ಬೆಂಗಳೂರು: ಕರ್ನಾಟಕ ಹಾಗೂ ಗೋವಾ ಗಡಿಯಲ್ಲಿ 400 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಕಿಶೋರ್ ಹಾಗೂ ಆರೋಪಿ ಜಯೇಶ್ ಮಾತನಾಡಿರುವಂತ ಆಡಿಯೋ ವೈರಲ್ ಆಗಿದೆ.
ಹಣ ಸಾಗಣೆ ಮತ್ತು ಹಣ ದರೋಡೆ ಆಗಿರುವ ಕುರಿತಂತೆ ವೈರಲ್ ಆಗಿರುವಂತ ಆಡಿಯೋದಲ್ಲಿ ಚರ್ಚಿಸಲಾಗಿದೆ. ಹಣ ಸಾಗಾಟದ ಜವಾಬ್ದಾರಿಯನ್ನು ಆರೋಪಿ ವಿರಾಟ್ ಹೊತ್ತಿದ್ದ ಬಗ್ಗೆ ಆಡಿಯೋದಲ್ಲಿದೆ.
ವಿರಾಟ್ ಹುಡುಗರ ಮೂಲಕ ಹಣ ಸಾಗಿಸಲು ಹೇಳಲಾಗಿತ್ತು. ಈಗ ವಿರಾಟ್ ಗ್ಯಾಂಗ್ ನ ಹುಡುಗರೂ ನಾಪತ್ತೆಯಾಗಿದ್ದಾರೆ. ಗುಜರಾತ್ ಮೂಲದ ಓರ್ವ ರಾಜಕಾರಣಿ ಸಹ ಶಾಮೀಲಾಗಿರೋ ಶಂಕೆ ವ್ಯಕ್ತವಾಗಿದೆ.
ಆಶ್ರಮ ಒಂದರಲ್ಲಿ ಎರಡು ಸಾವಿರ ಹಣ ಬದಲಾವಣೆ ಕುರಿತು ಚರ್ಚೆ ಮಾಡಿದ್ದಾರೆ. ಅಹಮದಾಬಾದ್ ನ ಆಶ್ರಮ ಒಂದರಲ್ಲಿ ಡೀಲ್ ಕುರಿತು ಮಾತು ಆಡಿದ್ದಾರೆ. ಉದ್ಯಮಿ ಕಿಶೋರ್ ಬಳಿ ಹಣ ಇರುವ ಕುರಿತು ಮಾತುಕತೆ ನಡೆದಿರುವ ಆಡಿಯೋ ವೈರಲ್ ಆಗಿದೆ.
ಉದ್ಯಮಿ ಕಿಶೋರ್ ಮತ್ತು ಆರೋಪಿ ಜಯೇಶ್ ಆಡಿಯೋ ವೈರಲಾಗಿದೆ ಹಣ ಸಾಗಣೆ ಮತ್ತು ಹಣ ದರೋಡೆಯಾಗಿರುವ ಕುರಿತು ಚರ್ಚಿಸಿದ್ದು ಹಣ ಸಾಗಾಟದ ಜವಾಬ್ದಾರಿಯನ್ನು ಆರೋಪಿ ವಿರಾಟ್ ಹೊತ್ತುಕೊಂಡಿದ್ದ. ವಿರಾಟ್ ಹುಡುಗರ ಮೂಲಕ ಹಣ ಸಾಗಿಸಲು ಹೇಳಲಾಗಿತ್ತು ಈಗ ವಿರಾಟ್ ಗ್ಯಾಂಗಿನ ಹುಡುಗರು ನಾಪತ್ತೆಯಾಗಿದ್ದಾರೆ.
ಗುಜರಾತ್ ಮೂಲದ ಓರ್ವ ರಾಜಕಾರಣಿ ಸಹ ಆಗಿದ್ದವು ಈ ಎಲ್ಲ ವಿಚಾರ ರಾಜಕಾರಣಿಗೆ ಗೊತ್ತಿದೆ ಎಂದು ಚರ್ಚೆ ಮಾಡಿದ್ದಾರೆ. ಕರ್ನಾಟಕ ಪೊಲೀಸರು ಕೂಡ ಇದರಲ್ಲಿ ಭಾಗಿಯಾಗಿರುವ ಕುರಿತು ಪ್ರಸ್ತಾಪಿಸಿದ್ದಾರೆ ಕರ್ನಾಟಕ ಪೊಲೀಸರು ಇದರಲ್ಲಿ ಇದ್ದರೂ ಹಣ ಎಲ್ಲೋಯ್ತು ಗೊತ್ತಾಗುತ್ತಿಲ್ಲ ಎಂದು ಸಂಭಾಷಣೆ ಮಾಡಿದ್ದಾರೆ.
ಬಿಡದಿ ಟೌನ್ ಶಿಪ್ ಯೋಜನೆ ಬಗ್ಗೆ ಕುಮಾರಸ್ವಾಮಿ ಜತೆ ಚರ್ಚೆಗೆ ಸಿದ್ಧ: ಡಿಸಿಎಂ ಡಿ.ಕೆ ಶಿವಕುಮಾರ್
ಸ್ವಿಮ್ಮಿಂಗ್ ಪೂಲ್ ನಲ್ಲಿ ಮಹಿಳೆ ಶವವಾಗಿ ಪತ್ತೆ: ಪತಿಯಿಂದಲೇ ಕೊಲೆ ಶಂಕೆ
![’ಆಕೆಯೇನಕ್ಕೆ ಅಲ್ಲಿಗೆ ಬಂದಿದ್ದಾರೆ?’: ವಿಜಯ್ ಪ್ರಮಾಣ ವಚನ ಸಮಾರಂಭದಲ್ಲಿ ಕಾಣಿಸಿಕೊಂಡ ನಟಿ ತ್ರಿಶಾ ವಿರುದ್ಧ ನೆಟ್ಟಿಗರ ಆಕ್ರೋಶ! ದಳಪತಿ ವಿಜಯ್ ರಾಜಕೀಯ ಪ್ರವೇಶ - [Dalapathi Vijay Politics], ತ್ರಿಶಾ ಕೃಷ್ಣನ್ ತಿಳಿ ನೀಲಿ ಸೀರೆ - [Trisha Krishnan in Blue Saree], ತಮಿಳಗ ವೆಟ್ರಿ ಕಳಗಂ ಮುಖ್ಯಮಂತ್ರಿ - [TVK Chief Minister Vijay]](https://kannadanewsnow.com/kannada/wp-content/uploads/2026/05/ವಿಜಯ್-ಪ್ರಮಾಣವಚನ-ಕಾರ್ಯಕ್ರಮದಲ್ಲಿ-ತ್ರಿಶಾ-ಕೃಷ್ಣನ್-Trisha-Krishnan-at-Vijay-Swearing-in-Ceremony-300x169.jpg)







