Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

IPL – 2025 : ಇಂದು IPL ಪುನರಾರಂಭದ ಬಗ್ಗೆ ಬಿಸಿಸಿಐ ಚರ್ಚೆ: ರಾಜೀವ್ ಶುಕ್ಲಾ

11/05/2025 7:15 AM

BREAKING : ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ‘ಅವಾಮಿ ಲೀಗ್’ ಅನ್ನು ನಿಷೇಧಿಸಿದ ಮಧ್ಯಂತರ ಸರ್ಕಾರ | Awami league

11/05/2025 7:05 AM

BREAKING : ಗಡಿಯಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ : ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮಾಹಿತಿ

11/05/2025 7:02 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕ್ಯಾಪಿಟಲ್​ ಲೆಟರ್​ಗಳಲ್ಲೇ ವೈದ್ಯರು ಪ್ರಿಸ್ಕ್ರಿಪ್ಷನ್ ಬರೆಯಬೇಕು : ಜಿಗ್​ಜ್ಯಾಗ್​ ಬರಹದ ವಿರುದ್ಧ ಹೈಕೋರ್ಟ್​ ಗರಂ
INDIA

ಕ್ಯಾಪಿಟಲ್​ ಲೆಟರ್​ಗಳಲ್ಲೇ ವೈದ್ಯರು ಪ್ರಿಸ್ಕ್ರಿಪ್ಷನ್ ಬರೆಯಬೇಕು : ಜಿಗ್​ಜ್ಯಾಗ್​ ಬರಹದ ವಿರುದ್ಧ ಹೈಕೋರ್ಟ್​ ಗರಂ

By KNN IT Team10/01/2024 4:15 PM

ಭುವನೇಶ್ವರ್​ : ಔಷಧ ಚೀಟಿಯ ಮೇಲೆ ಬರೆಯುವ ವೈದ್ಯರ ಬರವಣಿಗೆಯು ಮೆಡಿಕಲ್​ ಶಾಪ್​ ಸಿಬ್ಬಂದಿಗೆ ಮಾತ್ರ ಅರ್ಥವಾಗುತ್ತೆ ಎಂಬುದು ಜನರ ಸಾಮಾನ್ಯ ನಂಬಿಕೆಯಾಗಿದೆ. ಬಹುತೇಕ ವೈದ್ಯರ ಬರಹ ಅಸ್ಪಷ್ಟವಾಗಿರುತ್ತದೆ. ಹೀಗಾಗಿ ಏನು ಬರೆದಿದ್ದಾರೆ ಎಂದು ತಿಳಿದುಕೊಳ್ಳಲು ಕಷ್ಟವಾಗುತ್ತದೆ. ಔಷಧ ಚೀಟಿ ನೋಡಿ ವೈದ್ಯರನ್ನು ಶಪಿಸಿದವರಲ್ಲಿ ನೀವು ಕೂಡ ಒಬ್ಬರಾಗಿರಬಹುದು. ವೈದ್ಯರಿಗೆ ಹೇಳುವವರು ಯಾರೂ ಇಲ್ಲವಾ ಅನಿಸಿರಬಹುದು. ಆದರೆ, ಈ ವಿಚಾರದಲ್ಲಿ ಒಡಿಶಾ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ.

ಎಲ್ಲ ವೈದ್ಯರು ವೈದ್ಯಕೀಯ ಚೀಟಿ, ಮರಣೋತ್ತರ ವರದಿ ಮತ್ತು ವೈದ್ಯಕೀಯ ಅಧಿಕೃತ ದಾಖಲೆಗಳನ್ನು ಸ್ಪಷ್ಟವಾದ ಕೈಬರಹ ಅಥವಾ ಕ್ಯಾಪಿಟಲ್​ ಲೆಟರ್​ಗಳಲ್ಲಿ ಬರೆಯುವುದನ್ನು ಆರೋಗ್ಯ ಇಲಾಖೆ ಖಚಿತಪಡಿಸಿಕೊಳ್ಳಬೇಕೆಂದು ಒಡಿಶಾ ಹೈಕೋರ್ಟ್​ ಮಹತ್ವದ ಆದೇಶ ಹೊರಡಿಸಿದೆ. ಒಡಿಶಾ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮುಖ್ಯ ನ್ಯಾಯಮೂರ್ತಿ ಎಸ್​.ಕೆ. ಪಾಣಿಗ್ರಹಿ ನಿರ್ದೇಶನ ನೀಡಿದ್ದಾರೆ. ಸಾರ್ವಜನಿಕರು ಮತ್ತು ನ್ಯಾಯಾಂಗ ವ್ಯವಸ್ಥೆಗೆ ಸುಲಭವಾಗುವಂತೆ ಸ್ಪಷ್ಟ ಕೈಬರಹ ಇರಲಿ ಎಂದು ಎಲ್ಲ ವೈದ್ಯಕೀಯ ಕೇಂದ್ರ, ಖಾಸಗಿ ಕ್ಲೀನಿಕ್​ಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೂ ಕೂಡ ನ್ಯಾಯಾಲಯ ಸೂಚಿಸಿದೆ. ಒಡಿಶಾದ ದೆಂಕನಾಲ್​ ಜಿಲ್ಲೆಯ ರಾಸನಂದಾ ಭೋಯಿ​ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶವನ್ನು ಹೊರಡಿಸಿದೆ. ಹಾವು ಕಡಿತದಿಂದ ರಾಸನಂದಾ ಅವರ ಹಿರಿಯ ಮಗ ಸೌವಾಗ್ಯ ರಂಜನ್ ಭೋಯಿ ಮೃತಪಟ್ಟಿದ್ದಾರೆ. ಸರ್ಕಾರದಿಂದ ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದರ ವಿಚಾರಣೆ ವೇಳೆ ಸರ್ಕಾರ ಸಲ್ಲಿಸಿದ್ದ ಮರಣೋತ್ತರ ವರದಿಯಲ್ಲಿನ ವೈದ್ಯರ ಬರಹ ಸ್ಪಷ್ಟವಾಗಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಆದೇಶವನ್ನು ಹೊರಡಿಸಿದೆ. ಔಷಧಿಗಳ ಹೆಸರುಗಳಲ್ಲಿ ಸ್ಪಷ್ಟತೆ ಇರುವಂತೆ ಪ್ರಿಸ್ಕ್ರಿಪ್ಷನ್ ಬರೆಯುವಾಗ ಸ್ಪಷ್ಟವಾದ ಕೈಬರಹವನ್ನು ಅನುಸರಿಸಬೇಕು ಎಂದು ನ್ಯಾಯಾಲಯದ ನಿರ್ದೇಶನವು ಒತ್ತಿಹೇಳುತ್ತದೆ. ಅನೇಕ ಸಂದರ್ಭಗಳಲ್ಲಿ, ಮರಣೋತ್ತರ ಪರೀಕ್ಷೆಯ ವರದಿಯನ್ನು ಬರೆಯುವಾಗ ಹೆಚ್ಚಿನ ವೈದ್ಯರ ಸಾಮಾನ್ಯ ವಿಧಾನವು ದಾಖಲೆಗಳ ಪರಿಶೀಲನೆ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಮತ್ತು ನ್ಯಾಯಾಂಗ ವ್ಯವಸ್ಥೆಯು ಆ ಪತ್ರಗಳನ್ನು ಓದಲು ಮತ್ತು ಖಚಿತವಾದ ತೀರ್ಮಾನಕ್ಕೆ ಬರಲು ತುಂಬಾ ಕಷ್ಟಕರವಾಗಿದೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ. ಜಿಗ್​ಜ್ಯಾಗ್ ಕೈಬರಹವನ್ನು ಅನುಸರಿಸುವುದು ವೈದ್ಯರಲ್ಲಿ ರೂಢಿಯಾಗಿದೆ. ಇದರಿಂದಾಗಿ ಸಾಮಾನ್ಯ ಜನರು ಮತ್ತು ನ್ಯಾಯಾಂಗವು ವೈದ್ಯಕೀಯ ದಾಖಲೆಗಳನ್ನು ಓದಲು ಕಷ್ಟವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆಯಾಗಿದೆ.

