ನವದೆಹಲಿ: ಅಂತಾರಾಷ್ಟ್ರೀಯ ಉದ್ಯೋಗ ದಂಧೆಗೆ ಬಲಿಯಾಗಿ ಮ್ಯಾನ್ಮಾರ್ನ ಮೈವಾಡ್ಡಿ ಪ್ರದೇಶದಲ್ಲಿ ಸಿಲುಕಿದ್ದ ಸುಮಾರು 13 ಭಾರತೀಯರನ್ನು ರಕ್ಷಿಸಲಾಗಿದೆ. ಇವರೆಲ್ಲ ತಮಿಳುನಾಡಿಗೆ ತಲುಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.
ಕಳೆದ ತಿಂಗಳು ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ನಲ್ಲಿನ ಭಾರತೀಯ ಮಿಷನ್ಗಳ ಜಂಟಿ ಪ್ರಯತ್ನಗಳ ನಂತರ 32 ಭಾರತೀಯರನ್ನು ಮೈವಾಡಿಯಿಂದ ರಕ್ಷಿಸಲಾಯಿಗಿತ್ತು.
ಮ್ಯಾನ್ಮಾರ್ನಲ್ಲಿ ಭಾರತೀಯರು ನಕಲಿ ಉದ್ಯೋಗ ದಂಧೆಯಲ್ಲಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯವನ್ನು ನಾವು ಸಕ್ರಿಯವಾಗಿ ಮುಂದುವರಿಸುತ್ತಿದ್ದೇವೆ. ಸುಮಾರು 32 ಭಾರತೀಯರನ್ನು ಈಗಾಗಲೇ ರಕ್ಷಿಸಲಾಗಿತ್ತು. ಇಂದು 13 ಭಾರತೀಯ ನಾಗರಿಕರನ್ನು ಈಗ ರಕ್ಷಿಸಲಾಗಿದ್ದು,,ಇಂದು ತಮಿಳುನಾಡಿಗೆ ತಲುಪಿದ್ದಾರೆ ಎಂದು ಅರಿಂದಮ್ ಬಾಗ್ಚಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಆಗ್ನೇಯ ಮ್ಯಾನ್ಮಾರ್ನ ಕಯಿನ್ ರಾಜ್ಯದ ಗಡಿಯಲ್ಲಿರುವ ಥೈಲ್ಯಾಂಡ್ನ ಮೈವಾಡ್ಡಿ ಪ್ರದೇಶವು ಸಂಪೂರ್ಣವಾಗಿ ಮ್ಯಾನ್ಮಾರ್ ಸರ್ಕಾರದ ನಿಯಂತ್ರಣದಲ್ಲಿಲ್ಲ. ಕೆಲವು ಜನಾಂಗೀಯ ಸಶಸ್ತ್ರ ಗುಂಪುಗಳು ಅದರ ಮೇಲೆ ಹಿಡಿತ ಸಾಧಿಸುತ್ತವೆ.
We have been actively pursuing the case of Indians being trapped in fake job rackets in Myanmar.
Thanks to the efforts of @IndiainMyanmar & @IndiainThailand, around 32 Indians had already been rescued.
Another 13 Indian citizens have now been rescued,& reached Tamil Nadu today. pic.twitter.com/OfkPtnGUkZ
— Arindam Bagchi (@MEAIndia) October 5, 2022
ಇನ್ನೂ ಕೆಲವು ಭಾರತೀಯ ನಾಗರಿಕರನ್ನು ಅವರ ನಕಲಿ ಉದ್ಯೋಗದಾತರಿಂದ ರಕ್ಷಿಸಲಾಗಿದೆ. ಅವರೆಲ್ಲ ದೇಶಕ್ಕೆ ಅಕ್ರಮ ಪ್ರವೇಶಕ್ಕಾಗಿ ಮ್ಯಾನ್ಮಾರ್ ಅಧಿಕಾರಿಗಳ ವಶದಲ್ಲಿದ್ದಾರೆ. ಆದಷ್ಟು ಬೇಗ ಅವರನ್ನು ಸ್ವದೇಶಕ್ಕೆ ಕರೆತರಲು ಕಾನೂನು ಕ್ರಮಗಳನ್ನು ಆರಂಭಿಸಲಾಗುವುದು ಎಂದೇಳಿದ್ದಾರೆ.
