್ರೀನಿವಾಸ್ ಅಯ್ಯರ್ ಅವರಿಗೆ ಕೋರ್ಟ್ ಶಿಕ್ಷೆ ವಿಧಿಸಿ ಆದೇಶಿಸಿದೆ.
ಇಂದು ತನ್ನ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿರುವಂತ ಬೆಂಗಳೂರಿನ ಸಿಸಿಹೆಚ್ 78ನೇ ನ್ಯಾಯಾಲಯವು 4 ವರ್ಷ ಜೈಲು ಶಿಕ್ಷೆ, 1 ಕೋಟಿ ರೂ ದಂಡ ವಿಧಿಸಿದೆ. ಅಲ್ಲದೇ 1 ಕೋಟಿ ದಂಡ ಪಾವತಿಸಲು ತಪ್ಪಿದಲ್ಲಿ, 2 ವರ್ಷ ಹೆಚ್ಚುವರಿ ಜೈಲು ಶಿಕ್ಷೆ ನೀಡಿ ಆದೇಶಿಸಿದೆ.
ಕನ್ನಡದ ಪತ್ರಿಕೋದ್ಯಮಕ್ಕೆ ಉತ್ತಮ ಭವಿಷ್ಯವಿದೆ – ಸಿಎಂ ಬಸವರಾಜ ಬೊಮ್ಮಾಯಿ
ಅಂದಹಾಗೇ ಯಲಹಂಕ ಪೊಲೀಸ್ ತರಬೇತಿ ಶಾಲೆ ಅಧೀಕ್ಷರಾಗಿದ್ದಂತ ಶ್ರೀನಿವಾಸ್ ಅಯ್ಯರ್ ಮನೆ, ಕಚೇರಿಯ ಮೇಲೆ 2007ರಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಈ ದಾಳಿಯ ವೇಳೆಯಲ್ಲಿ ಶೇ.53.58ರಷ್ಟು ಅಕ್ರಮ ಆಸ್ತಿ ಪತ್ತೆಯಾಗಿತ್ತು.
ಈ ಸಂಬಂಧ ಇಂದು ಬೆಂಗಳೂರಿನ ಸಿಸಿಹೆಚ್ 78ನೇ ನ್ಯಾಯಾಲಯದ ವಿಶೇಷ ನ್ಯಾಯಧೀಶರಾದಂತ ಎಸ್ ವಿ ಶ್ರೀಕಾಂತ್ ಅವರು, ನಾಲ್ಕು ವರ್ಷ ದಂಡ ಶಿಕ್ಷ, 1 ಕೋಟಿದಂಡವನ್ನು ವಿಧಿಸಿ ಆದೇಶಿಸಿದೆ.
BREAKING NEWS: ಶಿವಮೊಗ್ಗದಲ್ಲಿ KSRTC-ಖಾಸಗಿ ಬಸ್ ನಡುವೆ ಡಿಕ್ಕಿಯಾಗಿ ಭೀಕರ ಅಪಘಾತ: 50ಕ್ಕೂ ಹೆಚ್ಚು ಜನರಿಗೆ ಗಾಯ