ಗುರುಗ್ರಾಮ(ದೆಹಲಿ): ಸ್ನೇಹಿತನನ್ನು ರಕ್ಷಿಸಲು ಯತ್ನಿಸುತ್ತಿದ್ದ 16 ವರ್ಷದ ಬಾಲಕ ಕೊಳದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶನಿವಾರ ಗುರುಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ಸೋನು ಎಂದು ಗುರುತಿಸಲಾಗದೆ. ಸೋನು ಮತ್ತು ಇತರ ನಾಲ್ವರು ಹುಡುಗರು ಮಧ್ಯಾಹ್ನದ ಸುಮಾರಿಗೆ ನೀರಿನಲ್ಲಿ ಸ್ನಾನ ಮಾಡಲು ಸಮಸ್ಪುರ ಗ್ರಾಮದ ಕೊಳಕ್ಕೆ ಹೋಗಿದ್ದರು. ನಾಲ್ವರು ಬಾಲಕರಲ್ಲಿ ಒಬ್ಬರು ಮುಳುಗುತ್ತಿರುವುದನ್ನು ನೋಡಿದ ಸೋನು ಅವನನ್ನು ರಕ್ಷಿಸಲು ಮುಂದಾದ. ಆದ್ರೆ, ಈ ವೇಳೆ ಸ್ವತಃ ತಾನೇ ಮುಳುಗಿ ಸಾವಿಗೀಡಾಗಿದ್ದಾನೆ. ಇನ್ನು ಉಳಿದ ನಾಲ್ವರು ಸ್ನೇಹಿತರು ಸುರಕ್ಷಿತವಾಗಿ ಈಜಿ ದಡ ಸೇರಿದ್ದಾರೆ.
ಘಟನೆ ನಡೆದ ಕೂಡಲೇ ಸೋನುವನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ, ಆತ ಈಗಾಗಲೇ ಸಾವನ್ನಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
BIGG NEWS : ಮುಂಬಡ್ತಿ ನಿರೀಕ್ಷೆಯಲ್ಲಿದ್ದ ರಾಜ್ಯದ ‘ಪ್ರೌಢ ಶಾಲಾ ಮುಖ್ಯ ಶಿಕ್ಷಕ’ರಿಗೆ ಭರ್ಜರಿ ಸಿಹಿಸುದ್ದಿ
BIGG NEWS: ಉತ್ತರಖಂಡದಲ್ಲಿ ಮೇಘಸ್ಫೋಟ; ಒಡಿಶಾದಲ್ಲಿ 4 ಲಕ್ಷ ಜನರಿಗೆ ಸಂಕಷ್ಟ