Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಒಂದು ರಾಜ್ಯದ ‘ನೋಂದಣಿ ಸಂಖ್ಯೆ’ ಹೊಂದಿರುವ ವಾಹನ ಮತ್ತೊಂದು ರಾಜ್ಯದಲ್ಲಿ ಓಡಿಸ್ಬೋದೇ.?

12/08/2025 10:16 PM

BREAKING : ‘ಆನ್ಲೈನ್ ಪಾವತಿ ಸಂಗ್ರಾಹಕ’ವಾಗಿ ಕಾರ್ಯ ನಿರ್ವಹಿಸಲು ‘ಪೇಟಿಎಂ ಪಾವತಿ ಸೇವೆ’ಗಳಿಗೆ ‘RBI’ ಅನುಮೋದನೆ

12/08/2025 9:37 PM

ಉಚಿತ ಮೊಬೈಲ್ ರಿಪೇರಿ ಮತ್ತು ಸೇವೆ ತರಬೇತಿಗಾಗಿ ಅರ್ಜಿ ಆಹ್ವಾನ

12/08/2025 9:08 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜಾತ್ಯತೀತತೆ ಭಾರತದ ಆತ್ಮ, ಒಂದು ಧರ್ಮದ ಪ್ರಚಾರ ಸಲ್ಲ: ಕೇರಳ ಸಿಎಂ ಪಿಣರಾಯಿ ವಿಜಯನ್
INDIA

ಜಾತ್ಯತೀತತೆ ಭಾರತದ ಆತ್ಮ, ಒಂದು ಧರ್ಮದ ಪ್ರಚಾರ ಸಲ್ಲ: ಕೇರಳ ಸಿಎಂ ಪಿಣರಾಯಿ ವಿಜಯನ್

By KNN IT Team22/01/2024 10:23 PM

ಪ್ರಧಾನಿ ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ ಉದ್ಘಾಟನೆ ನೆರವೇರಿಸಿದ ಕೆಲವು ಗಂಟೆಗಳ ನಂತರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಡಿಯೋ ಸಂದೇಶ ಪ್ರಕಟಿಸಿದ್ದು, ಧಾರ್ಮಿಕ ಕಾರ್ಯಕ್ರಮವನ್ನು ದೇಶದ ಕಾರ್ಯಕ್ರಮವನ್ನಾಗಿ ಆಚರಿಸಿರುವುದಕ್ಕಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ನಮ್ಮ ಸಂವಿಧಾನದಲ್ಲಿ ಉನ್ನತ ಸ್ಥಾನ ಹೊಂದಿರುವವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ದೂರವುಳಿದು ನಮ್ಮ ಜಾತ್ಯತೀತ ರಾಷ್ಟ್ರ ಮೌಲ್ಯಗಳಿಗೆ ಬದ್ಧರಾಗಿರಬೇಕು. ಜಾತ್ಯತೀತತೆ ನಮ್ಮ ದೇಶದ ಆತ್ಮವಾಗಿದೆ. ಭಾರತದ ಮೊದಲ ಪ್ರಧಾನಿ ಜವಹರ್‌ ಲಾಲ್ ನೆಹರು ಕೂಡ ಭಾರತದ ಜಾತ್ಯತೀತತೆ ಎಂದರೆ ಧರ್ಮ ಹಾಗೂ ಆಡಳಿತದಿಂದ ಅಂತರ ಕಾಯ್ದುಕೊಂಡಿರಬೇಕು ಎಂದು ಹೇಳಿದ್ದರು ಎಂದು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಧರ್ಮ ಹಾಗೂ ಆಡಳಿತದ ನಡುವಿನ ಅಂತರ ದಿನದಿಂದ ದಿನಕ್ಕೆ ಕುಗ್ಗುತ್ತಿದೆ. ಧಾರ್ಮಿಕ ಸಮಾರಂಭವನ್ನು ರಾಷ್ಟ್ರದ ಅಧಿಕೃತ ಕಾರ್ಯಕ್ರಮವಾಗಿ ಆಚರಿಸುವ ಹಂತಕ್ಕೆ ನಾವು ತಲುಪಿದ್ದೇವೆ. ಆ ಸಮಾರಂಭದಲ್ಲಿ ಭಾಗವಹಿಸುವ ಆಹ್ವಾನವನ್ನು ನಿರಾಕರಿಸುವ ಮೂಲಕ, ಭಾರತದ ಜಾತ್ಯತೀತ ಸ್ವರೂಪಕ್ಕೆ ನಮ್ಮ ಬದ್ಧತೆಯನ್ನು ಗಟ್ಟಿಗೊಳಿಸಿದ್ದೇವೆ ಎಂದು ಪಿಣರಾಯಿ ವಿಜಯನ್ ಹೇಳಿದರು.

