Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮುಂಜಾನೆ ಎದ್ದ ತಕ್ಷಣ ಕೇವಲ 21 ಬಾರಿ ಈ ಚಿಕ್ಕ ಶಬ್ದ ಹೇಳಿ ಸಾಕು, ಧನಾಗಮನ, ನೆಮ್ಮದಿ ಗ್ಯಾರಂಟಿ

18/03/2026 6:58 PM

ಇಂಡೋ-ಯುಎಸ್ ಒಪ್ಪಂದ ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನೆ: ನವದೆಹಲಿಯಲ್ಲಿ ಸಂಸತ್ ಘೇರಾವ್

18/03/2026 6:46 PM

ಕಾನೂನಿಗೂ ಡೋಂಟ್‌ ಕೇರ್‌: ಇನ್ನೂ ಕನ್ನಡದಲ್ಲಿ ಬರ್ತಾ ಇದೇ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು

18/03/2026 6:12 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇಂಡೋ-ಯುಎಸ್ ಒಪ್ಪಂದ ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನೆ: ನವದೆಹಲಿಯಲ್ಲಿ ಸಂಸತ್ ಘೇರಾವ್
KARNATAKA

ಇಂಡೋ-ಯುಎಸ್ ಒಪ್ಪಂದ ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನೆ: ನವದೆಹಲಿಯಲ್ಲಿ ಸಂಸತ್ ಘೇರಾವ್

By kannadanewsnow0918/03/2026 6:46 PM

ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚೆಗೆ ಮುಂದಿಟ್ಟಿರುವ ಬಹುಚರ್ಚಿತ ಇಂಡೋ-ಯುಎಸ್ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ಭಾರತೀಯ ಯುವ ಕಾಂಗ್ರೆಸ್ (IYC) ಕಾರ್ಯಕರ್ತರು ನವದೆಹಲಿಯಲ್ಲಿ ಬೃಹತ್ ಮಟ್ಟದ ‘ಸಂಸತ್ ಘೇರಾವ್’ ಪ್ರತಿಭಟನೆ ನಡೆಸಿದರು. ಕರ್ನಾಟಕದಿಂದ ರಾಜ್ಯ ಯುವ ಕಾಂಗ್ರೆಸ್​ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ನೇತೃತ್ವದಲ್ಲಿ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.

ಈ ಒಪ್ಪಂದದಿಂದ ದೇಶದ ರೈತರು, ಕಾರ್ಮಿಕರು ಹಾಗೂ ಸಣ್ಣ ಕೈಗಾರಿಕೆಗಳಿಗೆ ಭಾರಿ ನಷ್ಟ ಉಂಟಾಗಲಿದೆ ಎಂದು ಆರೋಪಿಸಿರುವ ಯುವ ಕಾಂಗ್ರೆಸ್ ನಾಯಕರು, ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಅವರ ನೇತೃತ್ವದಲ್ಲಿ ನಡೆದ ಈ ಬೃಹತ್ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್‌ನ ನೂರಕ್ಕೂ ಹೆಚ್ಚು ಪದಾಧಿಕಾರಿಗಳು ಭಾಗವಹಿಸಿ ಕೇಂದ್ರದ ವಿರುದ್ಧದ ಹೋರಾಟಕ್ಕೆ ಸಾಥ್ ನೀಡಿದರು.

ನವದೆಹಲಿಯ ಜಂತರ್ ಮಂತರ್‌ನಲ್ಲಿ ಸೇರಿದ ದೇಶದ ವಿವಿಧ ರಾಜ್ಯಗಳ ಯುವ ಕಾಂಗ್ರೆಸ್ ಕಾರ್ಯಕರ್ತರು ಇಂಡೋ-ಯುಎಸ್ ವ್ಯಾಪಾರ ಒಪ್ಪಂದದ ವಿರುದ್ಧ ದಿಕ್ಕಾರ ಕೂಗಿದರು. ಈ ಹೊಸ ಒಪ್ಪಂದವು ಭಾರತದ ಕೃಷಿ ವಲಯ, ಜವಳಿ ಉದ್ಯಮ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೆ ಗಂಭೀರವಾದ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಇದರ ಜೊತೆಗೆ, ಈ ಒಪ್ಪಂದದ ಜಾರಿಯಿಂದಾಗಿ ಅಮೆರಿಕಕ್ಕೆ ಭಾರತೀಯರ ಡೇಟಾ ಸುಲಭವಾಗಿ ಲಭ್ಯವಾಗಲಿದ್ದು, ಇದು ದೇಶದ ದತ್ತಾಂಶ ಭದ್ರತೆಗೆ (ಡೇಟಾ ಸೆಕ್ಯುರಿಟಿ) ಬಹುದೊಡ್ಡ ಅಪಾಯ ತಂದೊಡ್ಡಲಿದೆ ಎಂದು ಯುವ ಕಾಂಗ್ರೆಸ್ ನಾಯಕರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸಂಸತ್ ಭವನದತ್ತ ಮೆರವಣಿಗೆ ಹೊರಟ ನೂರಾರು ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿ ಬಿಗಿ ಭದ್ರತೆ ಒದಗಿಸಿದ್ದರು.

