ಉತ್ತರ ಪ್ರದೇಶ : ಉತ್ತರ ಪ್ರದೇಶದ ಬಿಜೆಪಿ ಮುಖಂಡರೊಬ್ಬರ ಮಗ ಹಾಗೂ ನೆರೆಯ ಮಕ್ಕಳು ಕಳ್ಳ- ಪೊಲೀಸ್ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ದುರಂತವೊಂದು ನಡೆದಿದೆ.
ಬಿಜೆಪಿ ಮುಖಂಡರ ಮಗ ಆಟದ ವೇಳೆ ಲೈಸೆನ್ಸ್ ಇರುವ ರಿವಾಲ್ವರ್ ಹಿಡಿದು ಪಕ್ಕದ ಮನೆಯ ಬಾಲಕನಿಗೆ ಗುಂಡು ಹಾರಿಸಿದ್ದು, ಆತ ಸಾವನ್ನಪ್ಪಿರುವ ಘಟನೆ ಇಲ್ಲಿನ ಕೌಶಂಬಿ ಜಿಲ್ಲೆಯ ಕರಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ನಡೆದಿದೆ.
ಏನಿದು ಘಟನೆ?
ಪೊಲೀಸರ ಪ್ರಕಾರ, ಶನಿವಾರ ಸಂಜೆ ಇಲ್ಲಿ ಮಕ್ಕಳು ಕಳ್ಳ- ಪೊಲೀಸ್ ಆಟವಾಡುತ್ತಿದ್ದರು. ಬಿಜೆಪಿ ಮುಖಂಡದ 10 ವರ್ಷದ ಮಗ ತಮ್ಮ ಮನೆಯಲ್ಲಿದ್ದ ಲೈಸೆನ್ಸ್ ಇರುವ ರಿವಾಲ್ವರ್ ಹಿಡಿದು ಆಟಕ್ಕೆಂದು ಬಳಸಿದ್ದ. ಈ ವೇಳೆ ಆಟದಲ್ಲಿ ಪಕ್ಕದ ಮನೆಯ ಬಾಲಕನನ್ನು ಕಳ್ಳ ಎಂದು ಭಾವಿಸಿ ರಿವಾಲ್ವರ್ನ ಟ್ರಿಗರ್ ಅದುಮಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ಗುಂಡು ಸಿಡಿದು ಪಕ್ಕದ ಮನೆಯ ಬಾಲಕನಿಗೆ ತಗುಲಿದ ಪರಿಣಾಮ, ಆತ ಅಲ್ಲೇ ಸಾವನ್ನಪ್ಪಿದ್ದಾನೆ.
ಇದೀಗ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಬಗ್ಗೆ ದೂರು ಬಂದ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
BIGG NEWS : ಕೊಡಗು ವೈದ್ಯಕೀಯ ಸಂಸ್ಥೆಯ 46 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢ!