Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಾರಿನ ಒಳಗಿನ ಕೆಟ್ಟ ವಾಸನೆಯಿಂದ ಮುಕ್ತಿ ಬೇಕೇ? ಈ 5 ಸುಲಭ ಉಪಾಯಗಳನ್ನು ಅನುಸರಿಸಿ!

02/05/2026 8:27 PM

BREAKING: ಗುಜರಾತ್ ಕಚ್‌ನಲ್ಲಿ ಐಸಿಸ್ ಉಗ್ರ ಜಾಲ ಪತ್ತೆ; ಜಿಹಾದ್ ಪ್ರಚಾರ ಮಾಡುತ್ತಿದ್ದ ಶಂಕಿತ ಭಯೋತ್ಪಾದಕ ಅರೆಸ್ಟ್!

02/05/2026 8:15 PM

ಹಿಮಂತ ಬಿಸ್ವಾ ಶರ್ಮಾ ಭಾಷಣಕ್ಕೆ ಬಾಂಗ್ಲಾದೇಶ ಆಕ್ಷೇಪ: ಭಾರತದ ರಾಯಭಾರಿಗೆ ಸಮನ್ಸ್!

02/05/2026 8:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING: ರಾಜ್ಯದಲ್ಲಿ ಕಳೆದ 6 ವರ್ಷಗಳಲ್ಲಿ 14,878 ಮಕ್ಕಳನ್ನು ಅಪಹರಣ: ಬೆಂಗಳೂರಲ್ಲೇ ಹೆಚ್ಚು
KARNATAKA

SHOCKING: ರಾಜ್ಯದಲ್ಲಿ ಕಳೆದ 6 ವರ್ಷಗಳಲ್ಲಿ 14,878 ಮಕ್ಕಳನ್ನು ಅಪಹರಣ: ಬೆಂಗಳೂರಲ್ಲೇ ಹೆಚ್ಚು

By kannadanewsnow0926/02/2026 2:14 PM

ಬೆಂಗಳೂರು: ರಾಜ್ಯದಲ್ಲಿ ಕಳೆದ 6 ವರ್ಷಗಳಲ್ಲಿ 14,878 ಮಕ್ಕಳನ್ನು ಅಪಹರಣ ಮಾಡಿರುವಂತ ಶಾಕಿಂಗ್ ಮಾಹಿತಿಯು ವರದಿಯಿಂದ ಬಹಿರಂಗಗೊಂಡಿದೆ.

ಈ ಬಗ್ಗೆ ರಾಜ್ಯದ ಸರ್ಕಾರಿ ಅಂಕಿ ಅಂಶಗಳಿಂದ ಮಾಹಿತಿ ಬಹಿರಂಗಗೊಂಡಿದ್ದು, ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಮಕ್ಕಳು ಅಪಹರಣಗೊಂಡಿದ್ದಾರೆ. ಬೆಂಗಳೂರು ನಗರ ಒಂದರಲ್ಲೇ 4,849 ಮಕ್ಕಳು ಕಿಡ್ನ್ಯಾಪ್ ಮಾಡಿದ್ದಾರೆ. ಹಿಂದಿನ ಬಿಜೆಪಿ ಅವಧಿಯಲ್ಲೂ ಸಾವಿರಾರು ಮಕ್ಕಳ ಅಪಹರಣ ಉಂಟಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಇತ್ತೀಚೆಗೆ ಬೆಂಗಳೂರಲ್ಲಿ ಮಾಸ್ಕ್ ಮ್ಯಾನ್ ಓಡಾಟ ಹೆಚ್ಚಿರುವ ಹಿನ್ನಲೆ ಸಿಲಿಕಾನ್ ಸಿಟಿ ಪೋಷಕರಿಗೆ ಬೆಚ್ಚಿ ಬೀಳಿಸುವಂತ ಸುದ್ದಿ ಬಹಿರಂಗಗೊಂಡಿದೆ. ರಾಜ್ಯದಲ್ಲಿ ಕಳೆದ 6 ವರ್ಷಗಳಲ್ಲಿ 14,878 ಮಕ್ಕಳು ಅಪಹರಣವಾಗಿದ್ದಾವೆ. 2020-25ರ ಜುಲೈ ತನಕ 14,878 ಮಕ್ಕಳನ್ನು ಅಪಹರಿಸಲಾಗಿದೆ.