ಈ ಸಂದರ್ಭದಲ್ಲಿ ನಾವು ಒಂದು ಧರ್ಮವನ್ನು ವೈಭವೀಕರಿಸಿ ಇತರ ಧರ್ಮಗಳನ್ನು ಕೀಳಾಗಿ ಕಾಣಬಾರದು. ಇತರ ಧರ್ಮಗಳು ಹಾಗೂ ನಂಬಿಕೆಯನ್ನು ಆಚರಿಸುವವರು ಕೂಡ ನಮ್ಮ ಸ್ವತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಈ ದೇಶ ಎಲ್ಲ ಜನ ಸಮಾಜದ ಎಲ್ಲ ಪಂಗಡಗಳ ಜನರಿಗೆ ಸೇರಿದೆ. ಎಲ್ಲರನ್ನು ಸಮಾನವಾಗಿ ಪರಿಗಣಿಸಬೇಕು. ಧರ್ಮವು ಖಾಸಗಿ ವಿಷಯ. ಸಂವಿಧಾನ ಕೂಡ ಎಲ್ಲ ವ್ಯಕ್ತಿಗಳು ಅವರ ಆತ್ಮಸಾಕ್ಷಿಯ ಅನುಗುಣವಾಗಿ ಯಾವುದೇ ಧರ್ಮವನ್ನು ಮುಕ್ತವಾಗಿ ಆಚರಣೆ ಮಾಡುವ, ಪ್ರಚಾರ ಮಾಡುವ ಹಕ್ಕನ್ನು ಹೊಂದಿದೆ ಎಂದು ಹೇಳುತ್ತದೆ. ಧರ್ಮ, ಭಾಷೆ ಮತ್ತು ಪ್ರಾದೇಶಿಕ ಅಥವಾ ವಿಭಾಗೀಯ ವೈವಿಧ್ಯತೆಗಳನ್ನು ಮೀರಿ ಭಾರತದ ಎಲ್ಲ ಜನರಲ್ಲಿ ಸಾಮರಸ್ಯ ಮತ್ತು ಸಮಾನ ಸಹೋದರತ್ವದ ಮನೋಭಾವವನ್ನು ಉತ್ತೇಜಿಸಲು ಪಿಣರಾಯಿ ವಿಜಯನ್ ಕರೆ ನೀಡಿದರು. ಅಯೋಧ್ಯೆಯ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸಲು ನನಗೆ ಆಹ್ವಾನ ಬಂದಿತ್ತು. ಆಹ್ವಾನವನ್ನು ಸ್ವೀಕರಿಸದೆ ಸಾಂವಿಧಾನಿಕ ಜವಾಬ್ದಾರಿಯನ್ನು ಎತ್ತಿಹಿಡಿದಿದ್ದೇವೆ. ವೈಜ್ಞಾನಿಕ ಮನೋಭಾವ, ಮಾನವತಾವಾದ ಮತ್ತು ವಿಚಾರಣೆ ಮತ್ತು ಸುಧಾರಣೆಯ ಮನೋಭಾವವನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತವು ಮತ್ತಷ್ಟು ಏಳಿಗೆಯಾಗಲಿ” ಎಂದು ಜನತೆಗೆ ಕೇರಳ ಸಿಎಂ ಕರೆ ನೀಡಿದರಾಗಿದೆ.

Share. Facebook Twitter LinkedIn WhatsApp Email

Related Posts

ಒಂದು ರಾಜ್ಯದ ‘ನೋಂದಣಿ ಸಂಖ್ಯೆ’ ಹೊಂದಿರುವ ವಾಹನ ಮತ್ತೊಂದು ರಾಜ್ಯದಲ್ಲಿ ಓಡಿಸ್ಬೋದೇ.?

