ಬೆಂಗಳೂರು : ಇಂದು ಸ್ಯಾಂಡಲ್ ವುಡ್ ಬಾದ್ ಷಾ, ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಸಾವನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ಕಿಚ್ಚ ಸುದೀಪ್ ಅವರ ಕುಟುಂಬಕ್ಕೆ ಬಹಳ ಆತ್ಮೀಯರಾಗಿರುವಂತಹ ಸಂಸದ ಬಸವರಾಜ್ ಬೊಮ್ಮಾಯಿ ಅವರು ಇಂದು ಅವರ ಮನೆಗೆ ಭೇಟಿ ನೀಡಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಬಳಿಕ ಬಸವರಾಜ ಬೊಮ್ಮಾಯಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ,ಸರೋಜಕ್ಕ ನನಗೆ ಅತ್ಯಂತ ಪ್ರೀತಿ, ವಿಶ್ವಾಸ ಇದ್ದಂತಹ ವ್ಯಕ್ತಿ. ಮನೆಗೆ ಬಂದಾಗೆಲ್ಲ ಒಮ್ಮೆಯೂ ಹಾಗೆ ಕಳುಹಿಸದೆ ನಮಗೆ ಊಟ ಹಾಕಿದ್ದರು. ಅವರು ಅನ್ನಪೂರ್ಣೇಶ್ವರಿ. ಕುಟುಂಬಕ್ಕೆ ಅವರು ಆಧಾರಸ್ಥಂಭ ಆಗಿದ್ದರು. ಸುದೀಪ್ ಅವರನ್ನು ತುಂಬ ಪ್ರೀತಿಯಿಂದ ಬೆಳೆಸಿದ್ದರು ಎಂದು ಬೊಮ್ಮಾಯಿ ಹೇಳಿದ್ದಾರೆ.
ನಟ ಸುದೀಪ್ ಅವರನ್ನು ಸರೋಜಕ್ಕ ಅವರು ಬಹಳ ಪ್ರೀತಿಯಿಂದ ಬೆಳೆಸಿದ್ದಾರೆ. ಪ್ರತಿಯೊಂದು ಹೆಜ್ಜೆಯಲ್ಲೂ ಸುದೀಪ್ ಅವರಿಗೆ ಅವರು ಬೆಂಬಲ ನೀಡಿದ್ದಾರೆ. ಶಾಲೆ ಕಾಲೇಜಿಗೆ ಹೋಗಬೇಕಾದರೆ ಕ್ರಿಕೆಟಡ ಬೇಕಾದರೆ ಸಿನಿಮಾ ರಂಗಕ್ಕೆ ಕಾಲಿಟ್ಟಾಗ, ಆರಂಭದ ದಿನಗಳಲ್ಲಿ ಹೋರಾಟ ಮಾಡುವ ಸಂದರ್ಭದಲ್ಲಿ, ಎಲ್ಲದರಲ್ಲೂ ಸುದೀಪ್ ಮೇಲೆ ಅವರ ತಾಯಿಯ ಆಶೀರ್ವಾದ ಹಾಗೂ ಸಹಕಾರ ಇತ್ತು.
ಇಂದು ನಾವು ಅವರನ್ನು ಕಳೆದುಕೊಂಡಿದ್ದೇವೆ. ಈ ಒಂದು ಸಂದರ್ಭದಲ್ಲಿ ಅವರ ಕುಟುಂಬಸ್ಥರು ತುಂಬಾ ದುಃಖ ತಪ್ತರಾಗಿದ್ದಾರೆ. ನಮಗೂ ಕೂಡ ತುಂಬಾ ದುಃಖವಾಗಿದೆ ನೋವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಸುದೀಪ್ ಸೇರಿದಂತೆ ಅವರ ಕುಟುಂಬಸ್ಥರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.