ಕಿಡ್ನ್ಯಾಪ್ ಆದ ಕೆಲ ಮಕ್ಕಳು ಏನಾದವು ಅನ್ನೋದೇ ನಿಗೂಢವಾಗಿದೆ. ಕಣ್ಮರೆಯಾದ ಕೆಲ ಮಕ್ಕಳ ಬಗ್ಗೆ ಯಾವುದೇ ಮಾಹಿತಿಯೇ ಈವರೆಗೂ ಸಿಕ್ಕಿಲ್ಲ. 10,792 ಅಪ್ರಾಪ್ತರು ಕಿಡ್ನ್ಯಾಪ್ ಆಗಿದ್ದರೇ, 4,086 ಬಾಲಕರ ಅಪರಣವಾಗಿದೆ. ಅಪಹಣಕ್ಕೊಳಗಾದಂತ 10,792 ಅಪ್ರಾಪ್ತೆಯರಲ್ಲಿ 9,789 ಮಂದಿ ಮಾತ್ರವೇ ಪತ್ತೆಯಾಗಿದ್ದಾರೆ. ಇನ್ನುಳಿದವರ ಬಗ್ಗೆ ಮಾಹಿತಿಯೇ ಇಲ್ಲ.

ಅಪಹರಣಕ್ಕೊಳಗಾದ 4,086 ಬಾಲಕರಲ್ಲಿ 3,753 ಮಂದಿ ಮಾತ್ರ ಪತ್ತೆಯಾಗಿದ್ದರೇ, ಉಳಿದವರು ಕಣ್ಮರೆಯಾಗಿದ್ದಾರೆ. ಒಟ್ಟಾರೆ 14,878 ಕಿಡ್ನ್ಯಾಪ್ ಆದವರಲ್ಲಿ ಕೇವಲ 13,542 ಮಕ್ಕಳು ಮಾತ್ರವೇ ಪತ್ತೆಯಾಗಿದ್ದಾರೆ. 1,336 ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಯಾವುದೇ ಮಾಹಿತಿಯೂ ಸಿಕ್ಕಿಲ್ಲ.

ಮಕ್ಕಳ ಅಪಹರಣ ತಡೆಗೆ ಪೋಷಕರು ವಹಿಸಬೇಕಾದ ಮುನ್ನೆಚ್ಚರಿಕೆಗಳಿವು

ಇತ್ತೀಚಿನ ದಿನಗಳಲ್ಲಿ ಮಕ್ಕಳ ಅಪಹರಣದ ವದಂತಿಗಳು ಮತ್ತು ಘಟನೆಗಳು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುತ್ತಿವೆ. ಅಪರಿಚಿತರ ಕೈಗೆ ಮಕ್ಕಳು ಸಿಲುಕದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಪೋಷಕರ ಮತ್ತು ನಾಗರಿಕರ ಜವಾಬ್ದಾರಿಯಾಗಿದೆ. ಈ ಕುರಿತು ಜಾಗೃತಿ ಮೂಡಿಸಲು ಕೆಲವು ಮುಖ್ಯ ಅಂಶಗಳು ಇಲ್ಲಿವೆ:

1. ಮಕ್ಕಳಿಗೆ ‘ಅಪರಿಚಿತರ’ ಬಗ್ಗೆ ತಿಳಿಹೇಳಿ

ಮಕ್ಕಳಿಗೆ ಯಾರಾದರೂ ಅಪರಿಚಿತರು ಚಾಕೊಲೇಟ್, ಆಟಿಕೆ ಅಥವಾ ಹಣದ ಆಮಿಷ ಒಡ್ಡಿದರೆ ಅದನ್ನು ಸ್ವೀಕರಿಸಬಾರದು ಎಂದು ಕಟ್ಟುನಿಟ್ಟಾಗಿ ಕಲಿಸಿಕೊಡಿ. “ನಾನು ನಿಮ್ಮ ಅಪ್ಪ/ಅಮ್ಮನ ಸ್ನೇಹಿತ” ಎಂದು ಹೇಳುವವರನ್ನು ನಂಬಬಾರದು ಎಂದು ತಿಳಿಸಿ.

