ತೆಲಂಗಾಣ: ತೆಲಂಗಾಣ ಮಹಬೂಬ್ನಗರ ಜಿಲ್ಲೆಯಲ್ಲಿ 25 ಶಾಲಾ ಮಕ್ಕಳಿದ್ದ ಶಾಲಾ ಬಸ್ವೊಂದು ಅಂಡರ್ ಬೈಪಾಸ್ನಲ್ಲಿ ಸಂಗ್ರಹವಾಗಿದ್ದ ಮಳೆ ನೀರಿನಲ್ಲಿ ಸಿಲುಕಿಕೊಂಡಿದ್ದು, ಇದನ್ನು ಕಂಡ ಸ್ಥಳೀಯರು ಎಲ್ಲಾ ಮಕ್ಕಳನ್ನು ರಕ್ಷಿಸಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಮಾಚನಪಲ್ಲಿ ಮತ್ತು ಕೋಡೂರಿನ ನಡುವೆ ಈ ಘಟನೆ ನಡೆದಿದೆ. ಇಲ್ಲಿ ರೈಲ್ವೆಯ ಕೆಳ ಸೇತುವೆ ಕಾಮಗಾರಿ ನಡೆಯುತ್ತಿದೆ. ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಕಾರಣ, ಮಳೆ ನೀರು ಅಂಡರ್ ಬೈಪಾಸ್ನಲ್ಲಿ ಶೇಖರಣೆಯಾಗಿತ್ತು.
ಇದನ್ನರಿಯದ ಖಾಸಗಿ ಶಾಲೆಯೊಂದರ ಬಸ್ ರೈಲು ಸೇತುವೆಯ ಕೆಳಗೆ ಹಾದು ಹೋಗುವ ವೇಳೆ ಅಲ್ಲೇ ಸಿಲುಕಿಕೊಂಡಿದೆ. ಬಸ್ಸಿನೊಳಗೆ ನೀರು ನುಗ್ಗಿ ವಾಹನದ ಅರ್ಧದಷ್ಟು ಭಾಗ ಮುಳುಗಿದ್ದನ್ನು ಕಂಡ ಸ್ಥಳೀಯರು ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ.
#WATCH | Telangana: A school bus, carrying 30 students, was partially submerged in a flooded street in Mahbubnagar today. The students were rescued by the locals. The bus was later brought out of the spot. pic.twitter.com/7OOUm8as0v
— ANI (@ANI) July 8, 2022
ರಾಜ್ಯದ ‘ನಿವೃತ್ತ ಸರ್ಕಾರಿ ನೌಕರ’ರಿಗೆ ಭರ್ಜರಿ ಗುಡ್ ನ್ಯೂಸ್: ಸರ್ಕಾರದಿಂದ ‘ಆರೋಗ್ಯ ವಿಮೆ ಯೋಜನೆ’ ವಿಸ್ತರಣೆ