Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸೋದರಸಂಬಂಧಿಯಿಂದ ಅತ್ಯಾಚಾರ : 28 ವಾರಗಳ ಗರ್ಭಪಾತಕ್ಕಾಗಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಬಾಲಕಿ

20/08/2025 11:59 AM

ಗಮನಿಸಿ : ವಯಸ್ಸಿಗೆ ಅನುಗುಣವಾಗಿ ನಿಮ್ಮ ದೇಹದ ತೂಕ ಎಷ್ಟಿರಬೇಕು..? ಇಲ್ಲಿದೆ ಮಾಹಿತಿ

20/08/2025 11:58 AM

BREAKING : ಉಪರಾಷ್ಟ್ರಪತಿ ಚುನಾವಣೆ : ಪ್ರಧಾನಿ ಮೋದಿ ಸಮ್ಮುಖದಲ್ಲಿ `NDA’ ಅಭ್ಯರ್ಥಿಯಾಗಿ `ಸಿ.ಪಿ.ರಾಧಾಕೃಷ್ಣನ್’ ನಾಮಪತ್ರ ಸಲ್ಲಿಕೆ | WATCH VIDEO

20/08/2025 11:46 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೃಷ್ಣಾ, ಕಾವೇರಿ ಸೇರಿದಂತೆ 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ : SPCB ಸ್ಪೋಟಕ ವರದಿ ಬಹಿರಂಗ
KARNATAKA

ಕೃಷ್ಣಾ, ಕಾವೇರಿ ಸೇರಿದಂತೆ 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ : SPCB ಸ್ಪೋಟಕ ವರದಿ ಬಹಿರಂಗ

By kannadanewsnow0510/02/2024 6:16 AM

ಬೆಂಗಳೂರು : ಕಳೆದ ವರ್ಷ ರಾಜ್ಯದಲ್ಲಿ ಮಳೆ ಬಾರದೆ ಇರುವುದರಿಂದ ರೈತರು ಸೇರಿದಂತೆ ರಾಜ್ಯದ ಜನತೆ ತೀವ್ರ ಬರ ಸಂಕಷ್ಟ ಎದುರಿಸಿತ್ತು. ಅಲ್ಲದೆ ಈ ಬಾರಿಯ ಬೇಸಿಗೆಯಲ್ಲಿ ನೀರಿನ ಹಾಹಾಕಾರ ಹೆಚ್ಚುವ ಸಂಭವವಿದೆ.ಇದರ ಮಧ್ಯ ರಾಜ್ಯದ 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎನ್ನುವ ಸ್ಪೋಟಕ ವರದಿ ಬಹಿರಂಗವಾಗಿದೆ.

ಹೌದು ಕಾವೇರಿ, ಕೃಷ್ಣಾಸೇರಿದಂತೆ ರಾಜ್ಯದ ನದಿಗಳ ನೀರನ್ನು ಕುಡಿಯುವುದಕ್ಕೂ ಮುನ್ನ ಯೋಚಿಸುವ ಸ್ಥಿತಿ ಎದುರಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 12 ನದಿಗಳ ವಿವಿಧ ಭಾಗಗಳ ನೀರು ಸಂಗ್ರಹಿಸಿ ನಡೆಸಿದ ಪರೀಕ್ಷೆಯ ವರದಿ ಪರಿಗಣಿಸಿದರೆ ಈ ಸ್ಥಿತಿಯಿರುವುದಂತೂ ದಿಟ.

