ಮಂಡ್ಯ : ಬೆಳಗ್ಗೆ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಿದ ಹಿನ್ನೆಲೆ ಸ್ನಾನ ಮಾಡುವಾಗ ಯುವಕ ಕಾಲು ಜಾರಿ ಕೊಚ್ಚಿಹೋದ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಯಲಹಂಕ ನಿವಾಸಿ ಅಶೋಕ್ (26)ಸಾವನ್ನಪ್ಪಿದ ಯುವಕ. ಕುಟುಂಬಸ್ಥರು , ಸ್ನೇಹಿತರೊಂದಿಗೆ ಪೂಜೆಗಾಗಿ ಕಾವೇರಿ ಸಂಗಮಕ್ಕೆ ತೆರಳಿದ್ದಾಗ ಶ್ರೀರಂಗಪಟ್ಟಣದ ಸಂಗಮದ ಬಳಿ ದುರ್ಘಟನೆ ನಡೆದಿದೆ
ಕಾವೇರಿ ನದಿಯಲ್ಲಿ ಭಾರೀ ನೀರಿನ ಹರಿವು ಬರುತ್ತಿರುವ ಬಗ್ಗೆ ಯಾವುದೇ ಎಚ್ಚರಿಕೆಯ ಬೋರ್ಡ್ ಹಾಕಿಲ್ಲವೆಂದು ಅಧಿಕಾರಿಗಳ ವಿರುದ್ಧ ಕುಟುಂಸ್ಥರ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಂಗಮದ ಬಳಿಕ ಯುವಕ ಅಶೋಕ್ ಕುಟುಂಬಸ್ಥರ ಅಕ್ರಂದನ. ಕೊಚ್ಚಿ ಹೋದ ಅಶೋಕ್ಗಾಗಿ ಮುಂದುವರಿದ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.