2. ವೈಯಕ್ತಿಕ ಮಾಹಿತಿ ಗೌಪ್ಯವಾಗಿರಲಿ

ಮಕ್ಕಳ ಶಾಲಾ ಬ್ಯಾಗ್ ಅಥವಾ ನೀರಿನ ಬಾಟಲಿಗಳ ಮೇಲೆ ಅವರ ಹೆಸರನ್ನು ದಪ್ಪ ಅಕ್ಷರಗಳಲ್ಲಿ ಬರೆಯಬೇಡಿ. ಅಪರಿಚಿತರು ಆ ಹೆಸರನ್ನು ಕೂಗಿ ಕರೆದಾಗ ಮಕ್ಕಳು ಅವರು ಪರಿಚಯದವರು ಎಂದು ನಂಬುವ ಸಾಧ್ಯತೆ ಇರುತ್ತದೆ.

3. ತುರ್ತು ಸಂಪರ್ಕ ಸಂಖ್ಯೆಗಳು

ಮಕ್ಕಳಿಗೆ ತಮ್ಮ ಪೋಷಕರ ಫೋನ್ ಸಂಖ್ಯೆ ಮತ್ತು ಮನೆಯ ವಿಳಾಸವನ್ನು ನೆನಪಿಟ್ಟುಕೊಳ್ಳುವಂತೆ ಮಾಡಿ. ತುರ್ತು ಸಂದರ್ಭದಲ್ಲಿ ‘112’ (Help Line) ಸಂಖ್ಯೆಗೆ ಕರೆ ಮಾಡಲು ಅಥವಾ ಹತ್ತಿರದ ಪೊಲೀಸ್ ಸಿಬ್ಬಂದಿಯ ಸಹಾಯ ಪಡೆಯಲು ಕಲಿಸಿ.

4. ಶಾಲಾ ವಾಹನ ಮತ್ತು ಸುರಕ್ಷತೆ

ಮಕ್ಕಳನ್ನು ಶಾಲೆಗೆ ಬಿಡುವಾಗ ಮತ್ತು ಕರೆತರುವಾಗ ಅಧಿಕೃತ ವಾಹನಗಳನ್ನೇ ಬಳಸಿ. ಶಾಲೆಯಿಂದ ಮಗುವನ್ನು ಕರೆತರಲು ಪೋಷಕರನ್ನು ಬಿಟ್ಟು ಬೇರೆ ಯಾರಾದರೂ ಬರುವುದಿದ್ದರೆ, ಆ ಮೊದಲೇ ಶಾಲಾ ಆಡಳಿತ ಮಂಡಳಿಗೆ ಮಾಹಿತಿ ನೀಡಿ.

5. ಕಿರುಚಲು ಹಿಂಜರಿಯಬೇಡಿ

ಯಾರಾದರೂ ಬಲವಂತವಾಗಿ ಎಳೆದೊಯ್ಯಲು ಪ್ರಯತ್ನಿಸಿದರೆ ಜೋರಾಗಿ ಕಿರುಚಲು (Help! ಇವರು ನನ್ನ ತಂದೆ/ತಾಯಿ ಅಲ್ಲ!) ಮಕ್ಕಳಿಗೆ ಧೈರ್ಯ ತುಂಬಿ. ಇದು ಸುತ್ತಮುತ್ತಲಿನವರ ಗಮನ ಸೆಳೆಯಲು ಸಹಾಯ ಮಾಡುತ್ತದೆ.

Share. Facebook Twitter LinkedIn WhatsApp Email

Related Posts

ಸ್ಥಳೀಯರಿಗೆ ಹೆಚ್ಚು ಉದ್ಯೋಗ ಕಲ್ಪಿಸಿ: ಕೈಗಾರಿಕೋದ್ಯಮಿಗಳಲ್ಲಿ ಮದ್ದೂರು ಶಾಸಕ ಕೆ.ಎಂ.ಉದಯ್ ಮನವಿ

02/05/2026 7:54 PM2 Mins Read

BIG NEWS: ಮೇ.20ರಿಂದ ರಾಜ್ಯದಲ್ಲಿ ಸಾರಿಗೆ ಸಮರ: ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನೌಕರರ ನಿರ್ಧಾರ

02/05/2026 7:49 PM1 Min Read

BREAKING: ರಾಜ್ಯದಲ್ಲಿ ಹಕ್ಕಿಜ್ವರದ ಭೀತಿ: ತುಮಕೂರಲ್ಲಿ ನವಿಲು H5N1 ನಿಂದ ಸಾವು ದೃಢ, ಕಟ್ಟೆಚ್ಚರಕ್ಕೆ ಸಚಿವ ಈಶ್ವರ್ ಖಂಡ್ರೆ ಸೂಚನೆ

02/05/2026 7:29 PM1 Min Read
Recent News

ಕಾರಿನ ಒಳಗಿನ ಕೆಟ್ಟ ವಾಸನೆಯಿಂದ ಮುಕ್ತಿ ಬೇಕೇ? ಈ 5 ಸುಲಭ ಉಪಾಯಗಳನ್ನು ಅನುಸರಿಸಿ!

