ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಮಿತಿಯಿಲ್ಲದೇ ಮಳೆ ಸುರಿಯುತ್ತದೆ. ಇದು ಮುಂಬೈ ನಗರ ಪ್ರದೇಶದ ರಸ್ತೆಗಳ ಸಮಸ್ಯೆಗೂ ಕಾರಣವಾಗಿದೆ. ಇದರಿಂದಾಗಿ ವಾಹನ ಚಾಲಕರು ಬೇಸತ್ತು ಹೋಗಿದ್ದಾರೆ. ಈ ಕುರಿತು ಕೆಟ್ಟ ರಸ್ತೆಗಳನ್ನು ಸರಿಪಡಿಸುವಂತೆ ಏಕನಾಥ್ ಶಿಂಧೆ ಅವರಿಗೆ ಬಸ್ ಚಾಲಕನೋರ್ವ ಮನವಿ ಮಾಡಿದ್ದಾನೆ.
ಮುಂಬೈನ ಭಿವಂಡಿ-ಕಲ್ಯಾಣ ರಸ್ತೆಯಲ್ಲಿ ತನ್ನ ಒರಟು ಸವಾರಿಯ ಬಗ್ಗೆ ವೀಡಿಯೊವನ್ನು ಟ್ವೀಟ್ ಮಾಡಿದ್ದು, ಕೆಟ್ಟ ರಸ್ತೆಗಳನ್ನು ಸರಿಪಡಿಸುವಂತೆ ಸಿಡಂ ಏಕನಾಥ್ ಶಿಂಧೆ ಅವರಿಗೆ ಚಾಲಕ ಮನವಿ ಮಾಡಿದ್ದಾನೆ.
ಕ್ಲಿಪ್ನಲ್ಲಿ, ಚಾಲಕ ಬಸ್ ಓಡಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ಪ್ರಯಾಣಿಕರಿಗೆ ಹೆಚ್ಚಿನ ಅನಾನುಕೂಲತೆಯನ್ನು ಉಂಟುಮಾಡುವ ಗುಂಡಿಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಸಿಎಂ ಶಿಂಧೆ ಅವರನ್ನು ವಿನಂತಿಸಿದ್ದಾರೆ.
#Watch | The bus driver has made a heartfelt request to @CMOMaharashtra about the problems of #potholes and #trafficjams on the roads of #Thane district.
#Bhiwandi #Kalyan #Mumbai #cmeknathshinde #eknathshindeCM #maharashtrarains #mumbairains #thanerains #MumbaiMonsoon #mumba pic.twitter.com/tpitg9tlUQ
— Free Press Journal (@fpjindia) July 13, 2022
ಈ ವಿಡಿಯೋಗೆ ಪ್ರತಿಕ್ರಿಯಿಸಿದ ಟ್ವಿಟ್ಟರ್ ಬಳಕೆದಾರರಾದ ಸುನಿಲ್ ಭಾವ್ಸರ್ ಕೂಡ ಕೂಡಲೇ ಗುಂಡಿಗಳನ್ನು ತುಂಬುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.