ಬೆಂಗಳೂರು: ಜನರಿಗೆ ನೀಡುವ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತಾಡುವ ಮೋದಿಯವರು, ಜನರ ಹಣವನ್ನು ಕಿತ್ತು ತಿಂದಿರುವ ಕೋವಿಡ್ ಹಗರಣದ ಬಗ್ಗೆ ಮಾತಾಡುವುದಿಲ್ಲವೇಕೆ? ಎಂಬುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು ಕೋವಿಡ್ ವಿನಾಶದಿಂದ ಜನರು ಬಳಲುತ್ತಿರುವಾಗಲೂ ಬಿಜೆಪಿ ಸರ್ಕಾರ ತನ್ನ ಭ್ರಷ್ಟಾಚಾರದ ಬುದ್ದಿ ಬಿಡಲಿಲ್ಲ ಎಂದಿದ್ದಾರೆ.
ಬಿಜೆಪಿಯ ಮಾಜಿ ಸಿಎಂ ಯಡಿಯೂರಪ್ಪನವರು ಹಾಗೂ ಮಾಜಿ ಆರೋಗ್ಯ ಸಚಿವ ಶ್ರೀರಾಮುಲು ಅವರು ನಾಡಿನ ದುರ್ದಿನಗಳ ಕಾಲದಲ್ಲಿ ಸಹಾಯದ ಅಗತ್ಯವಿರುವವರಿಗೆ ಸಹಾಯ ಮಾಡುವ ಬದಲು ವೈಯಕ್ತಿಕ ಲಾಭಕ್ಕೆ ಆದ್ಯತೆ ನೀಡಿದರು.
ಅಧಿಕಾರಿಗಳ ಮೇಲೆ ಪ್ರಭಾವ ಬೀರಲು ಮತ್ತು ವೈಯಕ್ತಿಕ ಲಾಭಕ್ಕಾಗಿ ಕಂಪನಿಗಳಿಗೆ ಲಾಭದಾಯಕವಾಗಿ ಸಹಾಯ ಮಾಡುವ ಮೂಲಕ ತಮ್ಮ ಅಧಿಕಾರ ಮತ್ತು ಸ್ಥಾನಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ತನಿಖಾ ಆಯೋಗವು ಸಾಬೀತುಪಡಿಸಿದೆ.
ಆಯೋಗದ ವರದಿ ಏನು ಹೇಳುತ್ತದೆ ಎಂಬುದು ಇಲ್ಲಿದೆ:
“ತನಿಖೆಯ ಸಮಯದಲ್ಲಿ ಹೊರಬಿದ್ದ ಸತ್ಯಾಂಶಗಳು ಭ್ರಷ್ಟಾಚಾರ ತಡೆ ಕಾಯಿದೆ 1988 ರ ಸೆ.7 ಮತ್ತು ಸೆ.11 ರ ಅಡಿಯಲ್ಲಿ ಅಪರಾಧದ ಅಂಶಗಳನ್ನು ಸ್ಪಷ್ಟವಾಗಿ ಆಕರ್ಷಿಸುತ್ತವೆ.
ಆರೋಗ್ಯ ಸಚಿವರು ಸ್ವಂತಕ್ಕಾಗಿ ಮತ್ತು/ಅಥವಾ ಪೂರೈಕೆದಾರರೊಂದಿಗೆ ಭ್ರಷ್ಟ ಮತ್ತು ಕಾನೂನುಬಾಹಿರ ವಿಧಾನಗಳಿಂದ ಶಾಮೀಲಾಗಿ ಅಧಿಕಾರ ದುರುಪಯೋಗಪಡಿಸಿಕೊಳ್ಳುವ ಮೂಲಕ ತಮಗೆ ಮತ್ತು / ಅಥವಾ ಪೂರೈಕೆದಾರರಿಗೆ ಅನಗತ್ಯ ಲಾಭವನ್ನು ಪಡೆದುಕೊಂಡಿದ್ದಾರೆ. ಸಾರ್ವಜನಿಕ ಸೇವಕರಾಗಿ ಮತ್ತು/ಅಥವಾ ವ್ಯವಹಾರದಲ್ಲಿ ಭಾಗಿಯಾಗಿರುವ ಇತರ ಸಾರ್ವಜನಿಕ ಸೇವಕರ ಮೇಲೆ ಅವರ ವೈಯಕ್ತಿಕ ಪ್ರಭಾವವನ್ನು ಬಳಸುವ ಮೂಲಕ ಅವರ ಅಧಿಕಾರದ ಸ್ಥಾನವನ್ನು ಬಳಸಿಕೊಂಡಿದ್ದಾರೆ.
ಪ್ರಧಾನ ಮಂತ್ರಿ ಮೋದಿಯವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಮತ್ತು ತಮ್ಮದೇ ಆದ ಅಭಿಪ್ರಾಯವನ್ನು ಹೊರಹಾಕುತ್ತಾರೆ, ಆದರೆ ತಮ್ಮದೇ ಪಕ್ಷದ ಭ್ರಷ್ಟಾಚಾರದ ಬಗ್ಗೆ ಮಾತ್ರ ಮೌನವಹಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
. @BJP4Karnataka government didn’t hesitate to profit while people were suffering from the devastation of COVID.
Former BJP CM @BSYBJP and his Health Minister Sriramulu chose to prioritize personal gain over helping those who desperately needed help.
The investigation… pic.twitter.com/Eu4u2sS6Pf
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 9, 2024