Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಿದ್ದರಾಮಯ್ಯರನ್ನು ತೆಗೆದರೆ ದೊಡ್ಡ ಕ್ರಾಂತಿ ಆಗುತ್ತೆ, ಸಾವಿರಾರು ಜನ ಜೈಲಿಗೆ ಹೋಗಲು ಸಿದ್ದ : ವಾಟಾಳ್ ನಾಗರಾಜ್

23/11/2025 5:32 PM

ಬಿಳಿಮಲೆ ‘ಸಲಿಂಗಕಾಮಿ’ಗಳು ಹೇಳಿಕೆ: ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಹೇಳಿದ್ದೇನು?

23/11/2025 5:28 PM

ಚರ್ಚೆಯಾಗಬೇಕಿರುವುದು ಸಲಿಂಗ ಕಾಮದ ಬಗ್ಗೆ ಅಲ್ಲ, ಯಕ್ಷಗಾನದಲ್ಲಿ ಮಹಿಳಾ ಕಲಾವಿದರು ಏಕಿಲ್ಲ ಬಗ್ಗೆ: ದಿನೇಶ್ ಅಮೀನ ಮಟ್ಟು

23/11/2025 5:10 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಚರ್ಚೆಯಾಗಬೇಕಿರುವುದು ಸಲಿಂಗ ಕಾಮದ ಬಗ್ಗೆ ಅಲ್ಲ, ಯಕ್ಷಗಾನದಲ್ಲಿ ಮಹಿಳಾ ಕಲಾವಿದರು ಏಕಿಲ್ಲ ಬಗ್ಗೆ: ದಿನೇಶ್ ಅಮೀನ ಮಟ್ಟು
KARNATAKA

ಚರ್ಚೆಯಾಗಬೇಕಿರುವುದು ಸಲಿಂಗ ಕಾಮದ ಬಗ್ಗೆ ಅಲ್ಲ, ಯಕ್ಷಗಾನದಲ್ಲಿ ಮಹಿಳಾ ಕಲಾವಿದರು ಏಕಿಲ್ಲ ಬಗ್ಗೆ: ದಿನೇಶ್ ಅಮೀನ ಮಟ್ಟು

By kannadanewsnow0923/11/2025 5:10 PM

ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದಂತ ಪುರುಷೋತ್ತಮ ಬಿಳಿಮಲೆ ಅವರು ಯಕ್ಷಗಾನ ಕಲಾವಿಧರಲ್ಲಿ ಬಹುತೇಕರು ಸಲಿಂಗಿಗಳು ಎಂಬುದಾಗಿ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಹೇಳಿಕೆಯ ಹಿನ್ನಲೆಯಲ್ಲಿ ಚರ್ಚೆಯಾಗಬೇಕಿರುವುದು ಸಲಿಂಗ ಕಾಮದ ಬಗ್ಗೆ ಅಲ್ಲ. ಯಕ್ಷಗಾನದಲ್ಲಿ ಯಾಕೆ ಮಹಿಳಾ ಕಲಾವಿದರು ಇಲ್ಲ ಎನ್ನುವ ಬಗ್ಗೆ ಎಂಬುದಾಗಿ  ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.

ಈ ಕುರಿತಂತೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವಂತ ದಿನೇಶ್ ಅಮೀನ್ ಮಟ್ಟು ಅವರು, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಪುರುಷೋತ್ತಮ ಬಿಳಿಮಲೆ ಅವರ ವಿರುದ್ದ ಯಕ್ಷಗಾನ ಕಲಾವಿದರೊಬ್ಬರು ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆ ಪೊಲೀಸ್ ಠಾಣೆಯ ಅಧಿಕಾರಿಗಳ ಗೊಂದಲವನ್ನು ನಿವಾರಿಸಿ ಅವರ ಕೆಲಸ ಸುಲಭಗೊಳಿಸುವ ಉದ್ದೇಶದಿಂದ ಕೆಲವು ವಿಷಯಗಳನ್ನು ಅವರ ಗಮನಕ್ಕೆ ತರುತ್ತಿದ್ದೇನೆ ಎಂದಿದ್ದಾರೆ.

