ನವದೆಹಲಿ : ಭಾರತದ ಕ್ರೀಡಾ ನೀತಿ, ಹೊಸ ಕ್ರೀಡಾ ಮಸೂದೆ ಮತ್ತು ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಪಂದ್ಯಗಳ ಕುರಿತು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ, ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಮಾತನಾಡಿದ್ದಾರೆ.
ಭಾರತ vs ಪಾಕಿಸ್ತಾನ ಪಂದ್ಯಗಳ ವಿಷಯದ ಕುರಿತು, ಮಾಂಡವಿಯ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು. “ನಾವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯವಾಗಿ ಕ್ರಿಕೆಟ್ ಆಡುತ್ತಿಲ್ಲ. ಬಹುಪಕ್ಷೀಯ ಪಂದ್ಯಾವಳಿಗಳಲ್ಲಿ, ನಾವು ಬದ್ಧತೆಯನ್ನ ಅನುಸರಿಸಬೇಕು – ಯಾವುದೇ ದೇಶವು ಮತ್ತೊಂದು ರಾಷ್ಟ್ರದ ಕ್ರೀಡಾಪಟುಗಳಿಗೆ ವೀಸಾ ನಿರಾಕರಿಸುವಂತಿಲ್ಲ. ಭಾರತವು ಯಾವುದೇ ರಾಷ್ಟ್ರವನ್ನ ಹೋರಾಟವಿಲ್ಲದೆ ಗೆಲ್ಲಲು ಬಿಡುವುದಿಲ್ಲ ಎಂದು ಅವರು ಒತ್ತಿ ಹೇಳಿದರು.
ಕ್ರೀಡಾ ಮಸೂದೆಯ ಅಡಿಯಲ್ಲಿ ಸಕಾಲಿಕ ವೀಸಾಗಳನ್ನ ನೀಡುವುದು ಮೂಲಭೂತ ನಿಯಮವಾಗಿದೆ ಎಂದು ಪ್ರತಿಪಾದಿಸಿದರು. ವಿಶ್ವ ದರ್ಜೆಯ, ಎಲ್ಲಾ ಹವಾಮಾನ ಸೌಲಭ್ಯಗಳೊಂದಿಗೆ ಭಾರತವನ್ನ ಜಾಗತಿಕ ಕ್ರೀಡಾ ಕೇಂದ್ರವಾಗಿ ಸ್ಥಾಪಿಸುವುದು ಸರ್ಕಾರ ಗುರಿಯನ್ನ ಹೊಂದಿದೆ ಎಂದು ಅವರು ಹೇಳಿದರು, ಇತರ ರಾಷ್ಟ್ರಗಳು ದೇಶದಲ್ಲಿ ಪಂದ್ಯಾವಳಿಗಳನ್ನ ಆಯೋಜಿಸಲು ಪ್ರೋತ್ಸಾಹಿಸುತ್ತಾರೆ ಎಂದರು.
BIG NEWS : ಬೆಂಗಳೂರು ಕಾಲ್ತುಳಿತ ಕೇಸ್ ನಲ್ಲಿ ಮೃತಪಟ್ಟವರ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ : CM ಸಿದ್ದರಾಮಯ್ಯ
ಶೇ.40ರಷ್ಟು ಮುಖ್ಯಮಂತ್ರಿಗಳು ‘ಕ್ರಿಮಿನಲ್ ಪ್ರಕರಣ’ಗಳನ್ನ ಎದುರಿಸುತ್ತಿದ್ದಾರೆ ; ADR