ನಾಗ್ಪುರ: ನಾಗ್ಪುರದ ಸವ್ನೆರ್ ತೆಹ್ಸಿಲ್ನಲ್ಲಿ ಭಾರೀ ಮಳೆಯಿಂದಾಗಿ ಎಲ್ಲಾ ಹಳ್ಳ, ನದಿಗಳು ಮೈದುಂಬಿ ಹರಿಯುತ್ತಿವೆ. ಈ ನಡುವೆ ಹೊಳೆಯ ಸೇತುವೆ ದಾಟುವಾಗ ಕಾರು ಕೊಚ್ಚಿಹೋದ ಪರಿಣಾಮ ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.
ಎಂಟು ಮಂದಿ ಪ್ರಯಾಣಿಕರಿದ್ದ ಎಸ್ಯುವಿ ಎರಡೂ ಬದಿಯಲ್ಲಿ ರೇಲಿಂಗ್ಗಳಿಲ್ಲದ ಸೇತುವೆಯನ್ನು ದಾಟುತ್ತಿತ್ತು. ಸೇತುವೆಯ ಮೇಲೆ ರಭಸವಾಗಿ ಹರಿಯುತ್ತಿದ್ದ ನೀರು ವಾಹನವನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಿದೆ. ಕೊಚ್ಚಿ ಹೋದ ಕಾರಿನಿಂದ ಇಬ್ಬರು ಪ್ರಯಾಣಿಕರು ಈಜಿಕೊಂಡು ದಡ ಸೇರಿದ್ದಾರೆ. ಆದ್ರೆ, ಇನ್ನೂ ಮೂವರು ಹೊರಗೆ ಬರಲಾಗದೇ, ಕಾರಿನಲ್ಲೇ ಸಿಲುಕಿದ ಪರಿಣಾಮ ಅಲ್ಲೇ ಸಾವಿಗೀಡಾಗಿದ್ದು, ಇನ್ನೂ ಮೂವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
View this post on Instagram
ಸಾವಿಗೀಡಾದವರು ಮಧ್ಯಪ್ರದೇಶದ ಮುಲ್ತಾಯಿ ಮೂಲದವರು. ಇವರು ಮದುವೆ ಸಮಾರಂಭದಲ್ಲಿ ಭಾಗವಹಿಸಲು ನಾಗ್ಪುರಕ್ಕೆ ಬಂದಿದ್ದರು. ನಂತ್ರ ಮನೆಗೆ ಮರಳುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಮೃತರನ್ನು ರೋಶನಿ ಚೌಕಿದಾರ್ (32), ದರ್ಶ್ ಚೌಕಿದಾರ್ (10) ಮತ್ತು ಎಸ್ಯುವಿ ಚಾಲಕ ಲೀಲಾಧರ್ ಹಿವಾರೆ (38) ಎಂದು ಗುರುತಿಸಲಾಗಿದೆ. ಮಧುಕರ್ ಪಾಟೀಲ್ (65), ನಿರ್ಮಲಾ (60) ಮತ್ತು ನೀಮು ಆಟ್ನರ್ (45) ನಾಪತ್ತೆಯಾದವರು.
ಜೂನ್ 1 ರಿಂದ ಜುಲೈ 10 ರ ನಡುವೆ ಮಹಾರಾಷ್ಟ್ರದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ 83 ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೋಮವಾರ ವರದಿಯಲ್ಲಿ ತಿಳಿಸಿದೆ.
Breaking news: ಪಿಟ್ಕೈರ್ನ್ ದ್ವೀಪಗಳಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ: NSC ಮಾಹಿತಿ