ಒಬ್ಬ ವ್ಯಕ್ತಿಯನ್ನು ಕಳ್ಳ, ಸುಳ್ಳ, ವಂಚಕ, ಭ್ರಷ್ಟ, ರೇಪಿಸ್ಟ್ ಎಂದೆಲ್ಲ ಕರೆಯುವುದು ಅಪರಾಧ. ಯಾಕೆಂದರೆ ಈ ಕೃತ್ಯಗಳೆಲ್ಲ ಭಾರತೀಯ ದಂಡ ಸಂಹಿತೆಯಡಿ ಅಪರಾಧಗಳು. ಆದರೆ ಭಾರತದಲ್ಲಿ ಸಲಿಂಗ ಕಾಮ ಅಪರಾಧ ಅಲ್ಲ. 2018ರ ಸೆಪ್ಟೆಂಬರ್ ನಲ್ಲಿ ಸುಪ್ರೀಂ ಕೋ‍ರ್ಟ್ ನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ನವತೇಜ್ ಸಿಂಗ್ ಜೋಹಾರ್ vs ಯೂನಿಯನ್ ಆಫ್ ಇಂಡಿಯಾ ಪ್ರಕರರಣದಲ್ಲಿ ಸಲಿಂಗ ಕಾಮ ಅಪರಾಧ ಎಲ್ಲ ಎನ್ನುವ ಐತಿಹಾಸಿಕ ತೀರ್ಪು ನೀಡಿದೆ.

ಅದೇ ತೀರ್ಪಿನಲ್ಲಿ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 377ರಲ್ಲಿ ಸಲಿಂಗ ಲೈಂಗಿಕ ಕ್ರಿಯೆಗಳನ್ನು ಅಪರಾಧವೆಂದು ಪರಿಗಣಿಸುತ್ತಿದ್ದ ಭಾಗ ಅಸಾಂವಿಧಾನಿಕ ಎಂದು ಘೋಷಿಸಿದೆ. ಪ್ರಸ್ತುತ ಭಾರತದಲ್ಲಿ ಪರಸ್ಪರ ಒಪ್ಪಿತ ) ಸಲಿಂಗ ಲೈಂಗಿಕ ಸಂಬಂಧಗಳು ಸಂಪೂರ್ಣ ಕಾನೂನುಬದ್ಧ, ಮತ್ತು ಅಪರಾಧ ಅಲ್ಲ.

ಭಾರತದಲ್ಲಿ ಸಲಿಂಗ ಕಾಮ ಅಪರಾಧ ಅಲ್ಲದ ಕಾರಣ ಇಲ್ಲಿನ ಸಲಿಂಗ ಜೋಡಿಗಳಿಗೆ ಮದುವೆಯಾಗುವ ಹಕ್ಕು ಕೂಡಾ ಇದೆ ಎಂದು 2023ರಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಸದ್ಯಕ್ಕೆ ಭಾರತದಲ್ಲಿ ಸಲಿಂಗ ಮದುವೆಗಳಿಗೆ ಕಾನೂನಿನ ಮಾನ್ಯತೆ ಇಲ್ಲ. ಈ ಬಗ್ಗೆ ಕಾನೂನನ್ನು ರೂಪಿಸುವ ಜವಾಬ್ದಾರಿಯನ್ನು ಸುಪ್ರೀಂ ಕೋರ್ಟ್ ಸಂಸತ್ ಗೆ ನೀಡಿದೆ.

ಹೀಗಿರುವಾಗ ಅಪರಾಧ ಅಲ್ಲದ ಕೃತ್ಯವಾದ ಸಲಿಂಗ ಕಾಮ ಎಲ್ಲೋ ನಡೆಯುತ್ತಿದೆ ಎಂದು ಹೇಳುವುದು ಕಾನೂನಿನ ಪ್ರಕಾರ ಹೇಗೆ ಅಪರಾಧವಾಗುತ್ತದೆ? ಒಂದೊಮ್ಮೆ ಯಾವನಾದರೂ ವ್ಯಕ್ತಿ ಬಲತ್ಕಾರದಿಂದ ಇಲ್ಲವೇ ಪ್ರಾಣಿಗಳೊಡನೆ ಲೈಂಗಿಕ ಕ್ರಿಯೆ ನಡೆಸಿದರೆ ಮಾತ್ರ ಐಪಿಸಿ 377ರ ಅಡಿಯಲ್ಲಿ ಅಪರಾಧ ಆಗುತ್ತದೆ.

