ಮಧ್ಯಪ್ರದೇಶ: ಮಧ್ಯಪ್ರದೇಶದ ಛತ್ತರ್ಪುರದ ಬಮಿತಾ ಪೊಲೀಸ್ ಠಾಣೆಯ ಸಹಾಯಕ ಸಬ್-ಇನ್ಸ್ಪೆಕ್ಟರ್ ಅನಿಲ್ ಶರ್ಮಾ 17 ವರ್ಷದ ಬಾಲಕಿಯ ಹತ್ಯೆ ಪ್ರಕರಣದ ಆರೋಪಿ ಪತ್ತೆಯ ಸಹಾಯಕ್ಕಾಗಿ ಸ್ವಯಂ ಘೋಷಿತ ‘ಬಾಬಾ’ ಪಾಂಡೋಖರ್ ಸರ್ಕಾರ್ ಮೊರೆ ಹೋಗಿದ್ದ ವಿಡಿಯೋ ವೈರಲ್ ಆಗಿದ್ದು, ಇದೀಗ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಪಾಂಡೋಖರ್ ಸರ್ಕಾರ್ ಅವರು ಕೆಲವು ಜನರ ಹೆಸರನ್ನು ಕರೆದಿವುದನ್ನು ಕೇಳಬಹುದು. ಪ್ರಮುಖ ಶಂಕಿತ ವ್ಯಕ್ತಿ ಮಜ್ಗುವಾನ್ ಪ್ರದೇಶದವನಾಗಿದ್ದಾನೆ ಎಂದು ಹೇಳುವುದು ಕೇಳಿಬಂದಿದೆ.
In a bid to identify the suspect in the death of a 17-year-old girl,ASI Anil Sharma from Chhatarpur reached out to Pandokhar Sarkar, he could be heard saying he has called out the names of a few people the name he missed will lead them to the suspect @ndtv @ndtvindia pic.twitter.com/u2RrpaLuYG
— Anurag Dwary (@Anurag_Dwary) August 19, 2022
ಈ ವೈರಲ್ ವೀಡಿಯೊದ ನಂತರ, ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಶರ್ಮಾ ಅವರು ಅನಿಲ್ ಶರ್ಮಾ ಮತ್ತು ಬಮಿತಾ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಪಂಕಜ್ ಶರ್ಮಾ ಅವರನ್ನು ಅಮಾನತುಗೊಳಿಸಿದ್ದಾರೆ.
ಜುಲೈ 28 ರಂದು ಓಟಪೂರ್ವ ಗ್ರಾಮದ ಬಾವಿಯಲ್ಲಿ 17 ವರ್ಷದ ಬಾಲಕಿಯ ಶವ ಪತ್ತೆಯಾಗಿತ್ತು. ಈ ಸಂಬಂಧ ಬಾಲಕಿಯ ಸಂಬಂಧಿಕರು ಗ್ರಾಮಸ್ಥರಾದ ರವಿ ಅಹಿರ್ವಾರ್, ಗುಡ್ಡ ಅಲಿಯಾಸ್ ರಾಕೇಶ್ ಅಹಿರ್ವಾರ್, ಅಮನ್ ಅಹಿರ್ವಾರ್ ಅವರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಬಾಲಕಿಯ ಕುಟುಂಬದವರ ದೂರಿನ ಮೇರೆಗೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಓಟಪೂರ್ವ ಗ್ರಾಮದ ಮೂವರನ್ನು ವಶಕ್ಕೆ ಪಡೆದಿದ್ದರು. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅವರನ್ನು ಹೊರಗೆ ಬಿಡಲಾಯಿತು.
ಕೆಲವು ದಿನಗಳ ನಂತರ, ಪೊಲೀಸರು ಇದ್ದಕ್ಕಿದ್ದಂತೆ ಅಪ್ರಾಪ್ತ ಬಾಲಕಿಯ ಚಿಕ್ಕಪ್ಪ ತಿರತ್ ಅಹಿರ್ವಾರ್ ಅವರನ್ನು ಬಂಧಿಸಿದರು. ಈತ, ಬಾಲಕಿ ಯಾರೊಂದಿಗಾದರೂ ಅಕ್ರಮ ಸಂಬಂಧವನ್ನು ಹೊಂದಿದ್ದಾಳೆಂದು ಅನುಮಾನಗೊಂಡು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ನಂತರ ಶವವನ್ನು ಬಾವಿಗೆ ಎಸೆದಿದ್ದಾನೆ. ಹತ್ಯೆಗೀಡಾದ ಬಾಲಕಿಯ ಕುಟುಂಬ ಸದಸ್ಯರು ಈ ಬಂಧನ ಮತ್ತು ತನಿಖೆಯನ್ನು ನಿರ್ವಹಿಸುತ್ತಿರುವ ರೀತಿಯಿಂದ ಆಶ್ಚರ್ಯಚಕಿತರಾದರು. ಈ ನಡುವೆ ‘ಬಾಬಾ’ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಲಕಿ ಹತ್ಯೆಯ ತನಿಖೆಗೆ ತಂಡವನ್ನು ರಚಿಸಲಾಗಿದೆ. ಉಪವಿಭಾಗೀಯ ಪೊಲೀಸ್ ಅಧಿಕಾರಿ ಮನಮೋಹನ್ ಸಿಂಗ್ ಬಘೇಲ್ ಅವರಿಗೆ ಹೆಚ್ಚಿನ ತನಿಖೆ ನಡೆಸುವ ಜವಾಬ್ದಾರಿಯನ್ನು ನೀಡಲಾಗಿದೆ.
Watch: ರಿಪೇರಿ ವೇಳೆ ಮೊಬೈಲ್ ಫೋನ್ ಬ್ಯಾಟರಿ ಸ್ಫೋಟ; ವೈರಲ್ ಆದ ವಿಡಿಯೋ
BIGG NEWS: ನಡುರಸ್ತೆಯಲ್ಲೇ ಯುವತಿಯೊಬ್ಬಳ ರಂಪಾಟ; ಕುಡಿದ ಅಮಲಿನಲ್ಲಿ ಕೈ ಕತ್ತರಿಸಿಕೊಂಡ ಹುಚ್ಚು ಹುಡುಗಿ