ಈ ಉದ್ಯೋಗ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಏಜೆಂಟ್ಗಳ ವಿವರಗಳನ್ನು ಸೂಕ್ತ ಕ್ರಮಕ್ಕಾಗಿ ಭಾರತದ ವಿವಿಧ ರಾಜ್ಯಗಳ ಸಂಬಂಧಿತ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗಿದೆ. ಲಾವೋಸ್ ಮತ್ತು ಕಾಂಬೋಡಿಯಾದಲ್ಲಿ ಇದೇ ರೀತಿಯ ಉದ್ಯೋಗ ರಾಕೆಟ್ಗಳ ನಿದರ್ಶನಗಳು ಬೆಳಕಿಗೆ ಬಂದಿವೆ. ವಿಯೆಂಟಿಯಾನ್, ನಾಮ್ ಪೆನ್ ಮತ್ತು ಬ್ಯಾಂಕಾಕ್ನಲ್ಲಿರುವ ನಮ್ಮ ರಾಯಭಾರ ಕಚೇರಿಗಳು ಅಲ್ಲಿಂದ ಜನರನ್ನು ವಾಪಸ್ ಕಳುಹಿಸಲು ಸಹಾಯ ಮಾಡುತ್ತಿವೆ ಎಂದು ಅವರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮ್ಯಾನ್ಮಾರ್ನ ದೂರದ ಪೂರ್ವ ಗಡಿ ಪ್ರದೇಶಗಳಲ್ಲಿ ಡಿಜಿಟಲ್ ಸ್ಕ್ಯಾಮಿಂಗ್/ಫೋರ್ಜ್ ಕ್ರಿಪ್ಟೋ ಚಟುವಟಿಕೆಗಳಲ್ಲಿ ತೊಡಗಿರುವ ಕೆಲವು ಎಲ್ಟಿ ಕಂಪನಿಗಳು ಐಟಿ ಕ್ಷೇತ್ರದಲ್ಲಿ ಸಂಭಾವ್ಯ ಉದ್ಯೋಗಾವಕಾಶಗಳ ನೆಪದಲ್ಲಿ ತಮ್ಮ ನೇಮಕಾತಿ ಏಜೆಂಟ್ಗಳ ಮೂಲಕ ವಿವಿಧ ಸ್ಥಳಗಳಿಂದ ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿವೆ .
ಆರಂಭಿಕ ನೇಮಕಾತಿಯ ನಂತರ, ಭಾರತೀಯ ಕಾರ್ಮಿಕರನ್ನು ಸರಿಯಾದ ದಾಖಲೆಗಳಿಲ್ಲದೆ ಕಾನೂನುಬಾಹಿರವಾಗಿ ಮ್ಯಾನ್ಮಾರ್ಗೆ ಕರೆದೊಯ್ಯಲಾಗುತ್ತದೆ ಎಂದು ಮಿಷನ್ ಹೇಳಿದೆ.
ಮ್ಯಾನ್ಮಾರ್ ಭಾರತದ ಆಯಕಟ್ಟಿನ ನೆರೆಯ ರಾಷ್ಟ್ರಗಳಲ್ಲಿ ಒಂದಾಗಿದೆ. ಇದು ಉಗ್ರಗಾಮಿ ಪೀಡಿತ ನಾಗಾಲ್ಯಾಂಡ್ ಮತ್ತು ಮಣಿಪುರ ಸೇರಿದಂತೆ ಹಲವಾರು ಈಶಾನ್ಯ ರಾಜ್ಯಗಳೊಂದಿಗೆ 1,640-ಕಿಮೀ ಉದ್ದದ ಗಡಿಯನ್ನು ಹಂಚಿಕೊಂಡಿದೆ.
“ನಾನು ಇಲ್ಲಿ ಬ್ರೆಡ್ ತಿಂದಿದ್ದೇನೆ, ಸಾಲ ತೀರಿಸ್ತಿದ್ದೇನೆ” ; ಹಿಮಾಚಲ ಪ್ರದೇಶದಲ್ಲಿ ಪ್ರಧಾನಿ ಮೋದಿ ಮಾತು