ಬೆಂಗಳೂರು : ಇತ್ತೀಚಿಗೆ ಸೇರಿಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಒಟ್ಟು 43 ಕೇಸ್ ಗಳನ್ನು ಹಿಂಪಡೆಯಲಾಗಿದೆ. ಅದರಲ್ಲಿ ಹಳೆ ಹುಬ್ಬಳ್ಳಿ ಗಲಭೆ ಕೇಸ್ ಕೂಡ ಇದೆ. ಹಾಗಾಗಿ ಇದೇ ರೀತಿಯಾಗಿ ಡಿಜೆ ಹಳ್ಳಿ ಹಾಗೂ ಕೆ ಜಿ ಹಳ್ಳಿ ಪ್ರಕರಣದಲ್ಲಿ ಅಮಾಯಕರ ಮೇಲಿನ ಕೇಸನ್ನು ಹಿಂಪಡೆಯಿರಿ ಎಂದು ಕಾಂಗ್ರೆಸ್ನ ಮಾಜಿ ಸಚಿವ ಆರ್ ರೋಷನ್ ಬೇಗ್ ತಿಳಿಸಿದ್ದಾರೆ.
ಡಿಜೆ ಹಳ್ಳಿ ಕೆ ಜಿ ಹಳ್ಳಿ ಕೇಸ್ ವಾಪಸ್ ಗೆ ಮನವಿ ಮಾಡಿದ ವಿಚಾರವಾಗಿ ಬೆಂಗಳೂರಿನಲ್ಲಿ ಮಾಜಿ ಸಚಿವ ಆರ್ ರೋಷನ್ ಬೇಗ್ ಪ್ರತಿಕ್ರಿಯೆ ನೀಡಿದ್ದು, ಅವರ ಮಕ್ಕಳು ತಂದೆ ತಾಯಿ ಭೇಟಿಯಾಗಿದ್ದರು. ಕಳೆದ ನಾಲ್ಕು ವರ್ಷದಿಂದ ಜೈಲಿನಲ್ಲಿ ಇದ್ದಾರೆ ಅವರು ಕಳ್ಳತನ ಮಾಡಿಲ್ಲ. ಹುಬ್ಬಳ್ಳಿಯ ಕೇಸ್ ಹಿಂಪಡೆದರು ಹಾಗಾಗಿ ಬಗ್ಗೆ ಯೋಚಿಸಿ ಎಂದರು.
ಆದ್ದರಿಂದ ಗೃಹ ಸಚಿವ ಪರಮೇಶ್ವರ್ ಬಳಿಯೂ ಈ ಕುರಿತು ಮಾತನಾಡಿದ್ದೇನೆ.ತಪ್ಪು ಮಾಡಿದವರು ಬೆಂಕಿ ಹಚ್ಚಿದವರನ್ನು ಎಂದಿಗೂ ಬಿಡಬೇಡಿ. ಅಮಾಯಕರನ್ನು ಹೊರಗೆ ಬಿಡಿ ಎಂದಿದ್ದೇವೆ. ಪೊಲೀಸ್ ಅಧಿಕಾರಿಗಳನ್ನು ಎಂಟರ್ ಪೋಲ್ ಗೆ ಕರೆದೋಯ್ದಿದೆ. ಅಮಾಯಕರ ಮೇಲೆ ದಾಖಲಾಗಿರುವ ಕೇಸ್ ವಾಪಸ್ ಪಡೆಯಲಿ ಎಂದು ಡಾ.ಪರಮೇಶ್ವರ ಭೇಟಿ ನಂತರ ಆರ್ ರೋಷನ್ ಬೇಗ್ ಹೇಳಿದರು.