ಏಕೆಂದರೆ, ವರದಿಯಲ್ಲಿ ಬೆಚ್ಚಿ ಬೀಳಿಸುವಂತಹ ಅಂಶ ಪತ್ತೆಯಾಗಿದ್ದು, ಆ ನದಿಗಳ ನೀರನ್ನು ನೇರವಾಗಿ ಕುಡಿದರೆ ಗಂಟಲು, ಕಣ್ಣು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಅಪಾಯ ಎದುರಾಗುವುದು ಖಚಿತವಂತೆ ಹಾಗಂತ, ಇಡೀ ನದಿಗಳ ನೀರೇ ಅಪಾಯಕಾರಿ ಯಂತೇನಲ್ಲ, ಮಂಡಳಿಯು ಈ 12 ನದಿಗಳ ನಿರ್ದಿಷ್ಟ ತಾಣಗಳಲ್ಲಿನ ನೀರು ಸಂಗ್ರಹಿಸಿ ಪರೀಕ್ಷೆ ನಡೆಸಿದ್ದು, ಆ ನೀರು ನಿಜಕ್ಕೂ ಆತಂಕ ಹುಟ್ಟಿಸುವಷ್ಟು ಕಲುಷಿತ ವಾಗಿರುವುದು ಗೋಚರಿಸಿದೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯುರಾಜ್ಯದ ನದಿಗಳ ನೀರಿನ ಗುಣಮಟ್ಟದ ಕುರಿತಂತೆ ಕಾಲಕಾಲಕ್ಕೆ ಪರೀಕ್ಷೆ ನಡೆಸುತ್ತದೆ. ಅದಕ್ಕಾಗಿಯೇ ಸ್ಥಾಪಿಸಲಾಗಿರುವ ಮೇಲ್ವಿಚಾರಣಾ ಘಟಕ (ಮೊನಿಟ ರಿಂಗ್ ಸ್ಟೇಷನ್ಗಳಲ್ಲಿ ನೀರು ಸಂಗ್ರಹಿಸಿ ಅವುಗಳನ್ನು ಪರೀಕ್ಷೆಗೊಳಪಡಿಸಲಾಗುತ್ತದೆ. ಅದರಂತೆ ಕಳೆದ ನವೆಂಬರ್‌ನಲ್ಲಿ ನಡೆಸಲಾದ ಪರೀಕ್ಷೆಯ ವರದಿಯಂತೆ ರಾಜ್ಯದ 12 ನದಿಗಳಲ್ಲಿನ ನೀರು ಕುಡಿಯುವುದಕ್ಕೆ ಯೋಗ್ಯವಲ್ಲ ಎಂಬ ವರದಿ ಬಂದಿದೆ.

ಅದರಲ್ಲೂ ಲಕ್ಷ್ಮಣತೀರ್ಥ, ಆರ್ಕಾವತಿ, ಕಬಿನಿ, ತಿಂಷಾ ನದಿಗಳ ನೀರು ಶುದ್ದೀಕರಿಸಿದ ನಂತರವೂ ಕುಡಿಯಲು ಹಾಗೂ ಬಳಕೆಗೆ ಯೋಗ್ಯವಲ್ಲ ಎಂದು ತಿಳಿಸಲಾಗಿದೆ. ಉಳಿದಂತೆ ನೇತ್ರಾವತಿ ನದಿ ನೀರನ್ನು ಶುದ್ದೀಕರಿಸಿ ಬಳಸಬಹುದು ಎಂದು ವರದಿಯಲ್ಲಿ ಹೇಳಲಾಗಿದೆ. ಅದರಲ್ಲಿ ಟೋಟಲ್ ಕೋಲಿಫಾರ್ಮ್ ಪ್ರಮಾಣ 100 ಎಂಎಲ್ ನೀರಿನಲ್ಲಿ 10 ಯುನಿಟ್‌ ಗಿಂತ ಕಡಿಮೆಯಿರಬೇಕು.

ಆದರೆ, ಮಾಲಿನ್ಯ ನಿಯಂತ್ರಣ ಮಂಡಳಿಯ ಪರೀಕ್ಷಾ ವರದಿಯಲ್ಲಿರುವಂತೆ ಗಾಣಗಾಪುರ ಗ್ರಾಮದ ಬಳಿಯಲ್ಲಿ ಸಂಗ್ರಹಿಸಲಾದ ಭೀಮಾ ನದಿಯ ನೀರಿನಲ್ಲಿ 2.80 ಲಕ್ಷಯುನಿಟ್ ಇದೆ. 38 ಪರೀಕ್ಷಾ ಘಟಕಗಳಲ್ಲಿಯೂ ಟಿಸಿ ಪ್ರಮಾಣ ಭಾರೀ ಹೆಚ್ಚಳವಿದ್ದು, ಆನೀರನ್ನು ಸೇವಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಅದರಲ್ಲೂ ದೃಷ್ಟಿ ದೋಷ, ಗಂಟಲು, ಉಸಿರಾಟದ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ

Share. Facebook Twitter LinkedIn WhatsApp Email

Related Posts

ಗಮನಿಸಿ : ವಯಸ್ಸಿಗೆ ಅನುಗುಣವಾಗಿ ನಿಮ್ಮ ದೇಹದ ತೂಕ ಎಷ್ಟಿರಬೇಕು..? ಇಲ್ಲಿದೆ ಮಾಹಿತಿ

20/08/2025 11:58 AM2 Mins Read

ರಾಜ್ಯದ ಶಾಲೆಗಳಲ್ಲಿ ಉಳಿಕೆ ಪಠ್ಯಪುಸ್ತಕಗಳ ದಾಸ್ತಾನು ಮಾಹಿತಿ `SATS’ನಲ್ಲಿ ಇಂಧೀಕರಿಸುವುದು ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ

20/08/2025 11:39 AM2 Mins Read

BREAKING : ಸ್ಯಾಂಡಲ್ ವುಡ್ ನಿರ್ದೇಶಕ ಪ್ರೇಮ್ ಗೆ `ಎಮ್ಮೆ’ ಕೊಡಿಸುವುದಾಗಿ 4.5 ಲಕ್ಷ ರೂ. ವಂಚನೆ : ಆರೋಪಿ ವಿರುದ್ಧ ದೂರು ದಾಖಲು.!

