ದಕ್ಷಿಣಕನ್ನಡ : ಹಿಂದು ಜಾಗರಣ ವೇದಿಕೆ ಮುಖಂಡರ ಗಡಿಪಾರು ನೋಟಿಸ್ ಗೆ ಇದೀಗ ಜಿಲ್ಲಾ ಸತ್ರ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ದಿನೇಶ್ ಪಂಜಿಗ ಹಾಗೂ ಯಶೋದರ ಎನ್ನುವ ಹಿಂದೂ ಮುಖಂಡರ ಗಡಿಪಾರು ನೋಟಿಸ್ ಗೆ ತಡೆಯಾಜ್ಞೆ ನೀಡಿದೆ ಎಂದು ತಿಳಿದುಬಂದಿದೆ.
ಗಡಿಪಾರಿಗೆ ಪುತ್ತೂರು ಎಸಿ ಕಾರಣ ಕೇಳಿ ನೋಟಿಸ್ ನೀಡಿದ್ದರು. ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಇದೀಗ ಗಡಿಪಾರಿಗೆ ತಡೆಯಾಜ್ಞೆ ನೀಡಿದೆ ಎಂದು ಹೇಳಲಾಗುತ್ತಿದೆ ಎಸಿ ನೋಟಿಸ್ ಪ್ರಶ್ನಿಸಿ ಈ ಹಿಂದೆ ಹಿಂದೂ ಮುಖಂಡರು ಕೋರ್ಟ್ ಮೆಟ್ಟಿಲೇರಿದ್ದರು.
ಹಿಂದೂ ಮುಖಂಡ ಪರ ನ್ಯಾಯವಾದಿ ಮಹೇಶ್ ಕಜೆ ಈ ವೇಳೆ ವಾದ ಮಂಡಿಸಿದರು. ವಾದವನ್ನು ಪುರಸ್ಕರಿಸಿ ಗಡಿಪಾರು ನೋಟಿಸ್ ಗೆ ನ್ಯಾಯಾಲಯ ಇದೀಗ ತಡೆಯಾಜ್ಞೆ ನೀಡಿದೆ. ಆಪಾದಿತರ ವಿರುದ್ಧದ ಎಲ್ಲಾ ಕಡತಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರಿಗೆ ಕೋರ್ಟ್ ಸೂಚಿಸಿದೆ ಎಂದು ತಿಳಿದುಬಂದಿದೆ.