ಪುರುಷೋತ್ತಮ ಬಿಳಿಮಲೆಯವರು ಯಾವುದಾದರೂ ಒಬ್ಬ ಯಕ್ಷಗಾನ ಕಲಾವಿದನ ಹೆಸರೆತ್ತಿ ಆ ವ್ಯಕ್ತಿ ಬಲಾತ್ಕಾರವಾಗಿ ಸಲಿಂಗ ಕಾಮ ನಡೆಸಿದ್ದಾನೆ ಇಲ್ಲವೇ ಯಾವುದಾದರೂ ಪ್ರಾಣಿಗಳೊಡನೆ ಸಲಿಂಗ ಕಾಮಕ್ರೀಡೆಯಲ್ಲಿ ತೊಡಗಿದ್ದಾನೆ ಎಂದು ಆರೋಪಿಸಿದ್ದರೆ ಅದು ಅಪರಾಧವಾಗುತ್ತಿತ್ತು. ಯಕ್ಷಗಾನ ಕಲಾವಿದರಲ್ಲಿ ಸಲಿಂಗ ಕಾಮಿಗಳು ಇದ್ದಾರೆ ಎಂದು ಹೇಳುವುದು ಕಾನೂನಿನ ಪ್ರಕಾರ ಹೇಗೆ ಅಪರಾಧವಾಗುತ್ತದೆ? ಯಾರಾದರೂ ಕಾನೂನು ತಜ್ಞರು ಹೇಳಬೇಕು.

ವಾಸ್ತವ ಸಂಗತಿ ಏನೆಂದರೆ ಕಲೆ, ಸಾಹಿತ್ಯ, ರಾಜಕೀಯ, ಮಾಧ್ಯಮ, ಕ್ರೀಡೆ ವೈದ್ಯಕೀಯ, ಎಂಜನಿಯರಿಂಗ್ ಕ್ಷೇತ್ರಗಳು ಸೇರಿದಂತೆ ಯಕ್ಷಗಾನ ರಂಗದಲ್ಲಿಯೂ ಸಲಿಂಗ ಕಾಮಿಗಳಿದ್ದಾರೆ. ಇಷ್ಟು ಮಾತ್ರವಲ್ಲ ಯಕ್ಷಗಾನ ಕ‍್ಷೇತ್ರದಲ್ಲಿ ಉಳಿದೆಲ್ಲ ಕ್ಷೇತ್ರಗಳಂತಯೇ ಜಾತೀಯತೆ, ಲಿಂಗತಾರತಮ್ಯ ಎಲ್ಲವೂ ಇದೆ. ಯಾರು ಒಪ್ಪಿದರೂ ಒಪ್ಪದೆ ಇದ್ದರೂ ಸತ್ಯವನ್ನು ಅಳಿಸಿಹಾಕಲಾಗುವುದಿಲ್ಲ ಎಂಬುದಾಗಿ ಹೇಳಿದ್ದಾರೆ.

ಕೇಂದ್ರ ಸರ್ಕಾರದಿಂದ ಗುತ್ತಿಗೆ ಆಧಾರದ ನೌಕರರಿಗೆ ಭರ್ಜರಿ ಗುಡ್ ನ್ಯೂಸ್: ಇನ್ಮುಂದೆ ಒಂದೇ ವರ್ಷಕ್ಕೆ ಸಿಗಲಿದೆ ಗ್ರ್ಯಾಚುಟಿ | New Labour Rules

ಈ ಹಂತ ಅನುಸರಿಸಿ ಬ್ಯಾಂಕ್ ಖಾತೆಯೊಂದಿಗೆ ಪ್ಯಾನ್ ನಂಬರ್ ಕುಳಿತಲ್ಲೇ ಲಿಂಕ್ ಮಾಡಿ | Link PAN With Bank Account

ALERT : ಪೋಷಕರೇ ಎಚ್ಚರ : ಅತಿಯಾದ `ಮೊಬೈಲ್’ ಬಳಕೆಯಿಂದ ದುರ್ಬಲವಾಗುತ್ತಿದೆ ‘ಮಕ್ಕಳ ಹೃದಯ’.!

Share. Facebook Twitter LinkedIn WhatsApp Email

Related Posts

ಸಿದ್ದರಾಮಯ್ಯರನ್ನು ತೆಗೆದರೆ ದೊಡ್ಡ ಕ್ರಾಂತಿ ಆಗುತ್ತೆ, ಸಾವಿರಾರು ಜನ ಜೈಲಿಗೆ ಹೋಗಲು ಸಿದ್ದ : ವಾಟಾಳ್ ನಾಗರಾಜ್

23/11/2025 5:32 PM1 Min Read

ಬಿಳಿಮಲೆ ‘ಸಲಿಂಗಕಾಮಿ’ಗಳು ಹೇಳಿಕೆ: ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಹೇಳಿದ್ದೇನು?