ಕರ್ನಾಟಕ ಘಟಕದ ಸಕ್ರಿಯ ಭಾಗಿತ್ವ

ರಾಷ್ಟ್ರಮಟ್ಟದ ಈ ಬೃಹತ್ ಪ್ರತಿಭಟನೆಯಲ್ಲಿ ಕರ್ನಾಟಕದ ಯುವ ಕಾಂಗ್ರೆಸ್ ಘಟಕವು ಪಾಲ್ಗೊಂಡು ಗಮನ ಸೆಳೆಯಿತು. ನೂತನವಾಗಿ ಆಯ್ಕೆಯಾಗಿರುವ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ಅವರ ನೇತೃತ್ವದಲ್ಲಿ ರಾಜ್ಯದ ವಿವಿಧ ಭಾಗಗಳ 100ಕ್ಕೂ ಹೆಚ್ಚು ಪದಾಧಿಕಾರಿಗಳು ದೆಹಲಿಗೆ ತೆರಳಿ ಸಂಸತ್ ಘೇರಾವ್ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿ ನಿಂತು ಪಾಲ್ಗೊಂಡರು. ದೇಶದ ಸ್ವಾಯತ್ತತೆಯನ್ನು ರಕ್ಷಿಸುವುದು, ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವುದು ಹಾಗೂ ಜನತಾಂತ್ರಿಕ ಮೌಲ್ಯಗಳ ಸಂರಕ್ಷಣೆಯೇ ಈ ಹೋರಾಟದ ಪ್ರಮುಖ ಉದ್ದೇಶವಾಗಿದೆ ಎಂದು ಮಂಜುನಾಥ್ ಗೌಡ ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

Share. Facebook Twitter LinkedIn WhatsApp Email

Related Posts

ಮುಂಜಾನೆ ಎದ್ದ ತಕ್ಷಣ ಕೇವಲ 21 ಬಾರಿ ಈ ಚಿಕ್ಕ ಶಬ್ದ ಹೇಳಿ ಸಾಕು, ಧನಾಗಮನ, ನೆಮ್ಮದಿ ಗ್ಯಾರಂಟಿ

18/03/2026 6:58 PM4 Mins Read

ಕಾನೂನಿಗೂ ಡೋಂಟ್‌ ಕೇರ್‌: ಇನ್ನೂ ಕನ್ನಡದಲ್ಲಿ ಬರ್ತಾ ಇದೇ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು

18/03/2026 6:12 PM2 Mins Read

ಧರ್ಮಸ್ಥಳ ಅಸಹಜ ಸಾವುಗಳ ಪ್ರಕರಣ: 74 ಸಾವುಗಳ ಸಮಗ್ರ ವರದಿ ಸಲ್ಲಿಕೆಗೆ ಹೈಕೋರ್ಟ್ ಆದೇಶ

18/03/2026 5:42 PM2 Mins Read
Recent News

ಮುಂಜಾನೆ ಎದ್ದ ತಕ್ಷಣ ಕೇವಲ 21 ಬಾರಿ ಈ ಚಿಕ್ಕ ಶಬ್ದ ಹೇಳಿ ಸಾಕು, ಧನಾಗಮನ, ನೆಮ್ಮದಿ ಗ್ಯಾರಂಟಿ

18/03/2026 6:58 PM

ಇಂಡೋ-ಯುಎಸ್ ಒಪ್ಪಂದ ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನೆ: ನವದೆಹಲಿಯಲ್ಲಿ ಸಂಸತ್ ಘೇರಾವ್

18/03/2026 6:46 PM

ಕಾನೂನಿಗೂ ಡೋಂಟ್‌ ಕೇರ್‌: ಇನ್ನೂ ಕನ್ನಡದಲ್ಲಿ ಬರ್ತಾ ಇದೇ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು

18/03/2026 6:12 PM

BREAKING : ಹೋಟೆಲ್ ಮಾಲೀಕರಿಗೆ ಬಿಗ್ ರಿಲೀಫ್ ; ‘ವಾಣಿಜ್ಯ LPG’ಯಲ್ಲಿ ರಾಜ್ಯಗಳಿಗೆ ಶೇ.10ರಷ್ಟು ಹೆಚ್ಚುವರಿ ಕೋಟಾ!

18/03/2026 6:04 PM
State News
KARNATAKA

ಮುಂಜಾನೆ ಎದ್ದ ತಕ್ಷಣ ಕೇವಲ 21 ಬಾರಿ ಈ ಚಿಕ್ಕ ಶಬ್ದ ಹೇಳಿ ಸಾಕು, ಧನಾಗಮನ, ನೆಮ್ಮದಿ ಗ್ಯಾರಂಟಿ

By kannadanewsnow0918/03/2026 6:58 PM KARNATAKA 4 Mins Read

ಹಿಂದೂ ಧರ್ಮದಲ್ಲಿ ಲಕ್ಷ್ಮಿ ದೇವಿಯನ್ನು ಸಂಪತ್ತಿನ ಅಧಿದೇವತೆ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯು ಸಂಪತ್ತು ಮತ್ತು ಸಮೃದ್ಧಿಯ ಪ್ರತೀಕವಾಗಿದ್ದಾಳೆ. ಪ್ರತೀ…

ಇಂಡೋ-ಯುಎಸ್ ಒಪ್ಪಂದ ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನೆ: ನವದೆಹಲಿಯಲ್ಲಿ ಸಂಸತ್ ಘೇರಾವ್

18/03/2026 6:46 PM

ಕಾನೂನಿಗೂ ಡೋಂಟ್‌ ಕೇರ್‌: ಇನ್ನೂ ಕನ್ನಡದಲ್ಲಿ ಬರ್ತಾ ಇದೇ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು

18/03/2026 6:12 PM

ಧರ್ಮಸ್ಥಳ ಅಸಹಜ ಸಾವುಗಳ ಪ್ರಕರಣ: 74 ಸಾವುಗಳ ಸಮಗ್ರ ವರದಿ ಸಲ್ಲಿಕೆಗೆ ಹೈಕೋರ್ಟ್ ಆದೇಶ

18/03/2026 5:42 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.