12/08/2025 10:16 PM2 Mins Read

BREAKING : ‘ಆನ್ಲೈನ್ ಪಾವತಿ ಸಂಗ್ರಾಹಕ’ವಾಗಿ ಕಾರ್ಯ ನಿರ್ವಹಿಸಲು ‘ಪೇಟಿಎಂ ಪಾವತಿ ಸೇವೆ’ಗಳಿಗೆ ‘RBI’ ಅನುಮೋದನೆ

12/08/2025 9:37 PM1 Min Read

BREAKING : ರಾಜಸ್ಥಾನ-ಹರಿಯಾಣ ಗಡಿಯಲ್ಲಿ 2 ಸಮುದಾಯಗಳ ನಡುವೆ ಹಿಂಸಾತ್ಮಕ ಘರ್ಷಣೆ, ಹಲವು ವಾಹನಗಳಿಗೆ ಬೆಂಕಿ

12/08/2025 9:01 PM1 Min Read
Recent News

ಒಂದು ರಾಜ್ಯದ ‘ನೋಂದಣಿ ಸಂಖ್ಯೆ’ ಹೊಂದಿರುವ ವಾಹನ ಮತ್ತೊಂದು ರಾಜ್ಯದಲ್ಲಿ ಓಡಿಸ್ಬೋದೇ.?

12/08/2025 10:16 PM

BREAKING : ‘ಆನ್ಲೈನ್ ಪಾವತಿ ಸಂಗ್ರಾಹಕ’ವಾಗಿ ಕಾರ್ಯ ನಿರ್ವಹಿಸಲು ‘ಪೇಟಿಎಂ ಪಾವತಿ ಸೇವೆ’ಗಳಿಗೆ ‘RBI’ ಅನುಮೋದನೆ

12/08/2025 9:37 PM

ಉಚಿತ ಮೊಬೈಲ್ ರಿಪೇರಿ ಮತ್ತು ಸೇವೆ ತರಬೇತಿಗಾಗಿ ಅರ್ಜಿ ಆಹ್ವಾನ

12/08/2025 9:08 PM

BREAKING : ರಾಜಸ್ಥಾನ-ಹರಿಯಾಣ ಗಡಿಯಲ್ಲಿ 2 ಸಮುದಾಯಗಳ ನಡುವೆ ಹಿಂಸಾತ್ಮಕ ಘರ್ಷಣೆ, ಹಲವು ವಾಹನಗಳಿಗೆ ಬೆಂಕಿ

12/08/2025 9:01 PM
State News
KARNATAKA

ಉಚಿತ ಮೊಬೈಲ್ ರಿಪೇರಿ ಮತ್ತು ಸೇವೆ ತರಬೇತಿಗಾಗಿ ಅರ್ಜಿ ಆಹ್ವಾನ

By kannadanewsnow0912/08/2025 9:08 PM KARNATAKA 1 Min Read

ಬೆಂಗಳೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್‌ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್‌ ಸಂಸ್ಥೆಯ ವತಿಯಿಂದ ಮೊಬೈಲ್…

FC ಕಾರಣ ನೀಡಿ ಕಾರಿನ ರಿಪೇರಿ ಖರ್ಚು ನೀಡದ ವಿಮಾ ಕಂಪನಿಗೆ 1.50 ಲಕ್ಷ ದಂಡ ವಿಧಿಸಿದ ಕೋರ್ಟ್

12/08/2025 8:57 PM

ರಾಜ್ಯಾಧ್ಯಂತ ‘ಎ-ಖಾತಾ ವ್ಯವಸ್ಥೆ’ ಜಾರಿ: ಸಚಿವ ಬೈರತಿ ಸುರೇಶ್

12/08/2025 8:42 PM

ವ್ಯಾಪಾರಸ್ಥರು ‘ಟ್ರೇಡ್ ಲೈಸೆನ್ಸ್’ ಪಡೆಯುವುದು ಕಡ್ಡಾಯ: ಸಚಿವ ಬೈರತಿ ಸುರೇಶ್

12/08/2025 8:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.