Share. Facebook Twitter LinkedIn WhatsApp Email

Related Posts

IPL – 2025 : ಇಂದು IPL ಪುನರಾರಂಭದ ಬಗ್ಗೆ ಬಿಸಿಸಿಐ ಚರ್ಚೆ: ರಾಜೀವ್ ಶುಕ್ಲಾ

11/05/2025 7:15 AM1 Min Read

BREAKING : ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ‘ಅವಾಮಿ ಲೀಗ್’ ಅನ್ನು ನಿಷೇಧಿಸಿದ ಮಧ್ಯಂತರ ಸರ್ಕಾರ | Awami league

11/05/2025 7:05 AM1 Min Read

BREAKING : ಗಡಿಯಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ : ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮಾಹಿತಿ

11/05/2025 7:02 AM1 Min Read
Recent News

IPL – 2025 : ಇಂದು IPL ಪುನರಾರಂಭದ ಬಗ್ಗೆ ಬಿಸಿಸಿಐ ಚರ್ಚೆ: ರಾಜೀವ್ ಶುಕ್ಲಾ

11/05/2025 7:15 AM

BREAKING : ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ‘ಅವಾಮಿ ಲೀಗ್’ ಅನ್ನು ನಿಷೇಧಿಸಿದ ಮಧ್ಯಂತರ ಸರ್ಕಾರ | Awami league

11/05/2025 7:05 AM

BREAKING : ಗಡಿಯಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ : ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮಾಹಿತಿ

11/05/2025 7:02 AM

ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ; ರಾಜಸ್ಥಾನ ಗಡಿಯಲ್ಲಿ ‘ಬ್ಲ್ಯಾಕೌಟ್’ ಜಾರಿ | Blackout imposed

11/05/2025 6:52 AM
State News
KARNATAKA

BIG NEWS : ರಾಜ್ಯದಲ್ಲಿ ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕಠಿಣ ಕ್ರಮ : CM ಸಿದ್ದರಾಮಯ್ಯ ಎಚ್ಚರಿಕೆ

By kannadanewsnow5711/05/2025 6:51 AM KARNATAKA 2 Mins Read

ಬೆಂಗಳೂರು : ರಾಜ್ಯದಲ್ಲಿ ಸುಳ್ಳು ಸುದ್ದಿಗಳಿಗೆ ಕಡ್ಡಾಯವಾಗಿ ಕಡಿವಾಣ ಹಾಕಬೇಕು. ಅಗತ್ಯ ಬಿದ್ದರೆ ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕಠಿಣ…

BIG NEWS : ರಾಜ್ಯ ಸರ್ಕಾರದಿಂದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಶೇ.5 ರಷ್ಟು ತೆರಿಗೆ ರಿಯಾಯಿತಿ ಜೂನ್ 30 ರವರೆಗೆ ಅವಧಿ ವಿಸ್ತರಣೆ.!

11/05/2025 6:12 AM

BIG NEWS : ‘ಬುದ್ಧ ಪೂರ್ಣಿಮ’ : ನಾಳೆ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧಿಸಿ ‘BBMP’ ಆದೇಶ

11/05/2025 5:59 AM

BIG NEWS : ಸೇವೆಯಲ್ಲಿರುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ `ಕೆನಪದರ’ ಮಿತಿಗೆ ವಿನಾಯಿತಿ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

11/05/2025 5:52 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.