23/11/2025 5:28 PM3 Mins Read

BREAKING : ಬೆಂಗಳೂರಿನ ನಿರ್ಜನ ಪ್ರದೇಶದಲ್ಲಿ ಅರೆಸುಟ್ಟ ಸ್ಥಿತಿಯಲ್ಲಿ ಅಪರಿಚಿತನ ಶವ ಪತ್ತೆ : ಕೊಲೆ ಮಾಡಿರೋ ಶಂಕೆ!

23/11/2025 4:58 PM1 Min Read
Recent News

ಸಿದ್ದರಾಮಯ್ಯರನ್ನು ತೆಗೆದರೆ ದೊಡ್ಡ ಕ್ರಾಂತಿ ಆಗುತ್ತೆ, ಸಾವಿರಾರು ಜನ ಜೈಲಿಗೆ ಹೋಗಲು ಸಿದ್ದ : ವಾಟಾಳ್ ನಾಗರಾಜ್

23/11/2025 5:32 PM

ಬಿಳಿಮಲೆ ‘ಸಲಿಂಗಕಾಮಿ’ಗಳು ಹೇಳಿಕೆ: ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಹೇಳಿದ್ದೇನು?

23/11/2025 5:28 PM

ಚರ್ಚೆಯಾಗಬೇಕಿರುವುದು ಸಲಿಂಗ ಕಾಮದ ಬಗ್ಗೆ ಅಲ್ಲ, ಯಕ್ಷಗಾನದಲ್ಲಿ ಮಹಿಳಾ ಕಲಾವಿದರು ಏಕಿಲ್ಲ ಬಗ್ಗೆ: ದಿನೇಶ್ ಅಮೀನ ಮಟ್ಟು

23/11/2025 5:10 PM

ಕೇಂದ್ರ ಸರ್ಕಾರದಿಂದ ಗುತ್ತಿಗೆ ಆಧಾರದ ನೌಕರರಿಗೆ ಭರ್ಜರಿ ಗುಡ್ ನ್ಯೂಸ್: ಇನ್ಮುಂದೆ ಒಂದೇ ವರ್ಷಕ್ಕೆ ಸಿಗಲಿದೆ ಗ್ರ್ಯಾಚುಟಿ | New Labour Rules

23/11/2025 5:00 PM
State News
KARNATAKA

ಸಿದ್ದರಾಮಯ್ಯರನ್ನು ತೆಗೆದರೆ ದೊಡ್ಡ ಕ್ರಾಂತಿ ಆಗುತ್ತೆ, ಸಾವಿರಾರು ಜನ ಜೈಲಿಗೆ ಹೋಗಲು ಸಿದ್ದ : ವಾಟಾಳ್ ನಾಗರಾಜ್

By kannadanewsnow0523/11/2025 5:32 PM KARNATAKA 1 Min Read

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಭಾರಿ ಚರ್ಚೆ ನಡೆಯುತ್ತಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್…

ಬಿಳಿಮಲೆ ‘ಸಲಿಂಗಕಾಮಿ’ಗಳು ಹೇಳಿಕೆ: ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಹೇಳಿದ್ದೇನು?

23/11/2025 5:28 PM

ಚರ್ಚೆಯಾಗಬೇಕಿರುವುದು ಸಲಿಂಗ ಕಾಮದ ಬಗ್ಗೆ ಅಲ್ಲ, ಯಕ್ಷಗಾನದಲ್ಲಿ ಮಹಿಳಾ ಕಲಾವಿದರು ಏಕಿಲ್ಲ ಬಗ್ಗೆ: ದಿನೇಶ್ ಅಮೀನ ಮಟ್ಟು

23/11/2025 5:10 PM

BREAKING : ಬೆಂಗಳೂರಿನ ನಿರ್ಜನ ಪ್ರದೇಶದಲ್ಲಿ ಅರೆಸುಟ್ಟ ಸ್ಥಿತಿಯಲ್ಲಿ ಅಪರಿಚಿತನ ಶವ ಪತ್ತೆ : ಕೊಲೆ ಮಾಡಿರೋ ಶಂಕೆ!

23/11/2025 4:58 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.