20/08/2025 11:28 AM1 Min Read
Recent News

ಸೋದರಸಂಬಂಧಿಯಿಂದ ಅತ್ಯಾಚಾರ : 28 ವಾರಗಳ ಗರ್ಭಪಾತಕ್ಕಾಗಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಬಾಲಕಿ

20/08/2025 11:59 AM

ಗಮನಿಸಿ : ವಯಸ್ಸಿಗೆ ಅನುಗುಣವಾಗಿ ನಿಮ್ಮ ದೇಹದ ತೂಕ ಎಷ್ಟಿರಬೇಕು..? ಇಲ್ಲಿದೆ ಮಾಹಿತಿ

20/08/2025 11:58 AM

BREAKING : ಉಪರಾಷ್ಟ್ರಪತಿ ಚುನಾವಣೆ : ಪ್ರಧಾನಿ ಮೋದಿ ಸಮ್ಮುಖದಲ್ಲಿ `NDA’ ಅಭ್ಯರ್ಥಿಯಾಗಿ `ಸಿ.ಪಿ.ರಾಧಾಕೃಷ್ಣನ್’ ನಾಮಪತ್ರ ಸಲ್ಲಿಕೆ | WATCH VIDEO

20/08/2025 11:46 AM

ರಾಜ್ಯದ ಶಾಲೆಗಳಲ್ಲಿ ಉಳಿಕೆ ಪಠ್ಯಪುಸ್ತಕಗಳ ದಾಸ್ತಾನು ಮಾಹಿತಿ `SATS’ನಲ್ಲಿ ಇಂಧೀಕರಿಸುವುದು ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ

20/08/2025 11:39 AM
State News
KARNATAKA

ಗಮನಿಸಿ : ವಯಸ್ಸಿಗೆ ಅನುಗುಣವಾಗಿ ನಿಮ್ಮ ದೇಹದ ತೂಕ ಎಷ್ಟಿರಬೇಕು..? ಇಲ್ಲಿದೆ ಮಾಹಿತಿ

By kannadanewsnow5720/08/2025 11:58 AM KARNATAKA 2 Mins Read

ಒಬ್ಬ ಆರೋಗ್ಯವಂತ ವ್ಯಕ್ತಿಯ ತೂಕ ಎಷ್ಟಿರಬೇಕು. ಇನ್ನು ಇಷ್ಟು ಎತ್ತರವಿದ್ದ ವ್ಯಕ್ತಿಯ ತೂಕ ಎಷ್ಟಿರಬೇಕು. ವ್ಯಕ್ತಿಯ ಎತ್ತರಕ್ಕೂ ಹಾಗು ತೂಕಕ್ಕೂ…

ರಾಜ್ಯದ ಶಾಲೆಗಳಲ್ಲಿ ಉಳಿಕೆ ಪಠ್ಯಪುಸ್ತಕಗಳ ದಾಸ್ತಾನು ಮಾಹಿತಿ `SATS’ನಲ್ಲಿ ಇಂಧೀಕರಿಸುವುದು ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ

20/08/2025 11:39 AM

BREAKING : ಸ್ಯಾಂಡಲ್ ವುಡ್ ನಿರ್ದೇಶಕ ಪ್ರೇಮ್ ಗೆ `ಎಮ್ಮೆ’ ಕೊಡಿಸುವುದಾಗಿ 4.5 ಲಕ್ಷ ರೂ. ವಂಚನೆ : ಆರೋಪಿ ವಿರುದ್ಧ ದೂರು ದಾಖಲು.!

20/08/2025 11:28 AM

BREAKING : ಬೆಂಗಳೂರಲ್ಲಿ ಕಿಲ್ಲರ್ `BMTC’ಗೆ ಮತ್ತೊಂದು ಬಲಿ : ಪ್ರಯಾಣಿಕ ಸ್ಥಳದಲ್ಲೇ ಸಾವು.!

20/08/2025 11:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.