ಉತ್ತರಪ್ರದೇಶ : ಫೆಬ್ರುವರಿ 27 ರಂದು ನಡೆದ ರಾಜ್ಯ ಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಹಿನ್ನೆಲೆಯಲ್ಲಿ ಇದೀಗ ಉತ್ತರಪ್ರದೇಶದ ಸಮಾಜವಾದಿ ಪಾರ್ಟಿಯ ನಾಲ್ವರು ಶಾಸಕರಿಗೆ ವೈ ಕೆಟಗರಿ ಭದ್ರತೆಯನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
‘ಮೇಕೆದಾಟನ್ನು’ ಮಾನವೀಯತೆ ದೃಷ್ಟಿಯಿಂದ ನೋಡುವಂತೆ ಒತ್ತಾಯ : ಮೋದಿಗೆ ಪತ್ರ ಬರೆದ HD ದೇವೇಗೌಡ
ಅಭಯ್ ಸಿಂಗ್ (ಗೋಸೈಗಂಜ್), ಮನೋಜ್ ಕುಮಾರ್ ಪಾಂಡೆ (ಉಂಚಹರ್), ರಾಕೇಶ್ ಪ್ರತಾಪ್ ಸಿಂಗ್ (ಗೌರಿಗಂಜ್) ಮತ್ತು ವಿನೋದ್ ಚತುರ್ವೇದಿ (ಕಲ್ಪಿ) ಶಾಸಕರು ವೈ-ಕೆಟಗರಿ ಭದ್ರತೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.ವೈ-ಕೆಟಗರಿ ಭದ್ರತೆಯ ಭಾಗವಾಗಿ ಎಂಟು ಸಿಆರ್ಪಿಎಫ್ ಸಿಬ್ಬಂದಿ ಈ ಶಾಸಕರ ಕಾವಲು ಕಾಯಲಿದ್ದಾರೆ. ಐವರು ಸಿಬ್ಬಂದಿಯು ಶಾಸಕರ ನಿವಾಸದಲ್ಲಿ ಕಾವಲಾಗಿರುತ್ತಾರೆ. ಉಳಿದವರು ಶಾಸಕರೊಂದಿಗೆ ಪ್ರಯಾಣಿಸುತ್ತಾರೆ.
BREAKING: ‘ನೀತಿ ಸಂಹಿತೆ ಉಲ್ಲಂಘನೆ’ ಆರೋಪ: ‘ಸಂಸದ ಬಿ.ವೈ ರಾಘವೇಂದ್ರ’ ವಿರುದ್ಧ ‘FIR’ ದಾಖಲು
ಈ ನಾಲ್ವರು ಶಾಸಕರು ಹಾಗೂ ಇತರ ಮೂರು ಪಕ್ಷದ ಶಾಸಕರಾದ ಪೂಜಾ ಪಾಲ್, ರಾಕೇಶ್ ಪಾಂಡೆ ಮತ್ತು ಅಶುತೋಷ್ ಮೌರ್ಯ, ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಡ್ಡ ಮತದಾನ ಮಾಡಿದ್ದರು. ಕೇಸರಿ ಪಕ್ಷದ ಅಭ್ಯರ್ಥಿ ಸಂಜಯ್ ಸೇಠ್ ಅವರಿಂದ, ಸಮಾಜವಾದಿ ಪಕ್ಷದ ಅಭ್ಯರ್ಥಿ ಅಲೋಕ್ ರಂಜನ್ ಸೋಲಿಗೆ ಈ ಬೆಳವಣಿಗೆ ಕಾರಣವಾಯಿತು.