02/05/2026 8:27 PM

BREAKING: ಗುಜರಾತ್ ಕಚ್‌ನಲ್ಲಿ ಐಸಿಸ್ ಉಗ್ರ ಜಾಲ ಪತ್ತೆ; ಜಿಹಾದ್ ಪ್ರಚಾರ ಮಾಡುತ್ತಿದ್ದ ಶಂಕಿತ ಭಯೋತ್ಪಾದಕ ಅರೆಸ್ಟ್!

02/05/2026 8:15 PM

ಹಿಮಂತ ಬಿಸ್ವಾ ಶರ್ಮಾ ಭಾಷಣಕ್ಕೆ ಬಾಂಗ್ಲಾದೇಶ ಆಕ್ಷೇಪ: ಭಾರತದ ರಾಯಭಾರಿಗೆ ಸಮನ್ಸ್!

02/05/2026 8:09 PM

ರಸ್ತೆ ಮೇಲಿನ ‘ಜೀಬ್ರಾ ಕ್ರಾಸಿಂಗ್’ ಕಪ್ಪು-ಬಿಳಿ ಬಣ್ಣದಲ್ಲೇ ಇರುವುದೇಕೆ? ಹಳದಿ ಬಣ್ಣವನ್ನೇಕೆ ಬಳಸಲ್ಲ? ಇಲ್ಲಿದೆ ಅದರ ಹಿಂದಿನ ವೈಜ್ಞಾನಿಕ ರಹಸ್ಯ!

02/05/2026 7:57 PM
State News
KARNATAKA

ಸ್ಥಳೀಯರಿಗೆ ಹೆಚ್ಚು ಉದ್ಯೋಗ ಕಲ್ಪಿಸಿ: ಕೈಗಾರಿಕೋದ್ಯಮಿಗಳಲ್ಲಿ ಮದ್ದೂರು ಶಾಸಕ ಕೆ.ಎಂ.ಉದಯ್ ಮನವಿ

By kannadanewsnow0902/05/2026 7:54 PM KARNATAKA 2 Mins Read

ಮಂಡ್ಯ : ಕೈಗಾರಿಕೋದ್ಯಮಿಗಳು ನೆರೆ ರಾಜ್ಯಗಳ ಕಾರ್ಮಿಕರನ್ನು ನೇಮಿಸಿಕೊಳ್ಳದೆ ಸ್ಥಳೀಯರಿಗೆ ಉದ್ಯೋಗಗಳನ್ನು ಕಲ್ಪಿಸುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಬೇಕೆಂದು ಶಾಸಕ…

BIG NEWS: ಮೇ.20ರಿಂದ ರಾಜ್ಯದಲ್ಲಿ ಸಾರಿಗೆ ಸಮರ: ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನೌಕರರ ನಿರ್ಧಾರ

02/05/2026 7:49 PM

BREAKING: ರಾಜ್ಯದಲ್ಲಿ ಹಕ್ಕಿಜ್ವರದ ಭೀತಿ: ತುಮಕೂರಲ್ಲಿ ನವಿಲು H5N1 ನಿಂದ ಸಾವು ದೃಢ, ಕಟ್ಟೆಚ್ಚರಕ್ಕೆ ಸಚಿವ ಈಶ್ವರ್ ಖಂಡ್ರೆ ಸೂಚನೆ

02/05/2026 7:29 PM

ಅನಾರೋಗ್ಯದಿಂದಾಗಿ ಬೆಂಗಳೂರಿನ ಬೆಸ್ಕಾಂ ಜಾಗೃತ ದಳದ SP ಆಗಿದ್ದ ಲಾವಣ್ಯ ನಿಧನ

02/05/2026 6:41 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.